ಬೆಂಗಳೂರು: ರಾಜ್ಯದಲ್ಲಿಂದು 2798 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36216 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 880. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 14716 ಕೇಸ್ ಗಳು. ರಾಜ್ಯದಲ್ಲಿ 20883 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ 70 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 613 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.
ಈ ವಾರ ಪ್ರತಿದಿನ 1,500 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸತತ 3 ದಿನದಿಂದ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ದಾಟುತ್ತಿದ್ದು ಇಂದು ಶನಿವಾರ 2798 ಪ್ರಕರಣಗಳು ದಾಖಲಾಗಿದ್ದು, ರಾಜ್ಯ ಸರ್ಕಾರ ನಿಯಂತ್ರಣದ ವಿಷಯದಲ್ಲಿ ನಿರ್ದಿಷ್ಟ ರೂಪುರೇಷೆ, ಕಾರ್ಯಸೂಚಿ, ಸಮನ್ವಯತೆ ಹೊಂದಿಲ್ಲದಿರುವುಕ್ಕೆ ಇದು ಸಾಕ್ಷಿಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು
ಬೆಂಗಳೂರು ನಗರ- 1533
ದಕ್ಷಿಣ ಕನ್ನಡ-186
ಉಡುಪಿ-90
ಮೈಸೂರು-83
ತುಮಕೂರು-78
ಧಾರವಾಡ-77
ಯಾದಗಿರಿ-74
ದಾವಣಗೆರೆ-72
ಕಲಬುರಗಿ-65
ಬಳ್ಳಾರಿ-65
ಬೀದರ್-63
ವಿಜಯಪುರ-48
ಉತ್ತರ ಕನ್ನಡ-40
ಗದಗ-40
ಬಾಗಲಕೋಟೆ-37
ಹಾಸನ-34
ರಾಮನಗರ-30
ಶಿವಮೊಗ್ಗ-26
ಮಂಡ್ಯ-23
ಕೊಪ್ಪಳ-23
ಚಿಕ್ಕಬಳ್ಳಾಪುರ-20
ಚಾಮರಾಜನಗರ-17
ಹಾವೇರಿ-16
ರಾಯಚೂರು-14
ಕೋಲಾರ-12
ಕೊಡಗು-12
ಚಿತ್ರದುರ್ಗ-09
ಬೆಂಗಳೂರು ಗ್ರಾಮಾಂತರ-05
ಬೆಳಗಾವಿ-03
ಚಿಕ್ಕಮಗಳೂರು-03

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯ ನಾಲ್ಕು ಕಂಟೇನ್ಮೆಂಟ್ ಪ್ರದೇಶಗಳ ನಿರ್ಬಂಧ ತೆರವು

ಗದಗ: ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿ ಗ್ರಾಮದ ವಾರ್ಡ ನಂ. 4ರ ಎರಡು ಪ್ರದೇಶಗಳನ್ನು, ಲಕ್ಷ್ಮೇಶ್ವರ…

ಕೋಮು ಸೌಹಾರ್ದತೆ ಮತ್ತು ಅಜ್ಜನವರು

ಕೋಮುವಾದ ಈಗ ಇದೊಂದು ವಿಚಿತ್ರ ಶಬ್ದ. ಸೌಹಾರ್ದತೆಯ ಹುಡುಕಾಟ ಅನಿವಾರ್ಯವಾದ ಕಾಲ.

ರಾಜ್ಯದಲ್ಲಿ ಕೋವಿಡ್ ಕರ್ಪ್ಯೂ! ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳೇನು?

ಈಗಾಗಲೇ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಲಾಕ್ ಡೌನ್ ಮಾದರಿಯಲ್ಲೆ ರಾಜ್ಯ ಸರ್ಕಾರ ಕೋವಿಡ್ ಕರ್ಪ್ಯೂ ಘೋಷಿಸಿದೆ. ಸಚಿವ ಸಂಪುಟದಲ್ಲಿ ಈ ನಿರ್ಧಾರ ತೆಗೆದುಕೊಂಡು ಇನ್ನು ಹಲವು ನಿರ್ಧಾರಗಳನ್ನು ಸಂಪುಟ ಸಭೆಯಲ್ಲಿ ಸರ್ಕಾರ ತೆಗೆದುಕೊಂಡಿದೆ.

ಅತಿ ವೇಗವಾಗಿ ಹರಡುತ್ತಿದೆ ಡೆಲ್ಟಾ ವೈರಸ್ : WHO ನಿರ್ದೇಶಕ ಟೆಡ್ರೊಸ್!

ಡೆಲ್ಟಾ ವೈರಸ್ ನಿಂದ ಸಾರ್ವಜನಿಕರ ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿದೆ. ಹಾಗಾಗಿ ಕಡಿಮೆ ಲಸಿಕೆ ನೀಡಿರುವ ರಾಷ್ಟ್ರಗಳಲ್ಲಿ ಆರೋಗ್ಯ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಹಾಗೂ ಯಾವ ದೇಶದಲ್ಲೂ ಕೂಡ ಸಂಪೂರ್ಣವಾಗಿ ಸೊಂಕು ನಿವಾರಣೆಯಾಗಿಲ್ಲ ಎಂದು ಹೇಳಿದ ಟೆಡ್ರೊಸ್, ಈ ಸೋಂಕನ್ನು ತಡೆದು ಹಾಕಲು ಇಡೀ ಪ್ರಪಂಚವೇ ಒಟ್ಟಾಗಿ ಸೋಂಕಿನ ವಿರುದ್ಧ ಹೋರಾಡಬೇಕಿದೆ‌. ನಾವು ಕೋವಿಡ್ ಮತ್ತು ಡೆಲ್ಟಾ ಇವೆರಡರ ಮಧ್ಯೆ ಸಿಲುಕಿ ಕೊಂಡಿದ್ದೇವೆ ಹಾಗಾಗಿ ಎಚ್ಚರದಿಂದಿರಬೇಕಿದೆ ಎಂದು ಟೆಡ್ರೊಸ್ ಹೇಳಿಕೆ ನೀಡಿದ್ದಾರೆ.