ಉತ್ತರಪ್ರಭ ಸುದ್ದಿ,

ಆಲಮಟ್ಟಿ: ಪಟ್ಟಣದ ರೇಲ್ವೆ ಸ್ಟೇಷನ್ ರಸ್ತೆಯ ಹಜರತ್ ಮಾಬೂಸುಭಾನಿ ದರ್ಗಾ ಗಂಧ ಹಾಗೂ ಉರುಸು ಕಾರ್ಯಕ್ರಮ ಇದೇ ನ. 5 ರಿಂದ ಎರಡು ದಿನಗಳ ಕಾಲ ನಡೆಯಲಿದೆ. ಇದೇ ಶನಿವಾರ 5 ರಂದು ಸಂಜೆ 5 ಕ್ಕೆ ಚಿಮ್ಮಲಗಿ ಭಾಗ-1 ಎ ಗ್ರಾಮದ ಇಬ್ರಾಹಿಂ ತೆಲಗಿ ಅವರ ಮನೆಯಿಂದ ಕುದುರೆ ಸಮೇತವಾಗಿ ಹೊರಡುವ ಗಂಧದ ಮೆರವಣಿಗೆ ಆಲಮಟ್ಟಿಯ ನಾನಾ ಕಡೆ ಸಂಚರಿಸಲಿದೆ.ದರ್ಗಾಕ್ಕೆ ಗಂಧ ಏರಿಸುವ ಕಾರ್ಯಕ್ರಮ ರಾತ್ರಿ ನಡೆಯಲಿದ್ದು ಜೊತೆಗೆ ಅನ್ನಸಂತರ್ಪಣೆ ಜರುಗಲಿದೆ. ಮಾರನೆಯದಿನ ಭಾನುವಾರ ಉರುಸು ಜರುಗಲಿದ್ದು, ತನ್ನಿಮಿತ್ತ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಶಾಸಕ ಶಿವಾನಂದ ಪಾಟೀಲ, ಲಕ್ಷ್ಮೇಶ್ವರದ ದೂದನಾನಾ, ಮುಖ್ಯ ಎಂಜಿನಿಯರ್ ಎಚ್. ಸುರೇಶ, ಡಿ. ಬಸವರಾಜ ಮತ್ತೀತರರು ಪಾಲ್ಗೊಳ್ಳಲಿದ್ದಾರೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಎನ್ ಡಿಎ ಗೆ ಆಯ್ಕೆಯಾಗಿರುವ ಅಭಿಷೇಕ ಖ್ಯಾಡಿ, ಹಸನ್ ಡೋಂಗ್ರಿ ಯಂಡಿಗೇರಿ, ಮುದಕಪ್ಪ ಕುಂಬಾರ, ಭಾಷಾಸಾಬ್ ಮನಗೂಳಿ, ಚನ್ನಬಸು ತಳವಾರ, ಲಾಲ್ ಸಾಬ್ ಗಡ್ಡಿ ಸೇರಿದಂತೆ ನಾನಾ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದು ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷ ಎಂ.ಆರ್. ಕಮತಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಇಂದು ದ್ವಿತಿಯ ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿಗಳೆಷ್ಟು..?

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಇಂದು ಯಶಸ್ವಿಯಾಗಿ ನಡೆದಿದೆ. 5,95,997…

ಬೆಳಗಾವಿ ಹಾಗೂ ಹಾಸನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಹಾಗೂ ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆ.ಗೋಪಾಲಯ್ಯ ಅವರು ಹಾಸನ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಗೊಂಡಿದ್ದಾರೆ.

ಧಾರವಾಡದ ಸೋಂಕಿತ ವ್ಯಕ್ತಿಯಿಂದ ವೈದ್ಯರಿಗೂ ಶುರುವಾಗಿದೆ ಸಂಕಷ್ಟ!

ಹೊಸಯಲ್ಲಾಪುರ ಬಳಿಯ ಕೋಳಿಕೆರೆ ಪ್ರದೇಶದಲ್ಲಿನ ವ್ಯಕ್ತಿಗೆ ಕೊರೊನಾ ಸೋಂಕು ನಿನ್ನೆ ಕಂಡು ಬಂದಿದ್ದು, ಜಿಲ್ಲಾಡಳಿತ ಆ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಕಲೆ ಹಾಕಿದೆ.

ಭಾನುವಾರ ಮದುವೆಗೆ ಅವಕಾಶ ರಾಜ್ಯ ಸರ್ಕಾರದ ಆದೇಶ

ರಾಜ್ಯಾಧ್ಯಂತ ಪ್ರತಿ ಭಾನುವಾರದಂದು ಬೆಳಿಗ್ಗೆ 7ಗಂಟೆಯಿಂದ ಸಂಜೆಯ 7 ಗಂಟೆಯವರೆಗೆ ಕರ್ಪ್ಯೂ ಜಾರಿ ಮಾಡಿದ್ದರಿಂದಾಗಿ, ಮದುವೆ ಸಮಾರಂಭ ಕೂಡ ನಡೆಸಬಾರದಾ ಎಂಬ ಗೊಂದಲಕ್ಕೆ ರಾಜ್ಯದ ಜನತೆ ಒಳಗಾಗಿದ್ದರು. ಇದೀಗ ಮದುವೆ ಸಮಾರಂಭವನ್ನು ನಡೆಸುವುದಕ್ಕೆ ಅವಕಾಶ ನೀಡಿ, ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.