ಕಾರವಾರ : ಮದುವೆಗೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಕೊರೊನಾ ಸೋಂಕು ಇರುವುದನ್ನು ಮುಚ್ಚಿಟ್ಟ ವ್ಯಕ್ತಿ ಸದ್ಯ ಇಹಲೋಕ ತ್ಯಜಿಸಿದ ಘಟನೆ ನಡೆದಿದೆ.

ಕೊರೊನಾ ಸೋಂಕು ಹರಡಿರುವುದನ್ನು ಮುಚ್ಚಿಟ್ಟ ಮದುಮಗ ಮದುವೆಯಾಗಿದ್ದ. ಆದರೆ, ಆತ ಮಮದುವೆಯಾಗಿದ್ದ ಮದುಮಗ ವಿವಾಹವಾದ ಐದೇ ದಿನಕ್ಕೆ ಸಾವನ್ನಪ್ಪಿದ್ದಾನೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಇದರಿಂದಾಗಿ ನೆಂಟರು ಹಾಗೂ ಆತನ ಕುಟುಂಬಕ್ಕೂ ಕಂಟಕ ಶರುವಾಗಿದೆ.

ವೃದ್ಧರಿಬ್ಬರಿಂದ ಸದ್ಯ ಕುಟುಂಬದ 20 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ ಒಂದು ವರ್ಷದ ಮಗುವು ಸೇರಿ 18 ವರ್ಷದ ಒಳಗಿನ 8 ಜನ ಅಪ್ರಾಪ್ತರಿಗೂ ಕಂಟಕ ಶುರುವಾಗಿದೆ. ಇದಲ್ಲದೇ ಈತನ ಮದುವೆಯಲ್ಲಿ ಭಾಗಿಯಾದ 70 ಜನ ಸಂಬಂಧಿಕರು ಕ್ವಾರಂಟೈನ್ ಆಗಿದ್ದಾರೆ.

ಕುಟುಂಬವು ಮದುವೆ ಕಾರಣದಿಂದ ಸೋಂಕಿರುವುದನ್ನು ಮುಚ್ಚಿಟ್ಟು ಹಲವು ಜನರಿಗೆ ಸೋಂಕು ತಗುಲುವಂತೆ ಮಾಡಿದೆ. ಇದಲ್ಲದೇ ಇವರ ಕುಟುಂಬದ ಇಬ್ಬರು ವೃದ್ಧರ ಸ್ಥಿತಿಯೂ ಗಂಭೀರವಾಗಿದೆ. ಈ ಎಲ್ಲಾ ಹಿನ್ನೆಲೆಯನ್ನನು ಅವಲೋಕಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಅವರು ಯುವಕನ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ!

ಬೆಂಗಳೂರು : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಮಧ್ಯೆ ತೈಲ ಬೆಲೆ…

ಎಮ್ ಇಸ್ ಎಸ್ ಮತ್ತು ಶಿವಸೇನೆ ನಿಷೇಧಿಸಲು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ಕಾರ್ಯಕರ್ತರು ಆಗ್ರಹ

ಲಕ್ಷ್ಮೇಶ್ವರ:ನಾಡಧ್ವಜ ಸುಟ್ಟು ಅಪಮಾನ ಮಾಡಿದ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿದ ಎಂ.ಇ.ಎಸ್.ಹಾಗೂ ಶಿವಸೇನೆ…

ಉಗ್ರರಿಗೆ ಚಿಕಿತ್ಸೆ ನೀಡಲು, ಶಸ್ತ್ರಾಸ್ತ್ರ ಪೂರೈಸುವುದಕ್ಕಾಗಿಯೇ ಈತ ಮಾಡಿದ್ದೇನು?

ಐಸಿಸ್ ನ ಉಗ್ರರಿಗೆ ವೈದ್ಯಕೀಯ ಸೇವೆ ಒದಗಿಸುವುದಕ್ಕಾಗಿ ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡಲು ರಹಸ್ಯವಾಗಿ ಸಂವಹನ ನಡೆಸುವುದಕ್ಕಾಗಿ ಪ್ರತ್ಯೇಕ ಆಪ್ ಗಳನ್ನು ನಗರ ಮೂಲದ ನೇತ್ರ ವೈದ್ಯನೊಬ್ಬ ಅಭಿವೃದ್ಧಿ ಪಡಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿಂದು 178 ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ಇಂದು ರಾಜ್ಯದಲ್ಲಿ ಮತ್ತೆ 178 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು…