ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ಅಟೋ, ಟ್ಯಾಕ್ಸಿ ಚಾಲಕರಿಗೆ 5000 ಸಹಾಯ ಧನ ಘೋಷಣೆ ಮಾಡಿದೆ. ಆದರೆ ಘೋಷಣೆ ಆಗಿ 15 ದಿನಗಳು ಆಗುತ್ತಾ ಬಂದರೂ ಸರ್ಕಾರ ಮಾತ್ರ ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿರಲಿಲ್ಲ.

ಇದೀಗ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಆದರೆ ಹಲವು ತಾಂತ್ರಿಕ ಕಾರಣದಿಂದ ಎಲ್ಲಿ ಸರ್ಕಾರದ ಸೌಲಭ್ಯದಿಂದ ತಾವು ವಂಚಿತರಾಗುತ್ತಾರೋ ಎನ್ನುವ ಆತಂಕ ಆಟೋ,ಟ್ಯಾಕ್ಸಿ ಚಾಲಕರನ್ನು ಕಾಡುತ್ತಿದೆ.

ಸರ್ಕಾರದ ನೆರವಿನ ಬಗ್ಗೆ ಆಸೆಗಣ್ಣುಗಳಿಂದ ಕಾಯುತ್ತಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಪರದಾಡುವಂತಾಗಿದೆ. ಎಲ್ಲಾ ಮಾಹಿತಿಯನ್ನೂ ಇಂಗ್ಲಿಷ್‌ನಲ್ಲಿಯೇ ನೀಡಬೇಕು. ಜೊತೆಗೆ ಆಧಾರ್, ಚಾಲನಾ ಪರವಾನಗಿ ನಂಬರ್, ವಾಹನ ನೋಂದಣಿ ಸಂಖ್ಯೆ, ಚಾಸ್ಸಿಸ್‌ ನಂಬರ್ ಎನ್ನವನ್ನೂ ನಮೂದು ಮಾಡುವುದು ಕಷ್ಟದಾಯಕವಾಗಿದೆ. ಒಮ್ಮೆ ಮೊಬೈಲ್ ಸಂಖ್ಯೆ ನಮೂದು ಮಾಡಿದಾಗ ಒಟಿಪಿ ಸಂಖ್ಯೆ ಬರುತ್ತದೆ. ಮತ್ತೆ ಅರ್ಜಿ ಸಲ್ಲಿಸುವುದು ತಡವಾದರೆ ಸೆಷನ್ ಕ್ಲೋಸ್ ಆಗುತ್ತಿದೆ. ಆಟೋ ಮತ್ತು ಟ್ಯಾಕ್ಸಿ ಚಾಲಕರು ಅಷ್ಟೊಂದು ಆಂಗ್ಲ ಭಾಷಾ ನೈಪುಣ್ಯರೇ..? ಒಂದು ವೇಳೆ ಸೈಬರ್ ಸೆಂಟರ್ ಬಳಿಗೆ ಹೋಗಿ ಸಾಲುಗಟ್ಟಿ ಅರ್ಜಿ ಹಾಕಿಸಬಹುದು. ಆದರೆ ಸಾಮಾಜಿಕ ಅಂತರ ಎನ್ನುವುದು ಮರಿಚಿಕೆ ಆಗುವುದಿಲ್ಲವೇ..? ಅದೇ ಕಾರಣಕ್ಕಾಗಿ ಅಲ್ಲವೇ ಆನ್ಲೈನ್ನಲ್ಲಿ ಅವಕಾಶ ಕಲ್ಪಿಸಿರುವುದು.

