ತಂದೆ ಬರ್ತಡೆಗೆ ಕೇಕ್ ತರಲು ಬಂದವರ ಬೈಕ್ ಜಪ್ತಿ!

ಗದಗ: ಜೂ.1ರವರೆಗೆ ಗದಗ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದಾಗ್ಯೂ ಜನರು ಮಾತ್ರ ಅನಾವಶ್ಯಕ ಓಡಾಟ ನಿಲ್ಲಿಸುತ್ತಿಲ್ಲ. ತಂದೆಯ ಹುಟ್ಟು ಹಬ್ಬ ಹಿನ್ನೆಲೆ ಕೇಕ್ ತರಲು ಹೊರ ಬಂದವರನ್ನು ತಡೆದ ಪೊಲೀಸರು ಬೈಕ್ ಸೀಜ್ ಮಾಡಿದ್ದಾರೆ.

ಜನ ಮೈಮರೆಯದೆ ಮಾರ್ಗಸೂಚಿ ಪಾಲಿಸಿ; ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು: ಮೇ 30-ಕೋವಿಡ್ ಪಾಸಿಟೀವ್ ಪ್ರಮಾಣ ಕಡಿಮೆಯಾಗಿದೆ ಎಂದು ಜನರು ಮೈಮರೆಯದೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್‌ಗೆ 60ನೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಚಿತ್ರರಂಗದ ಬಣ್ಣದ ಲೋಕದಲ್ಲೇ ಕನಸು ಕಟ್ಟಿಕೊಂಡ ಕನಸುಗಾರ ವಿ.ರವಿಚಂದ್ರನ್ ಅವರಿಗೆ ಇಂದು 60 ನೆ ವರ್ಷದ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟನ ಷಷ್ಠಿ ಪೂರ್ತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು ಎಂದು ರವಿಚಂದ್ರನ್ ಅಭಿಮಾನಿಗಳು ಕನಸು ಕಟ್ಟಿಕೊಂಡಿದ್ದರಾದರೂ ಅವರ ಕನಸಿಗೆ ಕೊರೊನಾ ಮಹಾಮಾರಿ ತಣ್ಣಿರೆರಚಿರುವುದರಿಂದ ತಾವು ಇದ್ದಲ್ಲಿಯೇ ಸರಳವಾಗಿ ಆಚರಿಸಿದ್ದಾರೆ.

ದೆಹಲಿಯಲ್ಲಿ ಕೆಲ ರಿಯಾಯಿತಿಯೊಂದಿಗೆ ಜೂ.7ರವರೆಗೂ ನಿರ್ಬಂಧ ಮುಂದುವರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್ಡೌನ್ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗದ ಕಾರಣ, ಕೆಲ ರಿಯಾಯಿತಿಯೊಂದಿಗೆ ಲಾಕ್ಡೌನ್ ನಿರ್ಬಂಧಗಳು ಬರುವ ಜೂನ್ 7 ವರೆಗೂ ಮುಂದುವರೆಯಲಿದೆ.

ಜೂನ್ 7 ರವರೆಗೆ ಕೊಪ್ಪಳ ಜಿಲ್ಲೆ ಸಂಪೂರ್ಣ ಲಾಕ್ ಡೌನ್- ಡಿಸಿ

ಕೊಪ್ಪಳ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೊಪ್ಪಳ ಜಿಲ್ಲೆಯನ್ನು ಮೇ.31 ಬೆಳಿಗ್ಗೆ 6 ಗಂಟೆಯಿಂದ ಜೂ.7 ರಾತ್ರಿ 12 ಗಂಟೆಯ ವರೆಗೆ ಸಂಪೂರ್ಣ ಲಾಕಡೌನ್ ಮುಂದುವರೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದಾರೆ.

ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಯುವತಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇಂತಹ ಅಮಾನವೀಯ ಘಟನೆ ಸಹಿಸಲಾಗದು ಎಂದು ಕಿಡಿಕಾರಿದ್ದಾರೆ.

