ಬೆಂಗಳೂರು: ರಾಜ್ಯದಲ್ಲಿಂದು 337 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8281 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 230. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 5210 ಕೇಸ್ ಗಳು. ರಾಜ್ಯದಲ್ಲಿ 2943 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ 10 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 124 ಕ್ಕೆ ಏರಿಕೆಯಾಗಿದೆ. ಇಂದು ದೃಢಪಟ್ಟ ಸೋಂಕಿತರಲ್ಲಿ 93 ಕೇಸ್ ಗಳಿಗೆ ಅಂತರಾಜ್ಯ ಪ್ರವಾಸದ ಹಿನ್ನೆಲೆ ಇದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲಿಟಿನ್ ನಲ್ಲಿ ತಿಳಿಸಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು.?
ಬೆಂಗಳೂರು ನಗರ- 138
ಕಲಬುರಗಿ- 52
ಬಳ್ಳಾರಿ- 37
ಹಾಸನ- 18
ದಕ್ಷಿಣ ಕನ್ನಡ- 13
ದಾವಣಗೆರೆ- 12
ಉಡುಪಿ- 11
ಬೀದರ್- 10
ಮೈಸೂರು- 06
ಕೊಪ್ಪಳ- 06
ಯಾದಗಿರಿ- 04
ಕೋಲಾರ- 04
ಬೆಂಗಳೂರು ಗ್ರಾಮಾಂತರ- 04
ಮಂಡ್ಯ-03
ಧಾರವಾಡ- 03
ಚಿಕ್ಕಬಳ್ಳಾಪುರ- 03
ಬಾಗಲಕೋಟೆ- 03
ರಾಮನಗರ- 03
ತುಮಕೂರು- 02
ಚಿಕ್ಕಮಗಳೂರು- 02
ಬೆಳಗಾವಿ- 01
ಉತ್ತರ ಕನ್ನಡ- 01
ಶಿವಮೊಗ್ಗ- 01

Leave a Reply

Your email address will not be published. Required fields are marked *

You May Also Like

ಎರಡನೇ ಹಂತದ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಣೆ ಯಾವಾಗ?: ಸಿಎಂ ಹೇಳಿದ್ದೇನು?

ಬೆಂಗಳೂರು: ಈಗಾಗಲೇ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಎರಡನೇ ಹಂತದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮೊದಲ ಹಂತದ ಪ್ಯಾಕೇಜ್ ಕುರಿತು ಸಾಕಷ್ಟು ಮನವಿಗಳು ಹಾಗೂ ಬೇಡಿಕೆಗಳು ವ್ಯಕ್ತವಾದ ಹಿನ್ನೆಲೆ ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎರಡನೇ ಹಂತದ ಪ್ಯಾಕೇಜನ್ನು ಸಿಎಂ ಘೋಷಣೆ ಮಾಡಲಿದ್ದಾರೆ.

ಮೀನು ಸಾರು ಮಾಡಿವಿ ಬಾ ಅಪ್ಪಾ, ಎನ್ನುವ ಕರುಳಿನ ಕೂಗಿಗೂ ಬಾರದೇ ಹೋದ ಅಪ್ಪ..!

ಕೂಲಿ ಕೆಲಸ ಮುಗಿಸಿ ಮನೆಗೆ ಬಂದ ಅಪ್ಪನನ್ನು ಕಂಡ ಮಕ್ಕಳು ಅಪ್ಪ, ಕೈಯಲ್ಲಿ ಹಿಡಿದುಕೊಂಡು ಬಂದ ಚೀಲವನ್ನೆ ಕಣ್ಣರಳಿಸಿ ನೋಡಿದ್ದಾರೆ. ಅಪ್ಪ ತಂದ ಮೀನು ಕಂಡು ಹಿರಿಹಿರಿ ಹಿಗ್ಗಿದ್ದಾರೆ. ಮಕ್ಳಾ ಮೀನು ಸಾರು ರೆಡಿ ಆಗ್ಲಿ ನಾನು ಸ್ವಲ್ಪ ಹೊರಗ್ ಹೋಗಿ ಬರ್ತಿನಿ ಅಂತ ಹೊರ ನಡೆದ ಅಪ್ಪ.

ಜ್ವರದಿಂದ ಬಳಲುತ್ತಿದ್ದಾರೆ ಸಿದ್ದರಾಮಯ್ಯ: ಎರಡು ದಿನದ ಕಾರ್ಯಕ್ರಮಗಳು ರದ್ದು

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಅವರು ಎರಡು ದಿನಗಳ ಕಾಲ ವಿಶ್ರಾಂತಿಯಲ್ಲಿ ಇರಲಿದ್ದಾರೆ.

ಗದಗ ಜಿಲ್ಲೆಯಲ್ಲಿಂದು 2 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 2 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 176…