ರಾಜ್ಯದಲ್ಲಿ ಅಂದಾಜು ಮೂರೂವರೆ ಲಕ್ಷ ಆಟೋ ಚಾಲಕರು ಇದ್ದು, ಟ್ಯಾಕ್ಸಿ ಚಾಲಕರು ಸೇರಿದಂತೆ ಒಟ್ಟು 7 ಲಕ್ಷದ 75 ಸಾವಿರ ಜನರು ಚಾಲನಾ ವೃತ್ತಿಯಲ್ಲಿದ್ದಾರೆ ಎನ್ನುವುದು ಸರ್ಕಾರದ ಅಂದಾಜು. ಪ್ರತಿದಿನ ಆಟೋ, ಟ್ಯಾಕ್ಸಿ ಓಡಿಸಿದರೆ ಮಾತ್ರ ಆದಾಯದ ಮೂಲ ನೋಡುತ್ತಿದ್ದ ಆಟೋ, ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ ಸರ್ಕಾರದ ಆದೇಶ ಇವರಲ್ಲಿ ಕೊಂಚ ಭರವಸೆ ಮೂಡಿಸಿತ್ತು. ಆದರೆ ಇದೀಗ ಅರ್ಜಿ ಸಲ್ಲಿಕೆ ತಲೆನೋವಾಗಿ ಪರಿಣಮಿಸಿದೆ.  

ಅರ್ಜಿ ಸಲ್ಲಿಸಲು ಸುಲಭ ಮಾರ್ಗವನ್ನೂ ಕಲ್ಪಿಸಿ. ಒಂದು ವೇಳೆ ಅರ್ಜಿಯನ್ನೂ ಸಂಪೂರ್ಣ ಭರ್ತಿ ಮಾಡಿ ಸಲ್ಲಿಕೆ ಮಾಡಿದಾಗ ನಿಮ್ಮ ಹೆಸರು ಅದಲು ಬದಲಾಗಿದೆ. ಆಧಾರ್ ಕಾರ್ಡ್ ಅಪ್ಲೋಡ್ ಮಾಡಿ ಎಂದು ಕೇಳುತ್ತದೆ. ಆದರೆ ಅಪ್ಲೋಡ್ ಮಾಡುವುದು ಎಲ್ಲಿ ಎಂದು ತೋಚದಂತಾಗಿದೆ. ಇಲ್ಲದಿದ್ದರೆ, ಒಮ್ಮೆಗೆ ಎಲ್ಲಾ ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಿ ಎಂದರೂ ಪರವಾಗಿಲ್ಲ. ಆದರೆ ಜನರಿಗೆ ಸುಲಭವಾಗಿ ಆಗುವಂತಿದ್ದರೆ ಉತ್ತಮವಾಗುತ್ತದೆ. ಇದರಿಂದ ಸರ್ಕಾರದ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ನಾವು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಅಟೋ ಹಾಗೂ ಟ್ಯಾಕ್ಸಿ ಚಾಲಕರ ಮನವಿಯಾಗಿದೆ.

Leave a Reply

Your email address will not be published. Required fields are marked *

You May Also Like

ಕೂತುಹಲ ಕೆರಳಿಸಿದ ಸಿದ್ದರಾಮಯ್ಯ ದೆಹಲಿ ಬೇಟಿ

ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಿಢೀರ್‌ ದೆಹಲಿ ಭೇಟಿಗೆ ಮುಂದಾಗಿದ್ದಾರೆ.

ಗೃಹ ಸಚಿವರಿಗೂ ಕೊರೊನ ಪಾಸಿಟಿವ್!

ಹಾವೇರಿ: ಜಿಲ್ಲೆಯ ಶಿಗ್ಗಾವಿ – ಸವಣೂರು ಕ್ಷೇತ್ರದ ಶಾಸಕ ಬೊಮ್ಮಾಯಿ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ನರಗುಂದದಲ್ಲಿ ಭೂ ಕುಸಿತ: ಜನರಲ್ಲಿ ಆತಂಕ.!

ನರಗುಂದ: ಇಲ್ಲಿನ ಶಂಕರಲಿಂಗ ಕಾಲೋನಿಯ ಅಂಬೋಜಿ ಪೇಟೆ ಅವರ ಮನೆ ಮುಂದೆ ಭೂ ಕುಸಿತವಾಗಿದೆ. ಬೆಳಿಗ್ಗೆ…

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 925 ಕ್ಕೆ ಏರಿಕೆ

ಬೆಂಗಳೂರು: ಇಂದಿನ 63 ಪ್ರಕರಣಗಳು ಸೇರಿ ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 925 ಕ್ಕೆ…