ಮುಂಬಯಿ: ತಾವು ಇಟ್ಟ ಹಣಕ್ಕೆ ಬಡ್ಡಿಯಾದರೂ ಸಿಗುತ್ತೆ ಎನ್ನುವ ಕಾರಣಕ್ಕೆ ಬಹುತೇಕರು ಬ್ಯಾಂಕಿನಲ್ಲಿ ಹಣ ಠೇವಣಿ ಇಡುವುದು ಸಹಜ. ಆದರೆ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಡೆಪಾಸಿಟ್ ಮೇಲಿನ ಬಡ್ಡಿ ಹಣವನ್ನೇ ಇಳಿಕೆ ಮಾಡಿದೆ. ಈ ಮೂಲಕ ಠೇವಣಿದಾರರಿಗೆ ಎಸ್.ಬಿ.ಐ ಆಘಾತ ನೀಡಿದೆ. ಇನ್ನು ಎಸ್.ಬಿ.ಐನ ಈ ನಿರ್ಧಾರವನ್ನೇ ಉಳಿದ ಬ್ಯಾಂಕ್ ಗಳು ಕೂಡ ಪಾಲಿಸುವ ಸಾದ್ಯತೆ ಇದೆ ಎನ್ನಲಾಗುತ್ತಿದೆ.

ರಿಸರ್ವ್ ಬ್ಯಾಂಕ್ ರೆಪೊ ದರಗಳನ್ನು ಕಡಿತ ಮಾಡಿದ ಬೆನ್ನಲ್ಲಿಯೇ ಎಸ್.ಬಿ.ಐ ಕೂಡ ಈ ನಿರ್ಧಾರ ಕೈಗೊಂಡಿದೆ. ಎಲ್ಲ ಬಗೆಯ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇ.4ರಷ್ಟು ಇಳಿಕೆ ಮಾಡಿದೆ. ಹೊಸ ಬಡ್ಡಿ ದರ ಬುಧವಾರದಿಂದಲೇ ಜಾರಿಗೆ ಬಂದಿದೆ. ಹೊಸ ಠೇವಣಿ ಹಾಗೂ ನವೀಕರಣಗೊಳ್ಳುವ ಠೇವಣಿಗಳಿಗೆ ಹೊಸ ದರವೇ ಅನ್ವಯವಾಗಲಿದೆಯಂತೆ. ಶೇ. 7.75 ಬಡ್ಡಿ ನೀಡುತ್ತಿದ್ದ ಆರ್.ಬಿ.ಐನ ಸಣ್ಣ ಉಳಿತಾಯ ಯೋಜನೆಯನ್ನು ಸರಕಾರ ಸ್ಥಗಿತಗೊಳಿಸಿದ ಬೆನ್ನಲ್ಲಿಯೇ ಈಗ ಎಸ್.ಬಿ.ಐ ಈ ಕ್ರಮಕ್ಕೆ ಮುಂದಾಗಿದೆ. ಏಳು ದಿನಗಳ ಕನಿಷ್ಟ ಅವಧಿಯ ಠೇವಣಿ ಮೇಲೆ ಈವರೆಗೆ ಶೇ. 3.3 ಬಡ್ಡಿ ಸಿಗುತ್ತಿತ್ತು. ಆದರೆ ಇದೀಗ ಶೇ. 2.9ರ ಬಡ್ಡಿ ಹಣ ಸಿಗಲಿದೆ.

ಮೇ.12ರಂದು ಮೊದಲ ಕಂತಿನಲ್ಲಿ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಲಾಗಿತ್ತು. ಈ ಮೂಲಕ ತಿಂಗಳಲ್ಲಿ ಎರಡನೇ ಬಾರಿ ಎಸ್.ಬಿ.ಐ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಿದಂತಾಗಿದೆ.

Leave a Reply

Your email address will not be published. Required fields are marked *

You May Also Like

ಕೊರೊನಾಕ್ಕೆ ಬೆಚ್ಚಿಬಿದ್ದ ಕರುನಾಡು: ಸೋಂಕಿತರ ಸಂಖ್ಯೆ 1267, ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 1267 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 13190…

ಅಂದು ವಿಶ್ವ ಕಪ್ ತಂದು ಕೊಟ್ಟ ತಂಡದಲ್ಲಿ ಕ್ರಿಕೆಟಿಗ ಯಶ್ ಪಾಲ್ ಇನ್ನಿಲ್ಲ!

ನವದೆಹಲಿ: 1983 ರಲ್ಲಿ ಭಾರತ ತಂಡ ವಿಶ್ವ ಕಪ್ ತನ್ನ ಮುಡಿಗೇರಿಸಿಕೊಂಡಿತ್ತು. ಇದು ಭಾರತದ ಕ್ರೀಕೆಟ್ ಇತಿಹಾಸದಲ್ಲಿ ಮಹತ್ವದ ವರ್ಷವಾಗಿತ್ತು. ಕ್ರೀಕೆಟ್ ಇತಿಹಾಸದಲ್ಲಿ ಭಾರತಕ್ಕೊಂದು ಮೈಲುಗಲ್ಲಾದ 1983 ರ ವಿಶ್ವಕಪ್ ಪಡೆದ ತಂಡದ ಸದಸ್ಯರೊಬ್ಬರು ನಿಧನ ಹೊಂದಿದ್ದಾರೆ. ಹೌದು, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯಶ್ ಪಾಲ್ ಶರ್ಮಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಮದುಮಗ ಹಾರ ಹಾಕಿದ್ ಕೂಡಲೇ ಖುಷಿಯಾದ ಮದುಮಗಳು ಮಾಡಿದ್ದೇನು?

ಉತ್ತರ ಪ್ರದೇಶ: ಪ್ರತಿಯೊಬ್ಬರಿಗೂ ಮದುವೆ ಬಗ್ಗೆ ಅವರದ್ದೆ ಕನಸಿರುತ್ತೆ. ಆಸೆ-ಆಕಾಂಕ್ಷೆಗಳಿರುತ್ತೆ. ಆದರೆ ಇಲ್ಲೊಬ್ಬ ಯುವತಿ ಮದುಮಗ ತನ್ನ ಕೊರಳಿಗೆ ಹಾರ ಹಾಕಿದ ತಕ್ಷಣ ತನ್ನ ಪ್ರತಿಕ್ರಿಯೇ ಹೇಗಿರಬೇಕೆಂದು ವಿಭಿನ್ನ ಕಲ್ಪನೆಯೊಂದನ್ನು ಕಟ್ಟಿಕೊಂಡಿದ್ದಳು. ಈ ಕಾರಣಕ್ಕಾಗಿ ಏನೋ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದ ಹೊರತು ಭಾರತ ಜಗ್ಗುವುದಿಲ್ಲ..

ಲಡಾಖ್‌ನಲ್ಲಿ ಉಭಯ ರಾಷ್ಟ್ರಗಳ ನಡುವೆ ಗಡಿ ಸಮಸ್ಯೆ ಸೃಷ್ಟಿಯಾದ ಬಳಿಕ ಸೇನೆ ನಿಯೋಜಿಸಲಾಗಿದ್ದು, ಇದೀಗ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳದ ಹೊರತು ಭಾರತ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದಿಲ್ಲ ಎಂದು ಸೇನೆ ತಿಳಿಸಿದೆ.