ಗದಗ: ನಗರದ ಹುಡ್ಕೋ ಕಾಲನಿ 2 ಕ್ರಾಸ್ ಅಂಬಾ ಭವಾನಿ ಗುಡಿ ಹತ್ತಿರದ ಪ್ರದೇಶ , ಲಕ್ಕುಂಡಿ ವಾರ್ಡ ನಂ. 8, ಲಕ್ಕುಂಡಿ ವಾರ್ಡ ನಂ.11, ಗದಗ ಕೆ.ವಿ.ಎಸ್.ಆರ್. ಕಾಲೇಜ ಹತ್ತಿರ ಪಂಚಾಕ್ಷರಿ ನಗರ, ರೋಣ ತಾಲೂಕು ಹೊಳೆ ಆಲೂರ ವಾರ್ಡ ನಂ. 8, ಗದಗನ ಕಳಸಾಪೂರ ರೋಡ ಸೇವಾಲಾಲ ನಗರ ಈ ಆರು ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶವೆಂದು ಘೋಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.