ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ದೇಶಕ್ಕೆ ಸಾಗಿಸಲ್ಪಟ್ಟ 30 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜುಲೈ 4ರಂದು ತಿರುವನಂತಪುರದಲ್ಲಿ ವಶಪಡಿಸಿಕೊಂಡು ಸ್ವಪ್ನ ಸುರೇಶ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.

ಯಾರಿದು ಸ್ವಪ್ನ-ಸುಂದರಿ?
ಕೇರಳ ಸರ್ಕಾರದ ಮುಖ್ಯಮಂತ್ರಿಗೂ ಮುಜುಗರ ತರುವಂತಾಗಲು ಈ ಸುಂದರಿಯ ಜಾಬ್ ಪ್ರೊಪೈಲ್ ಕಾರಣವಾಗುತ್ತಿರುವುದು ಹೇಗೆ? ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ಕೇರಳ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಐ.ಎ) ಒಪ್ಪಿಸಿದೆ.

ಈ ಹಿಂದೆ ಸ್ವಪ್ನ ಸುರೇಶ್ ಯುಎಇ ಕಾನ್ಸುಲೇಟ್ ನಲ್ಲಿ ಕೆಲಸ ಮಾಡಿದ್ದರು. ಈಗ ಚಿನ್ನವನ್ನು ಯುಎಇ ಕಾನ್ಸುಲೇಟ್ ಹೆಸರಿನ ಕಾರ್ಗೋ ಮೂಲಕ ಕೇರಳದಲ್ಲಿರುವ ಯುಎಇ ಮಿಷನ್ ಹೆಸರಿಗೆ ಕಳಿಸಿದ್ದು, ಸ್ವಪ್ನ ಈ ವಿಷಯವಾಗಿ ವಿಶೇಷ ಆಸಕ್ತಿ ತೋರಿದ್ದರು. ಈ ಕಾರಣಕ್ಕೆ ಕಸ್ಟಮ್ಸ್ ಅಧಿಕಾರಿಗಳು ಈಕೆಯನ್ನು ಬಂಧಿಸಿದ್ದಾರೆ.

ಕೇರಳ ಸರ್ಕಾರದ ಐಟಿ ಇಲಾಖೆಯ ಜೊತೆ ಪ್ರಾಜೆಕ್ಟ್ ಒಂದನ್ನು ನಡೆಸುತ್ತಿರುವ ಖಾಸಗಿ ಕಂಪನಿಯಲ್ಲಿ ಸ್ವಪ್ನ ಗುತ್ತಿಗೆ ಆಧಾರದ ಕೆಲಸ ಮಾಡುತ್ತಿದ್ದಾರೆ. ಕೇರಳ ಸಿಎಂ ಮುಖ್ಯ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದ ಶಿವಶಂಕರನ್ ಜೊತೆಗೆ ಸ್ವಪ್ನ ಆತ್ಮೀಯರಾಗಿದ್ದರು. ಈಗ ಶಿವಶಂಕರನ್ ಅವರನ್ನು ಕೇರಳ ಸರ್ಕಾರ ವಜಾಗೊಳಿಸಿದೆ. ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆಗೆ
ಕೇರಳ ಕಾಂಗ್ರೆಸ್ ಆಗ್ರಹಿಸಿದೆ.

Leave a Reply

Your email address will not be published. Required fields are marked *

You May Also Like

ಕಾಲುವೆಗೆ ಜಾರಿದ ಕಾರು – ನಾಲ್ವರ ಸಾವು!

ಜೈಪುರ : ಕಾರೊಂದು ಕಾಲುವೆಗೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ರಾಜಸ್ಥಆನದ ಹನುಮಾನ್ ನಗರ ಜಿಲ್ಲೆಯಲ್ಲಿ ನಡೆದಿದೆ.

ಚೀನಾದಲ್ಲಿ ಶುರುವಾಗಿದೆ ಕೊರೊನಾ ಎರಡನೇ ಅಲೆ!

ಬೀಜಿಂಗ್: ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ಅಲೆ ಶುರುವಾಗಿದೆ. ಹುಟ್ಟು ಪಡೆದಿರುವ ಬೀಜಿಂಗ್ ನಲ್ಲಿಯೇ ಸದ್ಯ ಅದರ…

ಖಾಸಗಿ ವಾಹಿನಿಯ ಪ್ರಧಾನ ಸಂಪಾದಕ ಗೋಸ್ವಾಮಿ ನ್ಯಾಯಾಂಗ ಬಂಧನಕ್ಕೆ!

ಮುಂಬಯಿ : ಖಾಸಗಿ ವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.