ಪ್ರಿಯ ಸಖ,

      ನೀನಲ್ಲಿ ನಾನಿಲ್ಲಿ ಆದರೆ ನಮ್ಮಿಬ್ಬರ ಇರುಳಿಗೆ ಇರುವುದು ಚಂದ್ರ ಒಬ್ಬನೆ! ಇಂದೆಕೊ ಆ ಚಂದ್ರ ಮಂಕಾಗಿದ್ದಾನೆ ಹಾಗಾಗಿ ನೀನು ಅಲ್ಲಿ ಹೇಗಿರುವೆ ಎಂಬ ಆತಂಕ ನನಗೆ. ನನ್ನ ಖುಷಿಗಾಗಿ iam fine ಎಂದು ಹೇಳುತ್ತಿರುವೆ ಅಂತ ಗೊತ್ತು. ಮುದ್ದು, ನನ್ನ ದೇಹ ಇಲ್ಲಿರಬಹುದು ಆದರೆ ನನ್ನ ಹೃದಯವಿದು ನಿನ್ನಲ್ಲಿ ಜೋಪಾನವಾಗಿರಲಿ ಎಂದು ಹೇಳಿ ಇಟ್ಟು ಬಂದಿದ್ದನ್ನು ಮರೆತು ಹೋಯಿತೇ?

       ಆ ಹೃದಯದ ಬಡಿತದ ನಾದ ನನಗೆ ಅರ್ಥವಾಗಿದೆ ಯಾಕೊ ಎನೂ ಸರಿಯಿಲ್ಲವೆಂದು. ನಾನು ನಿನ್ನ ಜೀವದ ಗೆಳತಿ, ಆತ್ಮ ಸಖಿ ನನ್ನಲ್ಲಿ ಏಕೆ ಈ ಮುಚ್ಚುಮರೆ? ಮೊನ್ನೆ ನೀನು ಕೊಡಿಸಿದ ಚಂಪಾಕಲಿಯನ್ನು ಇಬ್ಬರೂ ಹಂಚಿಕೊಂಡು ತಿನ್ನಲಿಲ್ಲವೇ! ಸಿಹಿಯಲ್ಲಿ ಮಾತ್ರ ನನಗೆ ಪಾಲೆ? ದುಃಖದಲ್ಲಿ ಇಲ್ಲವೇನು? ಹೇಳಿ ಬಿಡು ನನ್ನ ದೊರೆ ನಿನ್ನ ಬೇಸರವೆನೆಂದು. ನನ್ನಿಂದ ತಡೆಯಲಾಗುತ್ತಿಲ್ಲ. ನಿನ್ನ ಸಣ್ಣ ನೋವು ನನ್ನಲ್ಲಿ ವೃಣವಾಗಿ ಜೀವ ಹಿಂಡುತ್ತಿದೆ.

       ಸರ್ವ ಋತುಗಳಲ್ಲೂ ನಾನು ಸದಾ ನಿನ್ನೊಂದಿಗಿರುವೆ, ನಿನ್ನ ನೋವಿನಲ್ಲೂ ನಲಿವಿನಲ್ಲೂ. ಹೇಳಿ ಹಗುರಾಗಿ ಬಿಡು ನಿನ್ನ ಬೇಸರವೇನೆಂದು. ನನ್ನ ತೋಳಿನಾಸರೆ ನಿನಗೆ ಸಾಂತ್ವನ ನೀಡಲು ಕಾಯುತಿದೆ…..ತಡ ಮಾಡಬೇಡ. ಇತಿ ನಿನ್ನ……

ಕಲ್ಪನಾ ಸಾಗರ, ಹುಬ್ಬಳ್ಳಿ

Leave a Reply

Your email address will not be published. Required fields are marked *

You May Also Like

ಮಣಿಪುರ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ..!

