ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ದೇಶಕ್ಕೆ ಸಾಗಿಸಲ್ಪಟ್ಟ 30 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜುಲೈ 4ರಂದು ತಿರುವನಂತಪುರದಲ್ಲಿ ವಶಪಡಿಸಿಕೊಂಡು ಸ್ವಪ್ನ ಸುರೇಶ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.

ಯಾರಿದು ಸ್ವಪ್ನ-ಸುಂದರಿ?
ಕೇರಳ ಸರ್ಕಾರದ ಮುಖ್ಯಮಂತ್ರಿಗೂ ಮುಜುಗರ ತರುವಂತಾಗಲು ಈ ಸುಂದರಿಯ ಜಾಬ್ ಪ್ರೊಪೈಲ್ ಕಾರಣವಾಗುತ್ತಿರುವುದು ಹೇಗೆ? ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ಕೇರಳ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಐ.ಎ) ಒಪ್ಪಿಸಿದೆ.

ಈ ಹಿಂದೆ ಸ್ವಪ್ನ ಸುರೇಶ್ ಯುಎಇ ಕಾನ್ಸುಲೇಟ್ ನಲ್ಲಿ ಕೆಲಸ ಮಾಡಿದ್ದರು. ಈಗ ಚಿನ್ನವನ್ನು ಯುಎಇ ಕಾನ್ಸುಲೇಟ್ ಹೆಸರಿನ ಕಾರ್ಗೋ ಮೂಲಕ ಕೇರಳದಲ್ಲಿರುವ ಯುಎಇ ಮಿಷನ್ ಹೆಸರಿಗೆ ಕಳಿಸಿದ್ದು, ಸ್ವಪ್ನ ಈ ವಿಷಯವಾಗಿ ವಿಶೇಷ ಆಸಕ್ತಿ ತೋರಿದ್ದರು. ಈ ಕಾರಣಕ್ಕೆ ಕಸ್ಟಮ್ಸ್ ಅಧಿಕಾರಿಗಳು ಈಕೆಯನ್ನು ಬಂಧಿಸಿದ್ದಾರೆ.

ಕೇರಳ ಸರ್ಕಾರದ ಐಟಿ ಇಲಾಖೆಯ ಜೊತೆ ಪ್ರಾಜೆಕ್ಟ್ ಒಂದನ್ನು ನಡೆಸುತ್ತಿರುವ ಖಾಸಗಿ ಕಂಪನಿಯಲ್ಲಿ ಸ್ವಪ್ನ ಗುತ್ತಿಗೆ ಆಧಾರದ ಕೆಲಸ ಮಾಡುತ್ತಿದ್ದಾರೆ. ಕೇರಳ ಸಿಎಂ ಮುಖ್ಯ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದ ಶಿವಶಂಕರನ್ ಜೊತೆಗೆ ಸ್ವಪ್ನ ಆತ್ಮೀಯರಾಗಿದ್ದರು. ಈಗ ಶಿವಶಂಕರನ್ ಅವರನ್ನು ಕೇರಳ ಸರ್ಕಾರ ವಜಾಗೊಳಿಸಿದೆ. ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆಗೆ
ಕೇರಳ ಕಾಂಗ್ರೆಸ್ ಆಗ್ರಹಿಸಿದೆ.

Leave a Reply

Your email address will not be published. Required fields are marked *

You May Also Like

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ : ಸೋನಿಯಾ ಗಾಂಧಿ ವಿರುದ್ಧ ಎಎಫ್.ಐ.ಆರ್..!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟರ್ ನಲ್ಲಿ ಇಲ್ಲಸಲ್ಲದ ಅವಹೇಳನಕಾರಿ ಟ್ವೀಟ್ ಮಾಡಿರುವ ಆರೋಪ…

ಸಂಸದೆ ಸುಮಲತಾಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಸಂಸದೆ ಸುಮಲತಾ ಅಂಬರೀಶ್ ಗೂ ಕೊರೊನಾ ಕಾಟ ಶುರುವಾಗಿದೆ. ಈ ಬಗ್ಗೆ ಸ್ವತ: ಸುಮಲತಾ…

ಹಾವು ಬಿಟ್ಟು ಪತ್ನಿ ಕೊಲೆ ಮಾಡಿದ ಪತಿ!

ಕೊಲ್ಲಂ: ವ್ಯಕ್ತಿಯೊಬ್ಬ ತನ್ನ ಪತ್ನಿ ಮಲಗಿದ್ದಾಗ ನಾಗರಹಾವು ಬಿಟ್ಟು ಹತ್ಯೆ ಮಾಡಿದ ಭಯಾನಕ ಘಟನೆ ಕೇರಳದಲ್ಲಿ…

ಚೀನಾಕ್ಕೆ ಟಾಂಗ್ ನೀಡಿದ ಭಾರತ ಹಾಗೂ ಅಮೆರಿಕ!

ನವದೆಹಲಿ : ಭಾರತ ಹಾಗೂ ಅಮೆರಿಕದ ನಡುವೆ ಮಹತ್ತರವಾದ ರಕ್ಷಣಾ ಒಪ್ಪಂದಗಳಾಗಿವೆ. ಎರಡೂ ರಾಷ್ಟ್ರಗಳ ನಡುವೆ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಹಾಗೂ ಸೂಕ್ಷ್ಮ ಮಾಹಿತಿಗಳ ವಿನಿಮಯದ ಕುರಿತು 2+2 ಮಾತುಕತೆ ನಡೆದಿವೆ.