ರೋಣ: ಕೃಷಿ ಉತ್ಪನ್ನ ಮಾರುಕಟ್ಟೆ(ಕೇಂದ್ರ ಕಚೇರಿ ಹೊಳೆಆಲೂರ) ಸಮಿತಿಯ ಕೊನೆಯ ಅವಧಿಗೆ ನೂತನ ಅಧ್ಯಕ್ಷರಾಗಿ ರೋಣ ರೈತ ಕ್ಷೇತ್ರದ ಸದಸ್ಯ ಅಂದಾನಪ್ಪ ಉರ್ಫ ರಾಜಣ್ಣ ಹೂಲಿ,ಉಪಾಧ್ಯಕ್ಷರಾಗಿ ಹೊಳೆಆಲೂರ ಕ್ಷೇತ್ರದ ಸದಸ್ಯ ಶಿವಾನಂದ ಅರಹುಣಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ರೋಣ ತಾಲೂಕಿನ ಹೊಳೆಆಲೂರಿನ ಎಪಿಎಮ್‌ಸಿ ಕೇಂದ್ರ ಕಛೇರಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಲಿತ ಅಭ್ಯರ್ಥಿಗಳಾದ ಅಂದಾನಪ್ಪ ಹೂಲಿ ಹಾಗೂ ಶಿವಾನಂದ ಅರಹುಣಸಿ ಅವರು ಕ್ರಮವಾಗಿ ನಾಮ ಪತ್ರ ಸಲ್ಲಿಸಿದ್ದರು.ಎರಡು ಸ್ಥಾನಗಳಿಗೆ ಒಂದೊಂದೆ ನಾಮ ಪತ್ರಗಳ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ರೋಣ ತಹಶಿಲ್ದಾರ ಜಿ.ಬಿ.ಜಕ್ಕನಗೌಡ್ರ ಈ ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
೧೪ ಚುನಾಯಿತ ಸದಸ್ಯರ ಬಲ ಹೊಂದಿರುವ ಈ ಎಪಿಎಂಸಿ ಯಲ್ಲಿ ೩ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡು ಒಟ್ಟು ಬಿಜೆಪಿ ೧೦ ಸದಸ್ಯರನ್ನು ಹೊಂದುವ ಮೂಲಕ ಸರಳ ಬಹುತದೊಂದಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆಯಿತು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಶಾಸಕ ಕಳಕಪ್ಪ ಬಂಡಿ,ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ವಿರಣ್ಣ ಶೆಟ್ಟರ, ಅಂಬರೀಶ ಅರಳಿ,ಬಿಜೆಪಿ ಮುಖಂಡರಾದ ಅಂಬರೀಶ ಬಳಿಗೇರ, ಜಿ.ಪಂ ಸದಸ್ಯರಾದ ಶಿವುಕುಮಾರ ನೀಲಗುಂದ, ಪಡಿಯಪ್ಪ ಪೂಜಾರ,ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ವೆಂಕನಗೌಡ ಗೋವಿಂದಗೌಡ್ರ, ಮಗನಗೌಡ ಮಾಲಿಪಾಟೀಲ,ಮುದಿಯಪ್ಪ ಕರಡಿ, ಶಂಕರಪ್ಪ ಸೂಳಿಕೇರಿ, ಸಂಕನಗೌಡ ಅಮಾತಿಗೌಡ್ರ, ಬಾಜಪಾ ಹೋಬಳಿ ಘಟಕದ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಗಿರೀಶ ಚನ್ನಪ್ಪಗೌಡ್ರ, ಬಸವರಾಜ ಕಾತರಕಿ, ಶ್ರೀಶೈಲ ಹಿರೇಹಾಳ, ವರ್ತಕರಾದ ಶಿವಣ್ಣ ಯಾವಗಲ್ಲ, ಶೇಕಪ್ಪ ಹಿರೇಹಾಳ ಬಸವರಾಜ ಸಂಗಟಿ ಹಾಗೂ ಸದಸ್ಯರು ಇದ್ದರು.

Leave a Reply

Your email address will not be published. Required fields are marked *

You May Also Like

ಮುಂಡರಗಿ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ತಡೆಯಾಜ್ಞೆ

ಇತ್ತಿಚೆಗಷ್ಟೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಗದಗ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮುರುಡಿ ಗ್ರಾಮಕ್ಕೆ 93.33% ರಷ್ಟು ಫಲಿತಾಂಶ

ಉತ್ತರಪ್ರಭ ಮುಂಡರಗಿ: ತಾಲ್ಲೂಕಿನ ಮುರುಡಿಯ ಸರಕಾರಿ ಪ್ರೌಢ ಶಾಲೆಯ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ…

ಕಾಫಿಗೂ ಕೊರೊನಾ ಕಾಟ, ಬೆಳೆಗಾರರ ಸಂಕಷ್ಟ..!

ಲಾಕ್ ಡೌನ್ ಹಿನ್ನೆಲೆ ಕಾರ್ಮಿಕ ಕುಟುಂಬಗಳ ಪರಿಸ್ಥಿತಿ ಹೇಳತೀರದಾಗಿದೆ. ಕಾಫಿ ಉದ್ಯಮವನ್ನೆ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಇನ್ನು ಕಾಫಿ ಉತ್ಪಾದನಾ ಉದ್ಯಮದ ಮೇಲೂ ಲಾಕ್ ಡೌನ್ ಪರಿಣಾಮ ಬೀರಿದೆ. ಇದರಿಂದ ಕಾಫಿ ಕೈಗಾರಿಕೆಗಳು ಸಂಕಷ್ಟ ೆದುರಿಸುವಂತಾಗಿದೆ.

ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಸ್ವಯಂ ನಿವೃತ್ತಿಗೆ ಆದೇಶ

ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ದೈಹಿಕವಾಗಿ ಅಸಮರ್ಥಗೊಂಡ ನಿಗಮದ ಅಧಿಕಾರಿಗಳು/ನೌಕರರಿಗೆ ಅನ್ವಯವಾಗುವಂತೆ ಆಕರ್ಶಣೀಯ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ.