ಬೆಂಗಳೂರು: ರಾಜ್ಯದಲ್ಲಿ ಸತತ 7 ದಿನಗಳಿಂದ ಪ್ರತಿದಿನ 1,500ಕ್ಕೂ ಹೆಚ್ಚಿನ ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದು, ಎರಡು ದಿನಗಳಿಂದ ಅದು 2 ಸಾವಿರ ಗಡಿ ದಾಟುವ ಮೂಲಕ ಆತಂಕ ಸೃಷ್ಟಿಸುತ್ತಿದೆ. ಒಟ್ಟು ಕೇಸುಗಳಲ್ಲಿ ರಾಜಧಾನಿಯಲ್ಲೇ ಅರ್ಧಕ್ಕೂ ಹೆಚ್ಚು ಕೇಸುಗಳು ದಾಖಲಾಗುತ್ತಿದ್ದು, ಬೆಂಗಳೂರು ತೊರೆಯಲು ವಲಸೆ ಕಾರ್ಮಿಕರು ಮುಂದಾಗುತ್ತಿದ್ದಾರೆ.

ರಾಜ್ಯದಲ್ಲಿಂದು 2313 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 33418 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 1003. ಈ ಮೂಲಕ  ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 13836 ಕೇಸ್ ಗಳು. ರಾಜ್ಯದಲ್ಲಿ 19035 ಸಕ್ರೀಯ ಪ್ರಕರಣಗಳಿವೆ. ಇಂದು ಕೊರೊನಾ ಸೋಂಕಿನಿಂದ 57 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 543 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು

ಬೆಂಗಳೂರು ನಗರ- 1447

ದಕ್ಷಿಣ ಕನ್ನಡ-139

ವಿಜಯಪುರ- 89

ಬಳ್ಳಾರಿ- 66

ಕಲಬುರಗಿ-58

ಯಾದಗಿರಿ-51

ಮೈಸೂರು-51

ಧಾರವಾಡ-50

ಹಾವೇರಿ-42

ಉಡುಪಿ-34

ಉತ್ತರ ಕನ್ನಡ-33

ಕೊಡಗು-33

ಮಂಡ್ಯ-31

ರಾಯಚೂರು-25

ರಾಮನಗರ-23

ದಾವಣಗೆರೆ- 21

ಬೀದರ್-19

ಗದಗ-19

ಬೆಳಗಾವಿ-15

ಚಿಕ್ಕಬಳ್ಳಾಪೂರ-12

ತುಮಕೂರು-10

ಕೋಲಾರ-09

ಚಾಮರಾಜ ನಗರ-09

ಕೊಪ್ಪಳ-07

ಹಾಸನ-06

ಶಿವಮೊಗ್ಗ-06

ಬಾಗಲಕೋಟೆ-06

ಬೆಂಗಳೂರು ಗ್ರಾಮಾಂತರ-01

ಚಿಕ್ಕಮಗಳೂರು-01

Leave a Reply

Your email address will not be published. Required fields are marked *

You May Also Like

ಈ ನಟ ಈಗ ಟಾಪ್ ನಟರ ಪಟ್ಟಿಯಲ್ಲಿ ಮೊದಲಿಗ!

ಡಿಯರ್‌ ಕಾಮ್ರೇಡ್‌, ಟ್ಯಾಕ್ಸಿವಾಲ, ನೋಟಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಧನೆ ಮಾಡಲಿಲ್ಲ. ಆದರೂ ಬಾಲಿವುಡ್ ನ ಕೆಲವು ನಾಯಕರನ್ನು ಮಣಿಸಿ ದೇವರಕೊಂಡ ಮುನ್ನುಗ್ಗುತ್ತಿದ್ದಾರೆ.

ನಕಲಿ ಜಾತಿ ಪ್ರಮಾಣ ಪತ್ರ ಆರೋಪ: ಪಟ್ಟಣ ಪಂಚಾಯ್ತಿ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಸ್ಥಳೀಯ ಪಟ್ಟಣ ಪಂಚಾಯತಿಗೆ 2018 ರ ಚುನಾವಣೆಯಲ್ಲಿ ಎಸ್‌.ಸಿ ಮೀಸಲಿದ್ದ 11ನೇ ವಾರ್ಡನಿಂದ ಆಯ್ಕೆಯಾಗಿರುವ ಬಸವಂತಪ್ಪ ಶಿ. ಹಾರೋಗೇರಿ ಅವರ ಜಾತಿ ಪ್ರಮಾಣ ಪತ್ರ ನಕಲಿ ಇದ್ದು ತನಿಖೆ ನಡೆಸಿ ಪಪಂ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಪ್ರತಿಸ್ಪರ್ದಿ ಮರಿಯಪ್ಪ ನೀ. ನಡಗೇರಿ ಆಗ್ರಹಿಸಿದರು.

ಟ್ರಾಕ್ಟರ್ ಮತ್ತು ಕಾರು ಮುಖಾಮುಖಿ :ಟ್ರಾಕ್ಟರ್ ಪಿಸ್ ಪಿಸ್..!

ಉತ್ತರಪ್ರಭಗದಗ:ಟ್ರ್ಯಾಕ್ಟರ್ ಮತ್ತು ಕಾರ ನಡುವೆ ಮುಖಾಮುಖಿ ನಡೆದು ಟ್ರ್ಯಾಕ್ಟರ್ ತುಂಡಾದ ಘಟನೆ ಗದಗ ಸಮೀಪದ ಚಿಕ್ಕಟ್ಟಿ…

ಮೊಮ್ಮಗನಿಗೆ ಕೊರೊನಾ ಬಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಜ್ಜಿ!

ಕಾರವಾರ: ಕೊರೊನಾ ಸೋಂಕಿತನ ಸಂಪರ್ಕ ಹೊಂದುವ ಮೂಲಕ ಕ್ವಾರಂಟೈನ್ ಆಗಿದ್ದ ವೃದ್ಧೆಯೊಬ್ಬರು ತಮಗೂ ಕೊರೊನಾ ಬಂದಿದೆ…