ಹಾವೇರಿ: ಆಹಾರ ಸಾಮಗ್ರಿ ನೀಡುತ್ತಿಲ್ಲವೆಂದು ಸೀಲ್ ಡೌನ್ ಪ್ರದೇಶ ಜನರು ಧರಣಿ ನಡೆಸಿದ ಘಟನೆ ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣದ ಕಲಾಲ್ ಪ್ಲಾಟ್ನಲ್ಲಿ ನಡೆದಿದೆ.
ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ, ದನಕರುಗಳಿಗೆ ಮೇವು ನೀಡುತ್ತಿಲ್ಲವೆಂದು ಧರಣಿ ನಡೆಸಿದ ಸ್ಥಳೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು. ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.
ಚಿಕ್ಕಮಕ್ಕಳಿಗೆ ಹಾಲು ಇಲ್ಲದೇ ನರಳಾಡುತ್ತಿದ್ದಾರೆ.
ನಮಗೆ ಅವಶ್ಯ ವಸ್ತುಗಳನ್ನು ಪೂರೈಸುವರೆಗೂ ಧರಣಿ ಕೈಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.