ಜೀವನದುದ್ದಕ್ಕೂ ತನ್ನ ಗುಡಸಲಿನ
ಚಿಮಣಿಗೆ ಎಣ್ಣಿ ಹಾಕದೆ ಹಲವು ಮೆರವಣಿಗೆ ಗಳಲ್ಲಿ ಹಿಲಾಲು ಹಿಡಿಯುತ್ತಿದ್ದ ನನ್ನಪ್ಪನ ಮೈ ತುಂಬಾ ಗುಲಾಲು
ಕೈಯಲ್ಲಿ ಪ್ರಜ್ವಲಿಸುವ ಹಿಲಾಲು
ಮೆರವಣಿಗೆ ಅಡ್ಡ ಪಲ್ಲಕ್ಕಿ
ಶವ ಸಂಸ್ಕಾರಕ್ಕೂ ಹೆಗಲು ಕೊಟ್ಟ ನನ್ನಪ್ಪ
ಕಣ್ಣಲ್ಲಿ ಸೂರ್ಯ ತುಂಬಿ ಕೊಂಡು
ಎದೆಯ ಮೇಲೆ ಬುದ್ಧನನ್ನು
ಮಲಗಿಸಿ ಜೋಗುಳ ಹಾಡುವವ ನನ್ನಪ್ಪ
ಲೆಕ್ಕವಿರದ ನಕ್ಷತ್ರಗಳು ತನ್ನ ಜೋಪಡಿಯಲ್ಲಿ ಇಣುಕಿದರೂ
ಬಡತನವೆಂಬ ಬೇತಾಳನ ಗೆಳೆತನ ಬಿಡದ ನನ್ನಪ್ಪ
ಮೆರವಣಿಗೆಯಲಿ ಹಿಲಾಲು ಹಿಡಿದು
ಹಿಡಿಕಾಳು ತಂದಾನು
ಜೋಪಡಿಯಿಂದ ಪಣತಿ ಬೆಳಗಿಸಿಯಾನು ಅಂದುಕೊಂಡು ಶಬರಿವೃತ ಹಿಡಿದಿದ್ದಳು ನನ್ನವ್ವ
ಮೆರವಣಿಗೆಯಲಿ ತೂರುವ
ಚುರುಮರಿ ಕೋಳಿ ಮರಿಗಳಂತೆ ಆರಿಸುವ ಮಕ್ಕಳು
ಧರ್ಮದ ಅಮಲಿನಲ್ಲ
ಜೈಕಾರ ಹಾಕುತ ರಕ್ತ ಹರಿಸಿದವರೆಷ್ಟೋ
ರಕ್ತದ ರಂಗೋಲಿ ಚಿತ್ತಾರವ ಕಂಡು
ಖುಷಿ ಪಟ್ಟವರೆಷ್ಟೋ?
ಎಣಿಕೆಗೆ ಸಿಗುತ್ತಿಲ್ಲ !

ಎ ಎಸ್. ಮಕಾನದಾರ. ಗದಗ

1 comment
Leave a Reply

Your email address will not be published. Required fields are marked *

You May Also Like

ಶಾಕಿಂಗ್ ನ್ಯೂಸ್: ಕರ್ನಾಟಕವೀಗ ಸೋಂಕು ಅತಿ ವೇಗದಲ್ಲಿ ಹರಡುತ್ತಿರುವ ರಾಜ್ಯ: ಕೇಸ್-ಲೋಡ್ ಸಂಖ್ಯೆಯಲ್ಲಿ 5ನೆ ಸ್ಥಾನ

ಸೋಂಕಿತರ ಸಂಖ್ಯೆಯ ಆಧಾರದ ಪಟ್ಟಿಯಲ್ಲಿ (ಕೇಸ್-ಲೋಡ್) ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 6ನೆ ಸ್ಥಾನದಲ್ಲಿದ್ದ ಕರ್ನಾಟಕ ಶನಿವಾರ ಉತ್ತರಪ್ರದೇಶವನ್ನು ದಾಟಿ 5ನೆ ಸ್ಥಾನಕ್ಕೆ ಏರಿದೆ.

ಕಷ್ಟಾ ಮಾಡೋದು ಭಾಳ್ ಕಷ್ಟ ಅಂತ ಕಷ್ಟದ ಅಂಗಡಿನಾ ಬಂದ್ ಮಾಡಿದ ತಿಪ್ಪಾ..!

ಅನೌನು ಎರಡ್ ತಿಂಗಳ್ ಹೊತ್ತಾತು ಗಡ್ಡದಾಗೂ ಸೀರ ಸೇರುವಂಗಾಗ್ಯಾವು, ಕೆರದ್ , ಕೆರದ್ ತಲಿ ಕೆಟ್ ಹೋಗೈತಿ. ಅದಕ್ ಇವತ್ತು ಕಷ್ಟದ ಅಂಗಡಿ ಚಾಲೂ ಅಂದಿದ್ದಕ್ಕ ನಾನು ದುಡಿಕಿಲೇ ಬಂದೇ ಅಷ್ಟರಾಗ್ ನೀನಾ ಅಂಗಡಿ ಕದಾ ಹಾಕ್ಕೊಂಡು ಹೊಂಟ್ಯಲ್ಲಾ ಅಂದ ಯಲ್ಲಾ.

ಕೊರೋನಾ ಕಾವ್ಯ-6

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಸಾಹಿತಿ ಎ.ಎಸ್.ಮಕಾನದಾರ್ ಕರಕಲಾದ ಕಾನನದಲ್ಲಿಯೂ ಕೊಸ ಗರಿಕೆಯನ್ನು ಕಾಣುವ ಕನಸುಗಾರನ ಭಾವ ಈ ಕಾವ್ಯದಲ್ಲಿ ಮೂಡಿದೆ.