ನವದೆಹಲಿ: ‘2021ರವರೆಗೂ ದೇಶದಲ್ಲಿ ಕೋವಿಡ್ ಲಸಿಕೆ ತಯಾರಿಸುವುದು ಅಸಾಧ್ಯ’ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಥಾಯಿ ಸಮಿತಿಯ ಎದುರು ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಂಶೋಧಕರು ಈ ಅಭಿಪ್ರಾಯ ತಿಳಿಸಿದರು.

ಇದೇ ಅಗಸ್ಟ್ 15ರೊಳಗೆ ಕೋರೊನಾ ಲಸಿಕೆ ಸಿದ್ಧ ಎಂದು ಐಸಿಎಂಆರ್ ಘೋಷಿಸಿದಾಗ ವ್ಯಾಪಕ ಟೀಕೆ ಕೇಳಿ ಬಂದಿದ್ದವು. ಲಸಿಕೆ ಸಂಶೋಧನೆಯಲ್ಲಿ ಹುಡುಗಾಟದ ಮಾತು ಬೇಡ ಎಂದು ಹಲವಾರು ಸಂಶೋಧಕರು ಎಚ್ಚರಿಸಿದ್ದರು. ಅಗಸ್ಟ್ 15ರ ಪ್ರಧಾನಿಯವರ ಭಾಷಣಕ್ಕೆ ಮಹತ್ವ ತಂದು ಕೊಡಲು ಈ ಮೂರ್ಖತನದ ನಿರ್ಧಾರ ಮಾಡಲಾಗಿದೆ ಎಂದೂ ಟೀಕೆಗಳು ಕೇಳಿ ಬಂದಿದ್ದವು.

ನಂತರ ಸ್ಪಷ್ಟನೆ ನೀಡಿದ್ದ ಐಸಿಎಂಆರ್, ಕೆಂಪುಪಟ್ಟಿಯ ನಿಧಾನಗತಿಯನ್ನು (ಅಧಿಕಾರಿಗಳ ವಿಳಂಬ ಶೈಲಿ) ತೊಡೆದು ಹಾಕಲು ಹಾಗೆ ದಿನಾಂಕ ಘೋಷಿಸಲಾಗಿತ್ತು ಎಂದಿತ್ತು.

ಐಸಿಎಂಆರ್ ನ ಎಡವಟ್ಟಿನಿಂದಾಗಿ ಸ್ಥಾಯಿ ಸಮಿತಿ ಇಂದು ಈ ಸಭೆ ಕರೆದು ಅಧಿಕಾರಿಗಳು ಮತ್ತು ಸಂಶೋಧಕರ ಅಭಿಪ್ರಾಯ ಸಂಗ್ರಹಿಸಿತು.

ಜೈವಿಕ, ತಂತ್ರಜ್ಞಾನ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನೆ, ಸಿಎಸ್ಐಆರ್ ಇಲಾಖೆಗಳ ಅಧಿಕಾರಿಗಳು ಮತ್ತು ವಿಜ್ಞಾನಿಗಳ ಜೊತೆಗೆ ಸರ್ಕಾರಕ್ಕೆ ವೈಜ್ಞಾನಿಕ ಸಲಹೆಗಾರರಾಗಿರುವ ಕೆ. ವಿಜಯರಾಘವನ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ತನ್ನ ದಾಖಲೆ ತಾನೇ ಮುರಿದು ಆತಂಕ ಸೃಷ್ಟಿಸುತ್ತಿರುವ ಮಹಾಮಾರಿ

ಬೆಂಗಳೂರು : ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ದಾಖಲೆಯನ್ನೇ ಮುರಿದು ಸಾಗುತ್ತಿದೆ. ನಿನ್ನೆ ಒಂದೇ…

ಇಂಧನ ಬೆಲೆ ಮತ್ತು ಹಣದ ಮೌಲ್ಯ ಒಂದೇ ನಾಣ್ಯದ ಮುಖಗಳು

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಇಂಧನ ದರ ಏರಿಕೆ ಆರಂಭಗೊAಡಿದೆ. ಯಾವುದೇ ಚುನಾವಣೆ ನಂತರ ಇಂಧನ ಬೆಲೆ ಏರಿಸುವದು ಸಾಮಾನ್ಯ. ಈ ಸಂಪ್ರದಾಯ ಇಂದು-ನಿನ್ನೆಯದಲ್ಲ, ಹಲವು ದಶಕಗಳ ಸಂಪ್ರದಾಯ ಈಗಲೂ ಅಷ್ಟೇ ಅಚ್ಚು ಕಟ್ಟಾಗಿ ಎಲ್ಲಾ ಸರ್ಕಾರಗಳು ಪಾಲಿಸುತ್ತಿವೆ.

ಸುಶಾಂತ ಸಿಂಗ್ ರಜಪುತ ಬಾಲಿವುಡ್ ನಟ ಆತ್ಮಹತ್ಯೆ

ಮುಂಬಯಿ:ಬಾಲಿವುಡ್ ನಟ ಸುಶಾಂತ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಬಾಂದ್ರ ಪೂಲಿಸರು ತಿಳಿಸಿದ್ದಾರೆ. ಅವರು…

ದೆಹಲಿಯಲ್ಲಿ ಸಮುದಾಯಕ್ಕೆ ಹಬ್ಬಿದ ಸೋಂಕು – ಸಭೆ!

ನವದೆಹಲಿ : ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ…