ಉತ್ತರಪ್ರಭ ಸುದ್ದಿ
ನಿಡಗುಂದಿ:
ಯಾವುದೇ ಸರಕಾರ ಇರಲಿ ಸದಾ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿ ರೈತರ ಸಮಸ್ಯೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ರೈತ ಸಂಘ ಇನ್ನಷ್ಟು ರೈತ ಸ್ನೇಹಿ ಕಾರ್ಯ ಮಾಡಲಿ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಾನಂದ ಅವಟಿ ಹೇಳಿದರು. ಪಟ್ಟಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಗರ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ನಿಡಗುಂದಿಯ ರುದ್ರಮುನಿ ಸ್ವಾಮೀಜಿ ಮಾತನಾಡಿ,ರೈತ ಸಂಘಟನೆಯಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುವರು, ಬಸವಣ್ಣನವರ ತತ್ವದಂತೆ ಎಲ್ಲರೂ ಪ್ರಾಮಾಣಿಕರಾಗಿ ನಿಷ್ಠಾವಂತರಾಗಿ ಕೆಲಸ ಮಾಡಬೇಕು ಅದರಲ್ಲಿಯೇ ಕೈಲಾಸ ಕಾಣಬೇಕು ಆಗ ಮಾತ್ರ ದೇಶದ ಬೆನ್ನೆಲುಬಾಗಿರುವ ರೈತ ಸಮಾಜದಲ್ಲಿ ತಲೆ ಎತ್ತಿ ಬಾಳಬಲ್ಲ ಎಂದರು.

ಎಸ್ ಕೆ ಗೌಡರ, ಹೆಚ್.ಎ. ಲಷ್ಕರಿ, ಕೆ.ಎಂ. ಬಿರಾದಾರ, ಆರ್.ಬಿ.ಬಾಣಕರ, ರಂಗಪ್ಪ ಯಳ್ಳಿಗುತ್ತಿ , ಹನುಮಂತ ಬೆನಕಟ್ಟಿ, ಎಸ್.ಎಂ. ಪಟ್ಟಣಶೆಟ್ಟಿ , ಬಿ.ಎಸ್.ಪಠಾಣ , ತಿರುಪತಿ ಬಂಡಿವಡ್ಡರ, ಬಸವರಾಜ ಬಾಗೇವಾಡಿ ಮಾತನಾಡಿದರು.
ಪದಾಧಿಕಾರಿಗಳು:
ನಿಡಗುಂದಿ ನಗರ ಘಟಕದ ಗೌರವಾಧ್ಯಕ್ಷರಾಗಿ ಎ.ಎಂ. ಲಷ್ಕರಿ, ಅಧ್ಯಕ್ಷರಾಗಿ ರಾಜು ನದಾಫ್, ಉಪಾಧ್ಯಕ್ಷರಾಗಿ ಆರ್.ಎಸ್. ಉಕ್ಕಲಿ, ಜಿ.ಎಸ್.ತಳವಾರ, ದಾವಲಮಲ್ಲಿಕ್ ನದಾಫ್, ನೂರ ಅಹಮ್ಮದ ಹೆರಕಲ್, ಪ್ರಧಾನ ಕಾರ್ಯದರ್ಶಿಯಾಗಿ ಶಿವನಗೌಡ ಪಾಟೀಲ , ಕಾರ್ಯದರ್ಶಿ ಮೋತಿಲಾಲ ಉಣ್ಣಿಬಾವಿ, ಸಂಚಾಲಕರಾಗಿ ಅಮೀರ ಹಮ್ಜಾ ನಾಯ್ಕೋಡಿ, ಹಸನ ಡೊಂಗ್ರಿ ನಧಾಫ ಸೇರಿದಂತೆ ಅನೇಕರಿಗೆ ನಿಡಗುಂದಿ ತಾಲ್ಲೂಕು ಅಧ್ಯಕ್ಷರಾದ ಕೆ.ಎಂ.ಬಿರಾದಾರ (ಗುಡ್ನಾಳ) ಅವರು ಪದಾಧಿಕಾರಿಗಳಿಗೆ ಸಂಘದ ನಿಯಮಾವಳಿಗಳನ್ನು ತಿಳಿಸಿ, ಪ್ರಮಾಣವಚನ ಮಾಡಿಸಿ ಆದೇಶ ಪ್ರತಿ ವಿತರಿಸಿದರು.

Leave a Reply

Your email address will not be published. Required fields are marked *

You May Also Like

ಅಸ್ವಸ್ಥಗೊಂಡ ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು

ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಮಂಗಳವಾರ ಸಂಜೆ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವೈಜ್ಞಾನಿಕ ಚರಂಡಿ ನಿರ್ಮಾಣ 50ಕ್ಕೂ ಮನೆಗಳಿಗೆ ನುಗ್ಗಿದ ಮಳೆ ನೀರು ಗ್ರಾಮಸ್ಥರ ಆರೋಪ

ಉತ್ತರಪ್ರಭ ಸುದ್ದಿ ನರೇಗಲ್: ಸಮೀಪದ ಕಳಕಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯ ನೀರು 50ಕ್ಕೂ…

ಜಿಲ್ಲಾದ್ಯಂತ ಶೇಕಡ 38.98 ಮತದಾನ: ಮದ್ಯಾಹ್ನ 1ಗಂಟೆವರೆಗಿನ ವಿವರ

ಗದಗ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನ ವಿವರ ಮಧ್ಯಾಹ್ನ 1=00 ಗಂಟೆಯವರೆಗೆ ಶೇಕಡಾವಾರು ಮತದಾನ ಇಂತಿದೆ.…

ಮಣಿಪುರ ವಿದ್ಯಾರ್ಥಿ ಸಂಘದಿಂದ ಸಚಿವ ಸಿ.ಸಿ.ಪಾಟೀಲ್ ಸಹಾಯಕ್ಕೆ ಕೃತಜ್ಞತೆ

ಮಣಿಪುರ ರಾಜ್ಯದ ವಿದ್ಯಾರ್ಥಿಗಳ ಸಂಘಕ್ಕೆ ಸಹಾಯ ಮಾಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರಿಗೆ ಮಣಿಪುರ ವಿದ್ಯಾರ್ಥಿ ಸಂಘ ಟ್ವೀಟ್ ಮೂಲಕ ಅಭಿನಂದಿಸಿದೆ.