ಮುಂಬೈ: ಕೊರೋನಾ ಹಿನ್ನೆಲೆ ಈಗಾಗಲೇ ಒಂದುವರೆ ತಿಂಗಳಿಗೂ ಅಧಿಕ ದಿನಗಳಿಂದ ದೇಶ ಲಾಕ್ ಡೌನ್ ಘೋಷಣೆಯಲ್ಲಿದೆ. ಆದರೆ ಈ ಬಿಡುವಿನ ವೇಳೆಯಲ್ಲಿ ಬಹುತೇಕ ನಟ-ನಟಿಯರು ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಕೊಮಡಿದ್ದರು. ತಮ್ಮ ಹಾಡು,ಕುಣಿತ ಹೀಗೆ ಏನೇ ಒಂದಲ್ಲ ಒಂದು ಚಟುವಟಿಕೆಗಳು ವೈರಲ್ ಆಗುತ್ತಲೇ ಇವೆ. ಆದರೆ ಬಾಲಿವುಡ್ ನಟ ಸಲ್ಲು ಬಾಯ್ ಅಭಿಮಾನಿಗಳಿಗೆ ಮಾತ್ರ ಲಾಕ್ ಡೌನ್ ನಲ್ಲಿ ಸಲ್ಲುಭಾಯ್ ಏನು ಮಾಡ್ತಿದ್ದಾರೆ ಅಂತ ಕುತೂಹಲ ಇತ್ತು. ಆದ್ರೆ ಅಭಿಮಾನಿಗಳಿಗೆ ತಾವು ಈ ಬಿಡುವಿನಲ್ಲಿ ಏನು ಮಾಡ್ತಿದ್ದಾರೆ ಅಂತ ತೋರಿಸಿದ್ದಾರೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಫಾರಂ ಹೌಸ್‌ನಲ್ಲಿ ಕುಟುಂಬ ಸದಸ್ಯರೊಂದಿಗೆ ಸಿಕ್ಕಿ ಹಾಕಿಕೊಂಡಿರುವ ಸಲ್ಮಾನ್ ಖಾನ್ ತನ್ನ ಹವ್ಯಾಸಗಳನ್ನು ಪುನರ್‌ಜಾಗೃತಗೊಳಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಚಿತ್ರ ಬರೆಯುವುದು, ಕುದುರೆ ಸವಾರಿ ಮಾಡುವುದು ಹೀಗೆ ಒಂದಲ್ಲ ಒಂದು ಚಟುವಟಿಯಲ್ಲಿ ತಮ್ಮನ್ನು ತಾವು ಫುಲ್ ಬ್ಯೂಸಿಯಾಗಿಸಿಕೊಮಡಿದ್ದಾರೆ ಸಲ್ಮಾನ್ ಖಾನ್.

ಬಾಲಿವುಡ್ ನಟ ಸಲ್ಮಾನ್ ಖಾನ್ ರಚಿಸಿ ಹಾಡಿರುವ ಕೊರೋನಾ ಪ್ಯಾರ್ ಕೊರೋನಾ ಗೀತೆಗೆ ನೃತ್ಯ

ಪ್ಯಾರ್ ಕರೋನಾ ಎನ್ನುವ ಹಾಡಿಗೆ ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ ಎಂಬ ಸಾಲುಗಳನ್ನೂ ಸೇರಿಸಿಕೊಂಡು ಗೀತೆ ರಚನೆ ಮಾಡಿದ್ದಾರೆ ಸಲ್ಮಾನ್ ಖಾನ್. ಸುಮಧುರು ಸಂಗೀತಕ್ಕೆ ಕೊಂಚ ರ್ಯಾಪ್ ಸ್ಪರ್ಷ ಕೂಡ ಈ ಹಾಡಿಗೆ ನೀಡಲಾಗಿದೆ. ಅಂದ್ಹಾಗೆ ಈ ಗೀತೆ ರಚನೆಯಲ್ಲಿ ಹುಸೇನ್ ದಲಾಲ್ ಅವರು ಕೂಡ ಸಲ್ಮಾನ್ ಗೆ ಸಾಥ್ ನೀಡಿದ್ದಾರೆ. ಹಾಡಿಗೆ ಸಂಗೀತ ನಿರ್ದೇಶನ ಮಾಡಿರುವುದು ಸಾಜಿದ್ ವಾಜಿದ್. ಹಾಡಿನ ನಿರ್ದೇಶನವನ್ನು ಅಭಿರಾಜ್ ಮಿನಾವಾಲಾ ಮಾಡಿದ್ದಾರೆ. ಸಂಗೀತ ನಿರ್ಮಾಣ ಅದಿತ್ಯ ದೇವ್ ಅವರದ್ದು.

ಸಲ್ಲುಭಾಯ್ ಹವ್ಯಾಸಗಳಲ್ಲಿ ಇದೀಗ ಗೀತೆರಚನೆ ಹೊಸ ಸೇರ್ಪಡೆಯಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ನಾವೆಲ್ಲ ಅಳವಡಿಸಿಕೊಳ್ಳಬೇಕಾದ ಅಂಶಗಳ ಕುರಿತು ಸ್ವತಃ ಹಾಡು ರಚಿಸಿ ತಾವೇ ಹಾಡಿದ್ದು ವಿಶೇಷ. ಸಲ್ಮಾನ್ ಖಾನ್ ಅವರ ಈ ಹಾಡು ಕೆಲವೇ ಗಂಟೆಗಳಲ್ಲಿ ಫುಲ್ ವೈರಲ್ ಆಗಿದೆ.

Leave a Reply

Your email address will not be published. Required fields are marked *

You May Also Like

ಮದುವೆಯಾಗುವುದಾಗಿ 46 ವರ್ಷದ ಮಹಿಳೆಗೆ ವಂಚನೆ!

ಮದುವೆಯಾಗುವುದಾಗಿ ನಂಬಿಸಿ 46 ವರ್ಷದ ಮಹಿಳೆಗೆ ರೂ.5.6 ಲಕ್ಷ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಎಮ್ ಇಸ್ ಎಸ್ ಮತ್ತು ಶಿವಸೇನೆ ನಿಷೇಧಿಸಲು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ಕಾರ್ಯಕರ್ತರು ಆಗ್ರಹ

ಲಕ್ಷ್ಮೇಶ್ವರ:ನಾಡಧ್ವಜ ಸುಟ್ಟು ಅಪಮಾನ ಮಾಡಿದ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿದ ಎಂ.ಇ.ಎಸ್.ಹಾಗೂ ಶಿವಸೇನೆ…

ಮಾಜಿ ಸಂಸದ ಐ.ಜಿ.ಸನದಿಗೆ ಮಾತೃ ವಿಯೋಗ

ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಂಸದರು ಆದ ಮಾನ್ಯ ಶ್ರೀ ಪ್ರೋ.ಐ.ಜಿ.ಸನದಿ ಅವರ ತಾಯಿ ಶ್ರೀಮತಿ ಫಾತೋಬಿ ಕೋಂ ಗೌಸುಸಾಹೇಬ್.ಸನದಿ ಶತಾಯುಷಿ ವಯಾ (102) ಇವರು ಇಂದು ಮಧ್ಯಾಹ್ನ 1-00

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಸೋಂಕು!

ಹಾವೇರಿ: ರಾಜ್ಯದಲ್ಲಿ ಜೂ. 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜರುಗಲಿವೆ. ಆದರೆ, ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯಲ್ಲಿ ಕೊರೊನಾ…