ಉತ್ತರಪ್ರಭ ಸುದ್ದಿ ಗದಗ:
ಭಾರತೀಯ ಜೀವ ವಿಮಾ ನಿಗಮ (ಎಲ್.ಐ.ಸಿ) ಪ್ರತಿನಿಧಿಗಳ ಮೇಲೆ ಅಭಿವೃದ್ಧಿ ಅಧಿಕಾರಿ ಅವಹೇಳನವಾಗಿ ದರ್ಪ ತೋರಿರುವ ಘಟನೆ ಇದಾಗಿದೆ.
ಈ ಕೂರಿತು ಪತ್ರಿಕಾ ಹೇಳಿಕೆ ನೀಡಿರುವ ಭಾರತಿಯ ಜೀವವಿಮಾ ನಿಗಮದ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಸೋಮು ಲಮಾಣಿ ದಿ. 3.4.2023ರಂದು ನಾನು ಎಲ್.ಐ.ಸಿ ಕಛೇರಿಯಲ್ಲಿ ಹಣ ಪಾವತಿಸಲು ಹೋದ ಸಮಯದಲ್ಲಿ ಏಕಾ ಏಕಿ ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಸಿ.ಸಿದ್ದಾರ್ಥನ್ ಬಂದು ನಿನು ಪ್ರತಿನಿಧಿಗಳ ಸಂಘದ ಅಧ್ಯಕ್ಷನಾದರೆ ದೋಡ್ಡವನೆ, ನಾನು ಇಲ್ಲಿನ ಅಧಿಕಾರಿ, ಎಂದು ಏಕ ವಚನದಲ್ಲಿ ಮಾತನಾಡುವದಲ್ಲದೆ, ನಿನ್ನ ಕೇಲಸವನ್ನು ಹೇಗೆ ಮಾಡುತ್ತಿಯಾ ನೋಡೊನ ಎಂದು ಅವಹೇಳಿಸಿದ್ದಾರೆ.
ಇವರಿಗೆ ಕನಿಷ್ಠ ತಿಳಿವಳಿಕೆ ಇಲ್ಲದ ರೀತಿಯಲ್ಲಿ ನಿಂಧನೆ ಮಾಡಿದ್ದು, ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳಿಗೆ ಅವಮಾನ ಮಾಡಿರುತ್ತಾರೆ ಹಾಗೂ ಎಲ್ಲಾ ಪ್ರತಿನಿಧಿಗಳಿಗೆ ಶೋಷಣೆ ಮಾಡುತ್ತಾ ಬಂದಿರುವದನ್ನು ಬಲವಾಗಿ ಖಂಡಿಸುತ್ತೆನೆ, ಅವರು ಹೀರಿಯ ಅಧಿಕಾರಿಯಾಗಿದ್ದು ಅವರ ವಯಸ್ಸಿಗೆ ಶೋಭೆ ತರುವಂತಹದಲ್ಲಾ. ಸಂಘದ ಶ್ರಯೋಭಿವೃದ್ಧಿಗೆ ಸಹಿಸದೆ, ಈ ರೀತಿ ಅಪಮಾನ ಮಾಡಿರುತ್ತಾರೆ, ಈ ಕೂಡಲೆ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾಮಾಜಿಕ ಹೋರಾಟದೊಂದಿಗೆ, ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಪತ್ರಿಕಾ ಪ್ರಕಟನೆಯ ಮೂಲಕ ಎಚ್ಚರಿಸಿದ್ದಾರೆ.