ಇಂಫಾಲ: ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿಯ ಮೂವರು ಶಾಸಕರು ಮತ್ತು ಎನ್.ಪಿ.ಪಿ.ಯ ಒಬ್ಬ ಶಾಸಕ ರಾಜೀನಾಮೆ ನೀಡಿದ್ದಾರೆ.…

ಬುಧವಾರ ಭಾರತಕ್ಕೆ ಬರಲಿವೆ ರಫೇಲ್ ಯುದ್ಧ ವಿಮಾನ: ಸದ್ಯ ಫ್ರಾನ್ಸ್ ಬಿಟ್ಟಿವೆ ಫೈಟರ್ ಜೆಟ್ಸ್

ಸೋಮವಾರ ಫ್ರಾನ್ಸ್ ನಿಂದ ಹೊರಟಿರುವ ಮೊದಲ ಬ್ಯಾಚಿನ ರಫೇಲ್ ಯುದ್ಧ ಫ್ರಾನ್ಸ್ ಬಿಟ್ಟಿರುವ 5 ರಫೇಲ್ ಯುದ್ಧ ವಿಮಾನಗಳು 7 ಸಾವಿರ ಕಿಮೀ ದೂರ ಕ್ರಮಿಸಿ ಬುಧವಾರ ಭಾರತವನ್ನು ತಲುಪಲಿವೆ. ಯುಎಇನಲ್ಲಿರುವ ಫ್ರಾನ್ಸ್ ಏರ್ ಬೇಸ್ ನಲ್ಲಿ ಇಳಿದು ನಂತರ ಭಾರತ ತಲುಪಲಿವೆ. ಎವಿಯೇಷನ್ ಕಂಪನಿ ಡಸಾಲ್ಟ್ ನಿರ್ಮಿಸಿರುವ ಈ ಅತ್ಯಾಧುನಿಕ ಫೈಟರ್ ಜೆಟ್ಸ್ ದಕ್ಷಿಣ ಫ್ರಾನ್ಸಿನ ಬ್ರೊಡಾಕ್ಸ್ ನಗರದಿಂದ ಪ್ರಯಾಣ ಬೆಳೆಸಿವೆ. 2016ರಲ್ಲಿ ಭಾರತವು ಫ್ರಾನ್ಸ್ ಕಂಪನಿ ಡಸಾಲ್ಟ್ ಕಂಪನಿಯಿಂದ ಇಂತಹ 36 ವಿಮಾನಗಳನ್ನು ಖರೀದಿಸಲು 59 ಸಾವಿರ ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತ್ತು. ಅದರ ಮೊದಲ ಭಾಗವಾಗಿ ಈಗ 5 ವಿಮಾನಗಳು ದೇಶದ ಸೇನೆಯ ಭಾಗವಾಗಲಿವೆ.

ಅಬ್ಬಾ…! ಮಹಾರಾಷ್ಟ್ರದಲ್ಲಿ ಎಷ್ಟು ಜನ ಪೊಲೀಸರಿಗೆ ಕೊರೊನಾ ಬಂದಿದೆ ಗೊತ್ತಾ?

ಮುಂಬಯಿ: ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಹಾವಳಿ ಮಿತಿ ಮೀರುತ್ತಿದೆ. ಕೊರೊನಾ ವಾರಿಯರ್ಸ್ ನ್ನು ಅದು…

ದಿಢೀರ್ ರಾಷ್ಟ್ರಪತಿ ಭೇಟಿಯಾದ ಪ್ರಧಾನಿ ಮೋದಿ: ಯುದ್ಧ ಸಿದ್ಧತೆಯೋ? ಸಂಪುಟ ವಿಸ್ತರಣೆಯೋ..?

ನವದೆಹಲಿ: ಇಂದು 11.30ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರಪತಿ ಭೇಟಿಗೆ ತೆರಳಿದ ಕೂಡಲೇ ರಾಜಕೀಯ ವಲಯದಲ್ಲಿ…