ನವದೆಹಲಿ : ರಾಜ್ಯ ಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿಯು ತನ್ನ ಸಂಖ್ಯಾ ಬಲವನ್ನು ಹೆಚ್ಚಿಸಿಕೊಂಡಿದೆ.

ಈ ಮೂಲಕ ಕಾಂಗ್ರೆಸ್ ತನ್ನ ಸಂಸದರ ಸಂಖ್ಯಾ ಬಲವನ್ನು ಕಡಿಮೆ ಮಾಡಿಕೊಂಡಿದೆ. ಪರಿಣಾಮ ಮೇಲ್ಮನೆಯಲ್ಲಿ ಕಾಂಗ್ರೆಸ್‌ಗಿಂತ ದುಪ್ಪಟ್ಟು ಹೆಚ್ಚಿನ ಸಂಸದರು ಬಿಜೆಪಿ ಬಳಿಯಿದ್ದಾರೆ. ಬಿಜೆಪಿ ಸದಸ್ಯರ ಸಂಖ್ಯೆ 86ಕ್ಕೆ ಏರಿಕೆಯಾಗಿದ್ದರೆ, ಕಾಂಗ್ರೆಸ್‌ ಸಂಸದರ ಸಂಖ್ಯೆ 41ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಬಲ 100ರ ಸಮೀಪಕ್ಕೆ ಬಂದಿದೆ. ಆದರೂ ಬಹುಮತದಿಂದ ದೂರ ಉಳಿದಿದೆ.

ಬಿಜೆಪಿ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಎಐಎಡಿಎಂಕೆ ಬಳಿ 9, ಬಿಜೆಡಿ ಬಳಿ 9, ವೈಆರ್ ಎಸ್ ಕಾಂಗ್ರೆಸ್‌ ಪಕ್ಷದ ಬಳಿ 6 ಸಂಸದರಿದ್ದಾರೆ. ಜೊತೆಗೆ ಇತರ ಸಣ್ಣ ಪುಟ್ಟ ಪಕ್ಷಗಳೂ ಬಿಜೆಪಿ ಜೊತೆ ಚೆನ್ನಾಗಿವೆ.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ತೆರವಿನಿಂದ ಕೊರೊನಾ ಪ್ರಮಾಣದಲ್ಲಿ ಹೆಚ್ಚಳ: ಕೇಜ್ರಿವಾಲ್

ಲಾಕ್ ಡೌನ್ ತೆರವಿನಿಂದಾಗಿ ದೆಹಲಿಯಲ್ಲಿ ಕೊರೊನಾ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆರೋಪಿಸಿದರು.

ದೇಶದ ಜನತೆಗೆ ಶುಭಾಶಯ ಕೋರಿದ ಮೋದಿ!

ನವದೆಹಲಿ : ಇಂದಿನಿಂದ ನವರಾತ್ರಿ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ಗದಗ ಜಿಲ್ಲೆ ರೈತರಿಗೆ ಬೆಳೆವಿಮೆ ಮಾಹಿತಿ : ಯಾವ ಊರಿಗೆ, ಯಾವ ಬೆಳೆಗೆ, ಎಷ್ಟು ವಿಮೆ ಸಿಗಲಿದೆ..?

ಗದಗ: ಕರ್ನಾಟಕ ಸರ್ಕಾರವು 2020-21 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ(ವಿಮಾ) ಯೋಜನೆಯನ್ನು ಅನುಷ್ಟಾನಗೊಳಿಸಲು ಮಂಜೂರಾತಿ ನೀಡಿರುತ್ತದೆ. ಈ ಯೋಜನೆಯ ರೂಪರೇಷೆ ಮತ್ತು ವಿವರಗಳನ್ನು ಇಲ್ಲಿ ನೀಡಲಾಗಿದೆ.

ಆಮಿಷದ ಆಡಿಯೋ, ಪೊಲೀಸ್, ಕೋರ್ಟ್. ರೆಸಾರ್ಟ್ : ರಾಡಿಯೆದ್ದಿರುವ ರಾಜಸ್ತಾನ ರಾಜಕೀಯ

ಬರುವ ಮಂಗಳವಾರ ಸಾಯಂಕಾಲ 5.30ರವರೆಗೂ ಅರ್ಜಿದಾರರ (ಸಚಿನ್ ಪೈಲಟ್ ಬಣದ ಶಾಸಕರು) ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ರಾಜಸ್ತಾನ ಹೈಕೋರ್ಟ್ ವಿಭಾಗೀಯ ಪೀಠ ವಿಧಾನಸಭೆಯ ಸ್ಪೀಕರ್ ಗೆ ಸೂಚಿಸಿದೆ.