ನವದೆಹಲಿ: ಮೂರು ದಿನದ ಹಿಂದಷ್ಟೇ ದೇಶದಲ್ಲಿ 7 ಲಕ್ಷ ದಾಟಿದ್ದ ಕೋರೊನಾ ಸೋಂಕಿತರ ಸಂಖ್ಯೆ ಈಗ 8 ಲಕ್ಚ ದಾಟಿದೆ. ಸದ್ಯ 8,22,603 ಸೋಂಕಿತರಿದ್ದು, 22,144 ಸಾವು ಸಂಭವಿಸಿವೆ.

6 ಲಕ್ಷದಿಂದ 7 ಲಕ್ಷ ತಲುಪಲು 4 ದಿನ ತಗುಲಿದ್ದರೆ, 7ರಿಂದ 8 ಲಕ್ಷ ತಲುಪಲು ಮೂರೇ ದಿನ ಸಾಕಾಯ್ತು.

ಈ ಅಂಕಿಅಂಶ ಗಮನಿಸಿ: ಪ್ರತಿ ಲಕ್ಷ ಕೇಸ್ ದಾಖಲಾಗುವ ಅವಧಿ ಕಡಿಮೆಯಾಗುತ್ತ ಹೋಗಿದೆ. ಸದ್ಯ ಮೂರೇ ದಿನಕ್ಕೆ 1 ಲಕ್ಷ ಹೊಸ ಕೇಸು ದಾಖಲಾಗಿವೆ. ಇದೇ ಟ್ರೆಂಡ್ ಮುಂದುವರೆದರೆ ಇನ್ನು 3 ದಿನದಲ್ಲಿ ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಕೇಸ್ ದಾಖಲಾಗಲಿವೆ.

ಜನೇವರಿ 30: ದೇಶದಲ್ಲಿ ಮೊದಲ ಪಾಸಿಟಿವ್ ಪತ್ತೆ, ಚೀನಾದ ವುಹಾನ್ ಪ್ರಾಂತ್ಯದಲ್ಲಿ ಎಂ.ಬಿ.ಬಿ.ಎಸ್ ಓದುತ್ತಿದ್ದ ಕೇರಳದ ಯುವತಿಗೆ ಪಾಸಿಟಿವ್ ದೃಢಪಟ್ಟಿತ್ತು.

1 ಲಕ್ಷ ಕೇಸು: ಜನೇವರಿ 30ರ ನಂತರ 110 ದಿನದಲ್ಲಿ 1 ಲಕ್ಷ ಕೇಸುಗಳು.

ಜೂನ್ 13: ಹತ್ತೇ ದಿನದಲ್ಲಿ 3 ಲಕ್ಷ ತಲುಪಿತು.

ಜೂನ್ 21: 8 ದಿನದಲ್ಲಿ 4 ಲಕ್ಷ ತಲುಪಿತು.

ಜುಲೈ 2: 10 ದಿನದಲ್ಲಿ 2 ಲಕ್ಷ. 6 ಲಕ್ಷ ದಾಟಿತು.

ಜುಲೈ 7: 4 ದಿನದಲ್ಲಿ ಮತ್ತೆ 1 ಲಕ್ಷ. ಸೋಂಕಿತರ ಸಂಖ್ಯೆ 7 ಲಕ್ಷ ದಾಟಿತು.

ಜುಲೈ 10: ಮೂರೇ ದಿನದಲ್ಲಿ ಹೊಸ 1 ಲಕ್ಷ ಪಾಸಿಟಿವ್. 8 ಲಕ್ಷ ದಾಟಿದ ಸೋಂಕಿತರ ಸಂಖ್ಯೆ.

Leave a Reply

Your email address will not be published. Required fields are marked *

You May Also Like

ಡಿಸಿ ಹಿರೇಮಠ ಎದುರಿಗೊಂದು ಪ್ರಶ್ನೆ?: ಸಾವಿಗೆ ಕಾರಣ ಸೋಂಕೊ? ಶುಗರೋ?

ಬೆಳಗಾವಿ: ರಾಜ್ಯ ಹೆಲ್ತ್ ಬುಲೆಟಿನ್ ಪ್ರಕಾರ, ಗೋಕಾಕ್ ತಾಲೂಕಿನ ಕೊಣ್ಣೂರಿನ 55 ವರ್ಷದ ಮಹಿಳೆಯೊಬ್ಬರು ಕೊವಿಡ್ನಿಂದ ಮೃತರಾಗಿದ್ದಾರೆ. ಈ ಮಾಹಿತಿಯನ್ನು ಜಿಲ್ಲಾಡಳಿತ ರಾಜ್ಯ ಆರೋಗ್ಯ ಇಲಾಖೆಗೆ ಕಳಿಸಿತ್ತು. ಜಿಲ್ಲಾ ವೈದ್ಯಾಧಿಕಾರಿಗಳು ಟೆಸ್ಟ್ ವರದಿ ಬರುವ ಮುನ್ನವೇ ಸಾವು ಕೊವಿಡ್ ಕಾರಣದಿಂದ ನಿರ್ಧರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೊರೋನಾ : ನಗರ ಪ್ರದೇಶಗಳ ಆತಂಕ

ನವದೆಹಲಿ : ಕೊರೊನಾದಿಂದಾಗಿ ನಗರ ಪ್ರದೇಶಗಳು ಅಕ್ಷರಶಃ ಆತಂಕದಲ್ಲಿ ಇವೆ. ಕೊರೊನಾದಿಂದಾಗಿ ನಿರುದ್ಯೋಗ, ಬಡತನ, ಅಸಮಾನತೆ…

ಮುಂಡರಗಿ ಮಿನಿ ವಿಧಾನಸೌಧಕ್ಕೂ ಶುರುವಾಯಿತೆ ಕೊರೊನಾ ಭೀತಿ..!

ಪಟ್ಟಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಮುಂಡರಗಿಯ ಜನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ದಿಂದ ಆತಂಕಕ್ಕೀಡಾಗಿದ್ದಾರೆ. ಆದರೆ ಇಂದು ಪಟ್ಟಣದ ಮಿನಿವಿಧಾನ ಸೌಧ ಕಾರ್ಯಾಲಯ ಗೇಟ್ ಗೆ ಬೀಗ ಹಾಕಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಜೂ. 8ರಿಂದ ತೆರೆಯಲಿವೆ ದೇವಸ್ಥಾನಗಳು – ಈ ವಾರವೇ ಮಾರ್ಗಸೂಚಿ ಪ್ರಕಟ!

ಜೂ. 8ರಿಂದ ದೇವಾಲಯಗಳು ಓಪನ್ ಆಗಲಿವೆ. ಹಲವು ಮಾರ್ಗಸೂಚಿಗಳನ್ವಯ ದೇವಸ್ಥಾನಗಳು, ಚರ್ಚ್, ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳನ್ನ ತೆರೆಯಲು ಅವಕಾಶ ನೀಡಲಾಗಿದೆ.