ಒಡಿಶಾ ಸಿಎಂ ಜೊತೆ ಪ್ರಧಾನಿ ಸಭೆ: ಯಾಸ್ ಚಂಡಮಾರುತದಿಂದ ಹಾನಿ ಮಾಹಿತಿ

ಭುವನೇಶ್ವರ: ಶುಕ್ರವಾರ ಬೆಳಗ್ಗೆ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಲ್ಲಿನ ವಿಮಾನ ನಿಲ್ದಾಣದ ಕಾನ್ಫರೆನ್ಸ್ ಹಾಲ್ ನಲ್ಲಿ ಇಡಿಶಾ ಸಿಎಂ ನವೀನ್ ಪಟ್ನಾಯಕ್ ಜೊತೆ ಸಭೆ ನಡೆಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್: ಫಿಲ್ಡಿಗಿಳಿದ ಡಿವೈಎಸ್ಪಿ

ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್: ಫಿಲ್ಡಿಗಿಳಿದ ಡಿವೈಎಸ್ಪಿ ಗದಗ: ಕೊರೊನಾ ನಿಯಂತ್ರಣ ಹಿನ್ನೆಲೆ ಐದು‌ ದಿನಗಳ ಕಾಲ ಗದಗ ಜಿಲ್ಲೆಯಲ್ಲಿ ಕಠೀಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಶುಕ್ರವಾರ ವಿನಾಕಾರಣ ರಸ್ತೆಗಿಳಿದವರ ಬೈಕ್ ಸೀಜ್ ಮಾಡಲಾಯಿತು. ಸ್ವತ: ಡಿವೈಎಸ್ಪಿ ಫಿಲ್ಡಿಗಿಳಿದು ಬೈಕ್ ಸವಾರರಿಗೆ ತರಾಟೆಗೆ ತೆಗೆದುಕೊಂಡ ದೃಷ್ಯಗಳು ಕಂಡು ಬಂದವು. ರಿಪೋರ್ಟರ್ ಎಂದು ಸುಳ್ಳು ಹೇಳಿದ ವ್ಯಕ್ತಿ, ನಕಲಿ‌ ಪತ್ರಕರ್ತ ಎಂದು ತಿಳಿದ ತಕ್ಷಣ ಬೈಕ್ ವಶಕ್ಕೆ ಪಡೆಯಲಾಯಿತು.

ಶಾರ್ಟ್ ಸರ್ಕ್ಯೂಟ್ ನಿಂದ ಜನರಲ್ ಸ್ಟೋರ್ ಗೆ ಬೆಂಕಿ!

ಗದಗ: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಜನರಲ್ ಸ್ಟೋರ್ ಒಂದು ಹೊತ್ತಿ ಉರಿದ ಘಟನೆ ಗದಗ ನಗರದ ಕೆ.ಸಿ.ರಾಣಿ ರಸ್ತೆಯಲ್ಲಿರುವ ಚೇತನ ಕ್ಯಾಂಟಿನ್ ಸರ್ಕಲ್ ಬಳಿ ನಡೆದಿದೆ. ಬಸವರಾಜ್ ನಾಡಗೌಡ್ರ ಎಂಬವವರಿಗೆ ಸೇರಿದ ಜನರಲ್ ಸ್ಟೋರ್ ಇದಾಗಿದೆ ಎಂದು ಹೇಳಲಾಗ್ತಿದ್ದು, ಜನರಲ್ ಸ್ಟೋರ್ ಬೆಂಕಿಗೆ ಆಹುತಿಯಾಗಿದೆ. ಸ್ಟೋರ್ ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹಾನಿಯಾಗಿವೆ.

