ಕೈಗಳು ವಿವಿಧ ಮೇಲ್ಮೈಗಳನ್ನು ಆಗಾಗ ಸ್ಪರ್ಶಿಸುವುದರಿಂದ ಮುಂಗೈಯನ್ನು ಸ್ವಚ್ಛಗೊಳಿಸುವುದು ಮುಖ್ಯ. ಇದಕ್ಕಾಗಿ ಆಲ್ಕೊಹಾಲ್ ಆಧರಿತ ಸ್ಯಾನಿಟೈಸರ್ ಬಳಕೆ ಮಾಡಬೇಕು. ಆದರೆ ನೀರು ಮತ್ತು ಸೋಪ್ ಬಳಸಿ ಕೈ ತೊಳೆಯುವುದು ಕೂಡ ಅಷ್ಟೇ ಪರಿಣಾಮಕಾರಿ ಎಂಬುದನ್ನು ಡಬ್ಲೂ.ಎಚ್.ಒ. ಒತ್ತಿ ಒತ್ತಿ ಹೇಳುತ್ತ ಬಂದಿದೆ.

ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಹ್ಯಾಂಡ್ ಸ್ಯಾನಿಟೈಸರ್ಗಳೆಲ್ಲ ಆಲ್ಕೊಹಾಲ್ ಪದಾರ್ಥ ಒಳಗೊಂಡಿವೆ. ಈ ಆಲ್ಕೊಹಾಲ್ ಆಧರಿತ ಸ್ಯಾನಿಟೈಸರ್ ಬಳಸುವವರು ಈ ಕೆಳಗಿನ ಅಂಶಗಳನ್ನು ಗಮನಿಸಿ, ಪಾಲಿಸವುದು ಸೂಕ್ತ.

  1. ಮಕ್ಕಳಿಂದ ಸ್ಯಾನಿಟೈಸರ್ಗಳನ್ನು ದೂರವಿಡಿ. ಸ್ಯಾನಿಟೈಸರ್ ಬಳಸುವುದನ್ನು ಅವರಿಗೆ ಕಲಿಸಿಕೊಡಿ ಮತ್ತು ಅವರು ಬಳಸುವಾಗ ಅದನ್ನು ನೀವು ಗಮನಿಸಿ ನಿಗಾ ವಹಿಸಿ.
  2. ಕೈಯಲ್ಲಿ ಒಂದು ಸಣ್ಣ ನಾಣ್ಯದಷ್ಟು ಸ್ಯಾನಿಟೈಸರ್ ಹಾಕಿಕೊಂಡು ಲೇಪಿಸಿಕೊಂಡರೆ ಸಾಕು. ಹೆಚ್ಚಿನ ಪ್ರಮಾಣದಲ್ಲೇನೂ ಅಗತ್ಯವಿಲ್ಲ.
  3. ಸ್ಯಾನಿಟೈಸರ್ ಲೇಪಿಸಿಕೊಂಡ ಕೆಲವು ನಿಮಿಷದವರೆಗೆ ಕೈಗಳಿಂದ ನಿಮ್ಮ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ. ಹಾಗೆ ಮಾಡಿದರೆ ಅದು ತುರಿಕೆಗೆ, ಉರಿತಕ್ಕೆ ಕಾರಣವಾಗಬಹುದು. ಕೆಲವರಿಗೆ ಇನ್ಫೆಕ್ಷನ್ ಕೂಡ ಆಗಬಹುದು.
  4. ಸ್ಯಾನಿಟೈಸರ್ಗಳು ಆಲ್ಕೊಹಾಲ್ ಹೊಂದಿರುವುದರಿಂದ ದಹಿಸುವ ಗುಣ ಹೊಂದಿವೆ. ಹೀಗಾಗಿ ಬೆಂಕಿ ಬಳಸುವ (ಸ್ಟೋವ್ ಹಚ್ಚುವುದು, ದೀಪ ಹಚ್ಚುವುದು ಮತ್ತು ಊದಿನಕಡ್ಡಿ ಹಚ್ಚುವುದು) ಮುನ್ನ ಸ್ಯಾನಿಟೈಸರ್ ಲೇಪನ ಬೇಡ. ಹಾಗೆಯೇ ಅಡುಗೆ ಮಾಡುವ ಮುನ್ನವೂ ಬೇಡ. ಬೆಂಕಿ ಕೈಗೆ ತಾಗುವ ಸಾಧ್ಯತೆಗಳಿರುತ್ತವೆ.
  5. ಯಾವ ಸಂದರ್ಭದಲ್ಲೂ ಸ್ಯಾನಿಟೈಸರ್ ಕುಡಿಯಬೇಡಿ. (ಕೆಲವು ಕಡೆ ಇಂತಹ ಪ್ರಕರಣ ಸಂಭವಿಸಿ ಜೀವಕ್ಕೂ ಕುತ್ತು ಬಂದಿದೆ) . ಈ ವಿಷಯದಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಿ.
  6. ಅಂತಿಮವಾಗಿ, ನೀರು, ಸೋಪ್ ಬಳಸಿ ಕೈ ತೊಳೆಯುವುದು ಕೂಡ ಸ್ಯಾನಿಟೈಸರ್ ಬಳಸಿದಷ್ಟೇ ಪರಿಣಾಮಕಾರಿ.
Leave a Reply

Your email address will not be published. Required fields are marked *

You May Also Like

ಡ್ರೈವರ್ ಕಂಡಕ್ಟರ್ ಗಳ ನಿತ್ಯ ಶೋಷಣೆಗೆ ಮುಕ್ತಿ ಎಂದು?

ಕೆಎಸ್ಆರ್ಟಿಸಿ ಚಾಲಕ ಹಾಗೂ ನಿರ್ವಾಹಕರು ಕೊರೋನಾ ವಾರಿಯರ್ಸ್ ಎಂದು ಬಾಯಿ ಮಾತಿಂದ ಹೇಳಿದರೆ ಸಾಲದು. ಪಾಪ..!, ಅವರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸುವ ಅವಶ್ಯಕತೆ ಇದೆ.

ಆಮ್ಲಜನಕ ಪೂರೈಸುವಲ್ಲಿ ಸರ್ಕಾರ ಸಮರ್ಥವಿದೆ : ಸಚಿವ ಸುಧಾಕರ್

ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಸುವಲ್ಲಿ ನಮ್ಮ ಸರ್ಕಾರ ಸಮರ್ಥವಿದೆ. ಈಗಾಗಲೇ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

2020ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-2020’ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು…

ಡೆಂಜರ್ ಝೋನ್ ನಲ್ಲಿ ಭಯಾನಕ ಘಟನೆ: ಕಿಟ್ ಗಾಗಿ ಮಗ್ಗರಿಸಿ ಬಿದ್ದ ಮಹಿಳೆಯರು

ಆಹಾರ ಕಿಟ್ ಪಡೆಯಲು ಹೋದ ಮಹಿಳೆಯರು ಮಗ್ಗರಿಸಿ ಬಿದ್ದಿದ್ದಾರೆ. ನಿಜಕ್ಕೂ ಇದು ಭಯಾನಕ ಘಟನೆ. ಕೊರೋನಾ ಕರಾಳ ಛಾಯೆಯ ಲಕ್ಷಣವೇ ಸರಿ.