ಜೈಪುರ: ಗುಜರಾತ್ ಕಾಂಗ್ರೆಸ್ ನ ಕೆಲವು ಶಾಸಕರನ್ನು ಕಾಂಗ್ರೆಸ್ ರಾಜಸ್ಥಾನದ ಸಿರೋಹಿಯಲ್ಲಿರುವ ರೆಸಾರ್ಟ್ ಗೆ ಕರೆದೊಯ್ಯಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯ ನಾರಾಯಣ ಪುರೋಹಿತ್, ಕಾಂಗ್ರೆಸ್ ಶಾಸಕರನ್ನು ಬಂಧಿಸಿಟ್ಟಿದೆ ಎಂದಿದ್ದಾರೆ.
ಕಾಂಗ್ರೆಸ್ ನವರು 22 ಶಾಸಕರನ್ನು ಕರೆತಂದಿದ್ದಾರೆ. ನಾವು ಈಗಾಗಲೇ ಒಂದು ದೂರು ದಾಖಲಿಸಿದ್ದೇವೆ. ಅವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದಿದೆ.
ಜೂನ್ 19ರಂದು ನಡೆಯಲಿರುವ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಯಲ್ಲಿ ಅಡ್ಡಮಾರ್ಗದಿಂದ ಗೆಲ್ಲಲು ಬಿಜೆಪಿ ತನ್ನ ಶಾಸಕರನ್ನು ಖರೀದಿ ಮಾಡುವ ಆತಂಕದಿಂದ ಕಾಂಗ್ರೆಸ್ ಈ ಹೆಜ್ಜೆ ಇಟ್ಟಿದೆ. ಸದ್ಯಕ್ಕೆ ಇಲ್ಲಿರುವ ಶಾಸಕರನ್ನು ಚುನಾವಣೆಯಂದು ನೇರವಾಗಿ ಮತದಾನಕ್ಕೆ ಕರೆದೊಯ್ಯಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.

Leave a Reply

Your email address will not be published. Required fields are marked *

You May Also Like

ಚೆಕ್ ಡ್ಯಾಂ ಕಾಮಗಾರಿ ನಿಲ್ಲಿಸುವಂತೆ ಹೈಕೋರ್ಟ್ ತಡೆ

ವರದಿ: ವಿಠ್ಠಲ ಕೆಳೂತ್ ಮಸ್ಕಿ: ತಾಲೂಕಿನ ದಿಗ್ಗನಾಯಕನಭಾವಿ ಹತ್ತಿರದ ಹಿರೇ ಹಳ್ಳದಲ್ಲಿ ನಿರ್ಮಿಸುತ್ತಿರುವ ಚೆಕ್ ಡ್ಯಾಂ…

ಕುಡಿಯೋ ನೀರಿಗೆ ಆದ್ರಳ್ಳಿ ಜನ್ರ ಪರದಾಟ: ಹತ್ತು ದಿನದ್ ಹೊತ್ತಾತು ಬೊಗಸಿ ನೀರು ಬಂಗಾರ ಆಗೈತಿ..!

ನಮ್ಗ ನೀರ್ ಇಲ್ದ ಬಾಳ್ ತೊಂದರಿ ಆಗೈತಿ, ಕಾಲಿಲ್ಲದವ್ರು ನಾವ್, ನೀರ್ ಹ್ಯಾಂಗ್ ತರಬೇಕ್ರಿ, ನಮಗ್ಯಾರು ದಿಕ್ಕಿಲ್ಲ. ನೀರಿನ ಸಮಸ್ಯೆ ಬಗೆಹರಿಸ್ರಿ ಅಂತ ಪಂಚಾಯತಿಗೆ ಹೋಗಿ ಹೇಳಿದ್ರ ಪಂಚಾಯತಿಯವ್ರು ದರಕಾರಕ್ಕ ತುಗೋವಲ್ರು. ಹತ್ತು ದಿನದ್ ಹೊತ್ತಾತು. ಹಿಂಗ್ ಬಾಳ್ ಸರಿ ಮೋಟರ್ ಸುಡತೈತಿ. ಆದ್ರ ಇದಕ್ ಯಾವುದು ಶಾಶ್ವತ ಪರಿಹಾರ ಇಲ್ರಿ. ಹಿಂಗಂತ ಹೇಳಿದ್ದು 70ರ ಆಸುಪಾಸಿನಲ್ಲಿರುವ ಅಜ್ಜಿ.

ಕೋವಿಡ್ ಬಲಿ: ಹೈದರಾಬಾದ್ ನಲ್ಲಿ ವೈದ್ಯರ ಮೇಲೆ ದಾಳಿ

ಹೈದರಾಬಾದ್: ಹೈದರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿ ಚಿಕಿತ್ಸೆ ಫಲಕಾರಿಯಾಗದೆ ಬಲಿಯಾದ ನಂತರ ವೈದ್ಯರ…

ಕೊರೊನಾದಿಂದಾಗಿ ಮಲೆ ಮಹದೇಶ್ವರನಿಗೆ ಎಷ್ಟು ನಷ್ಟವಾಗಿದೆ ಗೊತ್ತಾ?

ಹುಂಡಿಯೊಂದರಲ್ಲಿಯೇ ಪ್ರತಿ ತಿಂಗಳು ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗುತ್ತಿತ್ತು. ಚಿನ್ನದ ತೇರು, ವಿವಿಧ ಸೇವೆ ಲಾಡು ಮಾರಾಟ ಹಾಗೂ ವಸತಿ ಗೃಹ ಮೊದಲಾದ ಮೂಲಗಳಿಂದ ಬರುತ್ತಿದ್ದ ಆದಾಯದಲ್ಲಿ ಇದೀಗ ಕೋಟಿಗಟ್ಟಲೆ ಕಡಿತವಾಗಿದೆ.