ಕರುಳ ಕುಡಿಯ ಜೋಗುಳದಲಿ

ನೋವು! ಯಾತನೆ! ಯಮಯಾತನೆ! ಇಡೀ ದೇಹವನ್ನೇ ಒಳ್ಳಲ್ಲಿ ಹಾಕಿ ಕುಟ್ಟಿದ ಅನುಭವ. ಸಾಕಪ್ಪ ಸಾಕು ಈ ಜೀವನ ಎನಿಸುವಷ್ಟು ವೈರಾಗ್ಯ.ಈ ಬದುಕೇ ಬೇಡ. ತಡೆದುಕೊಳ್ಳಲಾರೆ… ಸಹಿಸಲಾರೆ… ಅನುಭವಿಸಲಾರೆ. ಕಣ್ಣು ಬಿಡಲೂ ತ್ರಾಣವಿಲ್ಲ. ಯಾವುದೋ ಕೈಗಳು ಬಂದು ತಡವುತ್ತಿವೆ. ಹಣೆ ಮುಟ್ಟಿ ನೋಡಿದ ಸ್ಪರ್ಶದ ಅನುಭವ. ಆದರೂ ಕಣ್ಗಳು ಮೆತ್ತಿಕೊಂಡಿವೆ. ನರಳುವುದು, ಮುಲುಗುವುದು, ಒದ್ದಾಡುವುದ ಬಿಟ್ಟರೆ ಏನೂ ಮಾಡಲಾಗದ ಅಸಹಾಯಕತೆ.

ಹೆಳವರು, ಕೌಟುಂಬಿಕ ವ್ಯವಸ್ಥೆಯ ಚಿತ್ರಗುಪ್ತರು

“ತೂಗು ತೊಟ್ಟಿಲಾಗಲಿ, ಬೆಳ್ಳಿ ಬಟ್ಟಲಾಗಲಿ, ಮನೆಯ ಸಿರಿಸಂಪತ್ತ ಬೆಳೆಯಲಿ, ಯವ್ವಾ, ನೀನು ಕೊಡುವ ಬಗಸಿ ಜೋಳ ಬ್ಯಾಡ. ಕಟ್ಟಿಮ್ಯಾಗಿನ ಜೋಳದ ಚೀಲ ಬಿಚ್ಚಿ ಜೋಳಿಗೆ ತುಂಬಾ ಕೊಡು. ಹಕ್ಕ್ಕಾಗಿನ ಆಕಳ ಮತ್ತು ಕರು ಕೊಡು, ಎಂದು ಹಾಡುತ್ತಾ, ಕಾಡುತ್ತಾ ‘ಕುಟುಂಬದ ವಂಶವೃಕ್ಷದ ಬಗ್ಗೆ ತಿಳಿಸಿ ಕಾಣಿಕೆ ಪಡೆಯುವವರೆ ಹೆಳವರು.

ಚಿತ್ರಕಲಾ, ಜಾನಪದ ವಿವಿ ಸಿಬ್ಬಂದಿ ವೇತನಕ್ಕೆ 11.60 ಲಕ್ಷ ಬಿಡುಗಡೆ: ವಿಪ ಸದಸ್ಯ ಸಂಕನೂರ

ರಾಜ್ಯದಲ್ಲಿ ಅಡ್ಹಾಕ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮೂರು ಚಿತ್ರಕಲಾ ಮಹಾವಿದ್ಯಾಲಯದ ಹಾಗೂ ಜಾನಪದ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇವುಗಳ ಸಿಬ್ಬಂದಿಗಳಿಗೆ 2020-21ನೇ ಸಾಲಿನಲ್ಲಿ ನೀಡಬೇಕಾದಂತಹ ಬಾಕಿ ವೇತನಕ್ಕಾಗಿ ಆರ್ಥಿಕ ಇಲಾಖೆ 11 ಕೋಟಿ 60 ಲಕ್ಷ ಹಣ ಬಿಡುಗಡೆ ಮಾಡಿದೆ ಎಂದು ವಿಧಾನ ಪರಿಷತ್ತ ಸದಸ್ಯ ಎಸ್.ವ್ಹಿ.ಸಂಕನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.