ಉತ್ತರಪ್ರಭ ಸುದ್ದಿ,

ಆಲಮಟ್ಟಿ: ಪಟ್ಟಣದ ರೇಲ್ವೆ ಸ್ಟೇಷನ್ ರಸ್ತೆಯ ಹಜರತ್ ಮಾಬೂಸುಭಾನಿ ದರ್ಗಾ ಗಂಧ ಹಾಗೂ ಉರುಸು ಕಾರ್ಯಕ್ರಮ ಇದೇ ನ. 5 ರಿಂದ ಎರಡು ದಿನಗಳ ಕಾಲ ನಡೆಯಲಿದೆ. ಇದೇ ಶನಿವಾರ 5 ರಂದು ಸಂಜೆ 5 ಕ್ಕೆ ಚಿಮ್ಮಲಗಿ ಭಾಗ-1 ಎ ಗ್ರಾಮದ ಇಬ್ರಾಹಿಂ ತೆಲಗಿ ಅವರ ಮನೆಯಿಂದ ಕುದುರೆ ಸಮೇತವಾಗಿ ಹೊರಡುವ ಗಂಧದ ಮೆರವಣಿಗೆ ಆಲಮಟ್ಟಿಯ ನಾನಾ ಕಡೆ ಸಂಚರಿಸಲಿದೆ.ದರ್ಗಾಕ್ಕೆ ಗಂಧ ಏರಿಸುವ ಕಾರ್ಯಕ್ರಮ ರಾತ್ರಿ ನಡೆಯಲಿದ್ದು ಜೊತೆಗೆ ಅನ್ನಸಂತರ್ಪಣೆ ಜರುಗಲಿದೆ. ಮಾರನೆಯದಿನ ಭಾನುವಾರ ಉರುಸು ಜರುಗಲಿದ್ದು, ತನ್ನಿಮಿತ್ತ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಶಾಸಕ ಶಿವಾನಂದ ಪಾಟೀಲ, ಲಕ್ಷ್ಮೇಶ್ವರದ ದೂದನಾನಾ, ಮುಖ್ಯ ಎಂಜಿನಿಯರ್ ಎಚ್. ಸುರೇಶ, ಡಿ. ಬಸವರಾಜ ಮತ್ತೀತರರು ಪಾಲ್ಗೊಳ್ಳಲಿದ್ದಾರೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಎನ್ ಡಿಎ ಗೆ ಆಯ್ಕೆಯಾಗಿರುವ ಅಭಿಷೇಕ ಖ್ಯಾಡಿ, ಹಸನ್ ಡೋಂಗ್ರಿ ಯಂಡಿಗೇರಿ, ಮುದಕಪ್ಪ ಕುಂಬಾರ, ಭಾಷಾಸಾಬ್ ಮನಗೂಳಿ, ಚನ್ನಬಸು ತಳವಾರ, ಲಾಲ್ ಸಾಬ್ ಗಡ್ಡಿ ಸೇರಿದಂತೆ ನಾನಾ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದು ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷ ಎಂ.ಆರ್. ಕಮತಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗುಂಡು ಮೈ ಒಳಗೆ ಹೋದರೂ ಪ್ರಜ್ಞೆ ತಪ್ಪದ ರೈ!: ಮುತ್ತಪ್ಪ ರೈ ಬದುಕಿನ ಪ್ರಮುಖ ಘಟನೆಗಳ ಮೆಲಕು

ಭೂಗತ ಲೋಕವನ್ನಾಳಿದ ವ್ಯಕ್ತಿಯ ಕಥೆಯಿದು. ಸದ್ಯ ಭೂಗತ ಲೋಕದಿಂದ ನಿವೃತ್ತಿ ಹೊಂದಿದರೂ ಕೂಡ ಮುತ್ತಪ್ಪ ರೈ ಹೆಸರು ಮಾತ್ರ ಚಾಲ್ತಿಯಲ್ಲಿಯೇ ಇತ್ತು. ಮಾಜಿ ಡಾನ್ ಮುತ್ತಪ್ಪ ರೈ ಜೀವನದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳ ಮೆಲಕು ಇಲ್ಲಿದೆ ನೋಡಿ..

ಹೆಲ್ತ್ ರಿಜಿಸ್ಟರ್ ಗೆ ಸರ್ಕಾರದ ಮುನ್ನುಡಿ: ತಜ್ಞರ ಜತೆ ಸಚಿವ ಸುಧಾಕರ್ ಸಮಾಲೋಚನೆ

ಆರೋಗ್ಯ ಕರ್ನಾಟಕ’ಕ್ಕೆ ವೇದಿಕೆ ಕಲ್ಪಿಸಲಿರುವ “ಹೆಲ್ತ್ ರಿಜಿಸ್ಟರ್’ ಯೋಜನೆ ಅನುಷ್ಠಾನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮುನ್ನುಡಿ ಬರೆದರು.

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆಸ್ಪತ್ರೆಗೆ ದಾಖಲು

ಬೆಳಗಾವಿ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಸ್ನಾನ ಗೃಹದಲ್ಲಿ ಬಿದ್ದ ಕಾರಣ ಗಾಯಗೊಂಡಿದ್ದು, ಆಸ್ಪತ್ರೆಗೆ…

ಗದಗ ಜಿಲ್ಲೆಯಲ್ಲಿಂದು 18 ಪಾಸಿಟಿವ್! : ಯಾವ ಯಾವ ತಾಲೂಕಿಗೆ ಕೊರೊನಾ ನಂಟು?

ಗದಗ: ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಹೊಸ ಬಸ್ ನಿಲ್ದಾಣ ಹತ್ತಿರದ ನಿವಾಸಿ 40…