ಉತ್ತರಪ್ರಭ ಸುದ್ದಿ
ಗದಗ: ಪ್ರಧಾನ ಮಂತ್ರಿ ಕೃಷಿ ಸನ್ಮಾನ ನಿಧಿ ಯೋಜನೆಯಡಿ ಮುಂದಿನ ಕಂತುಗಳನ್ನು ರೈತರ ಆರ್ಥಿಕ ನೆರವಿಗಾಗಿ ರೈತ ಬಾಂಧವರು ಇ- ಕೆವೈಸಿ ಮಾಡಿಸಲು ಸೆಪ್ಟೆಂಬರ್ 7 ರ ವರೆಗೆ ವಿಸ್ತರಿಸಿ ಅಂತಿಮ ಗಡುವು ನೀಡಲಾಗಿದೆ. ಸೆಪ್ಟೆಂಬರ್ 7 ರ ಒಳಗಾಗಿ ಇ – ಕೆವೈಸಿ ಮಾಡಿಸಿಕೊಂಡು ರೈತರಿಗೆ ಮಾತ್ರ ಸೆಪ್ಟೆಂಬರ್ 15 ರಂದು ಮುಂದಿನ ಕಂತು ಬಿಡುಗಡೆ ಮಾಡಲಾಗುವುದು.
ಈ ದಿನಾಂಕದೋಳಗೆ ಎಲ್ಲಾ ರೈತ ಬಾಂಧವರು ಕೂಡಲೇ ಇ – ಕೆವೈಸಿಯಲ್ಲಿ ರೈತರು ತಮ್ಮ ಆಧಾರ ಸಂಖ್ಯೆ ಯೊಂದಿಗೆ ಜೋಡಣೆ ಯಾಗಿರುವ ಮೋಬೈಲ್ ಸಂಖ್ಯೆಯನ್ನು ದಾಖಲಿಸಿ ಒಟಿಪಿ ಮುಖಾಂತರ ಇ- ಕೆವೈಸಿ ಮಾಡಿಸಬಹುದು. ಹಾಗೂ ತಮ್ಮ ಹತ್ತಿರ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ನಾಗರಿಕ ಸೇವಾ ಕೇಂದ್ರ, ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಇ- ಕೆವೈಸಿ ಮಾಡಿಸಿಕೋಳಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಗದಗ ಬೆಟಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣ ಗಡದ ರೈತ ಬಾಂಧವರಲ್ಲಿ ವಿನಂತಿಸಿಕೊಂಡಿದ್ದಾರೆ.