ಬೆಂಗಳೂರು: ಲಾಕ್ ಡೌನ್ ನಿಂದಾಗಿ ಸದ್ಯ ಮಕ್ಕಳು ಮನೆಯಲ್ಲಿಯೇ ತಮ್ಮ ಬಾಲ್ಯ ಕಳೆಯುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸದ್ಯ ಮಕ್ಕಳ ಶಾಲೆಗಳು ಕೂಡ ಇಲ್ಲ. ಅಲ್ಲದೇ, ಕೊರೊನಾಕ್ಕೆ ಹೆದರಿ ಮಕ್ಕಳನ್ನು ಪಾಲಕರು ಹೊರಗಡೆ ಕೂಡ ಬಿಡುತ್ತಿಲ್ಲ. ಮಕ್ಕಳು ರಂಪ ಹಿಡಿಯಬಾರದೆಂದು ಅವರಿಗೆ ಬೇಕಾದ ತಿಂಡಿ ಕೊಟ್ಟು ಅವರನ್ನು ಮನೆಯಲ್ಲಿಯೇ ಕೂಡಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರಣದಿಂದ ಮಕ್ಕಳು ಮನೆಯಲ್ಲಿಯೇ ತಿಂದು ತಿಂದು ಸ್ಥೂಲ ಕಾಯ ಹೊಂದುತ್ತಿದ್ದಾರೆ. ಇದರಿಂದಾಗಿ ಅವರ ಆರೋಗ್ಯದ ಮೇಲೆ ಅಡ್ಡ ಪರಿಣಾಗಳು ಬೀರುತ್ತಿವೆ.

ಇದಕ್ಕೂ ಹೆಚ್ಚಾಗಿ ಮಕ್ಕಳು ನಿದ್ದೆ ಮಾಡುತ್ತಿದ್ದಾರೆ. ಇದರೊಂದಿಗೆ ಟಿವಿ, ಮೊಬೈಲ್, ಕಂಪ್ಯೂಟರ್ ಗಳೊಂದಿಗೆ ತಮ್ಮ ಬಾಲ್ಯ ಕಳೆಯುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ನಗರ ಪ್ರದೇಶದಲ್ಲಿನ ಪಾಲಕರು ಹಣ್ಣುಗಳನ್ನು ಕೂಡ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದೆಲ್ಲದರ ಪರಿಣಾಮ ಮಕ್ಕಳ ಮೇಲೆಯೇ ಆಗುತ್ತಿದೆ. ಇದರಿಂದಾಗಿ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ. ಹೀಗಾಗಿ ವೈದ್ಯರು ಪಾಲಕರಿಗೆ ಹತ್ತಾರು ಕಿವಿ ಮಾತುಗಳನ್ನು ಹೇಳಿದ್ದಾರೆ.

ಮಕ್ಕಳಿಗೆ ರೆಡಿಮೇಡ್ ಫುಡ್ ಗಳನ್ನು ನೀಡುವ ಬದಲು ತರಕಾರಿ, ಕಾಳುಗಳ ಪಲ್ಯ, ಹಣ್ಣುಗಳನ್ನು ನೀಡಬೇಕು. ಸಾಫ್ಟ್ ಡ್ರಿಂಕ್ಸ್, ಕೊಬ್ಬು ಹೆಚ್ಚಾಗಿರುವ ತಿಂಡಿ ಕೊಡುವುದನ್ನು ನಿಲ್ಲಿಸಿ, ಹಣ್ಣುಗಳ ಜ್ಯೂಸ್, ಹಾಲು ಹಾಗೂ ಆರೋಗ್ಯಕವಾದ ತಿಂಡಿ, ತಿನಿಸುಗಳನ್ನು ನೀಡಬೇಕು. ಎಣ್ಣೆ ಪದಾರ್ಥಗಳನ್ನು ಸಾಧ್ಯವಾದಷ್ಟು ಕಡಿಮೆ ನೀಡಬೇಕು. ಕಂಪ್ಯೂಟರ್, ಮೊಬೈಲ್ ಹಾಗೂ ಟಿವಿಗೆ ಕಡಿವಾಣ ಹಾಕಬೇಕು. ನಿಗದಿತ ಸಮಯದಲಿ ಮಾತ್ರ ನಿದ್ದೆ ಮಾಡುವಂತೆ ನೋಡಿಕೊಳ್ಳಬೇಕು. ದೈಹಿಕ ಚಟುವಟಿಕೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ನರೇಗಾ ಕೂಲಿಗಾಗಿ ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ

ಉದ್ಯೋಗಕ್ಕೆ ಖಾತ್ರಿಯಾಗಬೇಕಿದ್ದ ಯೋಜನೆ ಉದ್ಯೋಗಕ್ಕೆ ಕತ್ತರಿಯಾದರೆ ಹೇಗೆ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಕೋವಿಡ್ ಜ್ವರದಿಂದ ಬಳಲುತ್ತಿರುವ ಮಕ್ಕಳು!

ವಾಷಿಂಗ್ಟನ್‍: ಕೊರೊನಾ ವೈರಸ್‍ ಸಂಬಂಧಿತ ಜ್ವರದಿಂದ ಮಕ್ಕಳು ಬಳಲುತ್ತಿರುವ ಪ್ರಕರಣಗಳು ಅಮೆರಿಕದ ಕನಿಷ್ಠ 17 ರಾಜ್ಯಗಳಿಂದ…

ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ: ಸಿದ್ದರಾಮಯ್ಯ

ಕೊಪ್ಪಳ: ಸಚಿವ ಸೋಮಣ್ಣ ಅವರ ಹೇಳಿಕೆ ಆರ್ಥಿಕತೆಯ ಬಗ್ಗೆ ಅವರಿಗಿರುವ ಅಜ್ಞಾನವನ್ನು ತೋರಿಸುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿತ್ತು. ಈಗ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ. ರಾಜ್ಯ ಮಾತ್ರವಲ್ಲ ಇಡೀ ದೇಶವೇ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ವರದಿ ಕೊಡಿ ಇಲ್ಲವೇ ನಮ್ಮನ್ನು ಬಿಡಿ!

ಮಸ್ಕಿ: ಕ್ವಾರೆಂಟೈನ್ ಗೆ ಒಳಗಾಗಿ 20 ದಿನಗಳು ಕಳೆದು ಹೋದರು ಕೊರೊನಾ ವರದಿ ಬಂದಿಲ್ಲ ಮೊದಲು…