ಬೆಂಗಳೂರು: ರಾಜ್ಯದಲ್ಲಿಂದು 2798 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36216 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 880. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 14716 ಕೇಸ್ ಗಳು. ರಾಜ್ಯದಲ್ಲಿ 20883 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ 70 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 613 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.
ಈ ವಾರ ಪ್ರತಿದಿನ 1,500 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸತತ 3 ದಿನದಿಂದ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ದಾಟುತ್ತಿದ್ದು ಇಂದು ಶನಿವಾರ 2798 ಪ್ರಕರಣಗಳು ದಾಖಲಾಗಿದ್ದು, ರಾಜ್ಯ ಸರ್ಕಾರ ನಿಯಂತ್ರಣದ ವಿಷಯದಲ್ಲಿ ನಿರ್ದಿಷ್ಟ ರೂಪುರೇಷೆ, ಕಾರ್ಯಸೂಚಿ, ಸಮನ್ವಯತೆ ಹೊಂದಿಲ್ಲದಿರುವುಕ್ಕೆ ಇದು ಸಾಕ್ಷಿಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು
ಬೆಂಗಳೂರು ನಗರ- 1533
ದಕ್ಷಿಣ ಕನ್ನಡ-186
ಉಡುಪಿ-90
ಮೈಸೂರು-83
ತುಮಕೂರು-78
ಧಾರವಾಡ-77
ಯಾದಗಿರಿ-74
ದಾವಣಗೆರೆ-72
ಕಲಬುರಗಿ-65
ಬಳ್ಳಾರಿ-65
ಬೀದರ್-63
ವಿಜಯಪುರ-48
ಉತ್ತರ ಕನ್ನಡ-40
ಗದಗ-40
ಬಾಗಲಕೋಟೆ-37
ಹಾಸನ-34
ರಾಮನಗರ-30
ಶಿವಮೊಗ್ಗ-26
ಮಂಡ್ಯ-23
ಕೊಪ್ಪಳ-23
ಚಿಕ್ಕಬಳ್ಳಾಪುರ-20
ಚಾಮರಾಜನಗರ-17
ಹಾವೇರಿ-16
ರಾಯಚೂರು-14
ಕೋಲಾರ-12
ಕೊಡಗು-12
ಚಿತ್ರದುರ್ಗ-09
ಬೆಂಗಳೂರು ಗ್ರಾಮಾಂತರ-05
ಬೆಳಗಾವಿ-03
ಚಿಕ್ಕಮಗಳೂರು-03

Leave a Reply

Your email address will not be published. Required fields are marked *

You May Also Like
ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಅರುಣಕುಮಾರ ಮ ನರಗುಂದ. ಇವರು ವೃತ್ತಿಯಲ್ಲಿ ಹಿರೇಕೆರೂರಿನಲ್ಲಿ ನ್ಯಾಯಾಂಗ ಇಲಾಖೆಯ ನೌಕರ. ವೃತ್ತಿ ನ್ಯಾಯಾಂಗ ಇಲಾಖೆ ಆದರೆ ಸಾಹಿತ್ಯ ಕೃಷಿ ಇವರ ಪ್ರವೃತ್ತಿ.

ಕತ್ತಿ ವರಸೆಗೆ ಶಾಕ್ ಕೊಟ್ರು ಸಿಎಂ..!

ಇತ್ತೀಗಷ್ಟೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಶಾಸಕ ಉಮೇಶ್ ಕತ್ತಿ, ಡಿನ್ನರ್ ಪಾಲಿಟಿಕ್ಸ್ ನಡೆಸಿದ್ರು. ಇದರಲ್ಲಿ ಕೆಲವು ಅತೃಪ್ತ ಶಾಸಕರು ಭಾಗವಹಿಸಿದ್ದು ಬಿಜೆಪಿಯಲ್ಲಿ ಕುಚ್… ಕುಚ್ ಹೋ ರಹಾ ಹೈ ಎಂಬ ಚರ್ಚೆಗೆ ಮುನ್ನುಡಿ ಬರೆದಿತ್ತು. ಉಮೇಶ್ ಕತ್ತಿ ಮನೆಯಲ್ಲಿ ಶೀಕರಣಿ ಊಟದ ರಾಜಕಾರಣದ ಬೆನ್ನಲ್ಲೆ ಸಿಎಂ ಬಿಎಸ್ವೈ ಪರ ಹಾಗೂ ವಿರೋಧ ಚರ್ಚೆಗಳು ನಡೆದವು. ಇದು ಸ್ವತ: ಸಿಎಂ ಯಡಿಯೂರಪ್ಪ ಅವರಿಗೂ ಮುಜುಗುರ ತಂದಿರಬಹುದು. ಆದರೆ ಬಿಎಸ್ವೈ ಹೈಕಮಾಂಡ್ ಮಟ್ಟದಲ್ಲಿ ಇನ್ನು ಪವರ್ ಫುಲ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೇ ಸಾಕ್ಷಿಯಾಗಿದೆ.

ಅ.25ರಂದು ನೀಲಾನಗರ ದುರ್ಗಾದೇವಿ ಜಾತ್ರೆ ಸರಳವಾಗಿ ಆಚರಣೆ

ಸಮೀಪ ನೀಲಾನಗರದ ದುರ್ಗಾದೇವಿ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಬಂಜಾರ ಪೀಠಾಧಿಪತಿ ಕುಮಾರ ಮಹಾರಾಜ ತಿಳಿಸಿದರು.

ಕೆಪಿಎಸ್ಇ ಪರೀಕ್ಷೆ ಬರೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಈಗಾಗಲೇ ಜನೇವರಿ ತಿಂಗಳಲ್ಲೆ ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯ (ಕೆಪಿಎಸ್ಇ) ಪರೀಕ್ಷೆಯನ್ನು ಫೆ.28ಕ್ಕೆ ನಿಗಧಿ ಪಡಿಸಲಾಗಿದೆ.