ಆಲಮಟ್ಟಿ: ಈಗ ದೇಶಭಕ್ತಿಯ ಪ್ರೇಮಾಂಕುರದಲ್ಲಿ ಪುಟಾಣಿ ಚಿಣ್ಣರು ಸಹ ಮಿಂದೆದ್ದು ಉಲ್ಲಾಸದಿಂದ ಸಂಭ್ರಮಿಸುತ್ತಿದ್ದಾರೆ. 75 ನೇ ಸ್ವಾತಂತ್ರ್ಯ ಅಮೃತೋತ್ಸವ ಉತ್ಸಾಹ ಭರಿತವಾಗಿ ಮೈದೇಳಿ ಮನೆ ಮನಗಳಲ್ಲೂ ರಾರಾಜಿಸುತ್ತಿದೆ. ಎಲ್ಲೆಲ್ಲೂ ದೇಶ ಪ್ರೇಮ ಚಟುವಟಿಕೆಗಳ ಭಾವ ಅನಾವರಣಗೊಂಡು ಸಂಪನ್ನಗೊಳಿಸುತ್ತಿವೆ.

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಪುಟ್ಟ ಮಕ್ಕಳು 75 ರ ಸಂಖ್ಯಾ ಆಕೃತಿಯಲ್ಲಿ ಕುಳಿತು ದೇಶಾಭಿಮಾನದ ಪ್ರೀತಿ ಮೆರೆದರು. ಆಕರ್ಷಣೀಯ ಈ ತಿರಂಗ ಉತ್ಸವದ ನೋಟ ಗಮನ ಸೆಳೆಯಿತು. ಮುಖ್ಯ ಗುರುಮಾತೆ ತನುಜಾ ಪೂಜಾರಿ, ಸಹ ಶಿಕ್ಷಕಿಯರಾದ ಸಿದ್ದಮ್ಮ ಅಂಗಡಿ,ಕವಿತಾ ಮರಡಿ,ಸರೋಜಾ ಕಬ್ಬೂರ,ಕಾಂಚನಾ ಕುಂದರಗಿ,ಶೈನಾಬಾನು ಬಾಗಲಕೋಟ, ಮಂಜುಳಾ ಸಂಗಾಪುರ,ಶಂಕ್ರಮ್ಮ ಗುಳೇದಗುಡ್ಡ, ಸುನೀತಾ ಮಹೇಂದ್ರಕರ ಮೊದಲಾದವರಿದ್ದರು.

ಅಮೃತ ಭೂವಿಕಾ…! 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಎಲ್ಲೆಲ್ಲೂ ಸಡಗರದಿಂದ ಮೊಳಗುತ್ತಿದೆ.ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಶಿಕ್ಷಕ ರಾಜಕುಮಾರ ರಾಠೋಡ ಅವರ ಪುತ್ರಿ ಭೂವಿಕಾ ರಾಠೋಡ ಈ ಸವಿಘಳಿಗೆಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ವೇಷದಲ್ಲಿ ನಗು ಮೊಗದೊಂದಿಗೆ ಶನಿವಾರ ಕಾಣಿಸಿಕೊಂಡಿದ್ದು ಹೀಗೆ.


ಹಳಕಟ್ಟಿ ಶಾಲೆಯಲ್ಲಿ ಸಡಗರ : ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳು,ಶಿಕ್ಷಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You May Also Like

ಸಾಲಬಾಧೆ ತಾಳಲಾಗದೆ ಅನ್ನದಾತ ಆತ್ಮಹತ್ಯೆ

ವರದಿ: ವಿಠಲ‌ ಕೆಳೂತ್ ಮಸ್ಕಿ: ಸಾಲಭಾದೆ ತಾಳಲಾರದೆ‌ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತುರ್ವಿಹಾಳ…

ಮಹಿಳಾ ಕಾಮಿ೯ಕರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಯಲಿ- ಉದಯಕುಮಾರ

ಆಲಮಟ್ಟಿ; ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆಯನ್ನು ವೃದ್ಧಿಸಿ,…

ರೋಣ ಸಾಹಿತ್ಯ ಭವನದಲ್ಲಿ ಶ್ರೀ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆ

ರೋಣ: ಸಾಹಿತ್ಯ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ…

‘ಶಾಲೆ ಯಾವಾಗ ಆರಂಭಿಸೋಣ? ಪಾಲಕರ ಅಭಿಪ್ರಾಯ ಕೇಳಿ’: ರಾಜ್ಯಗಳಿಗೆ ಕೇಂದ್ರದ ತರಾತುರಿಯ ಸಂದೇಶ!

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವಿಭಾಗವು ಎಲ್ಲ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ತರಾತುರಿಯಲ್ಲಿ ಒಂದು ಪತ್ರ ಕಳಿಸಿ, 3 ದಿನದಲ್ಲಿ ವಿದ್ಯಾರ್ಥಿಗಳ ಪಾಲಕರ ಅಭಿಪ್ರಾಯ ಸಂಗ್ರಹಿಸಿ, ಶಾಲೆ ಯಾವಾಗ ಆರಂಭಿಸಬೇಕು ಎಂದು ಸಲಹೆ ಪಡೆಯಿರಿ ಎಂದು ತಿಳಿಸಿದೆ. ಅಗಸ್ಟ್, ಸೆಪ್ಟೆಂಬರ್ ಅಥವಾ ಅಕ್ಟೋಬರ್ –ಯಾವ ತಿಂಗಳಲ್ಲಿ ಶಾಲೆ ಮರು ಆರಂಭವಾದರೆ ಒಳ್ಳೆಯದು ಎಂದು ಪಾಲಕರಿಂದ ತಿಳಿದುಕೊಂಡು, ಸರ್ಕಾರದ ಅಭಿಪ್ರಾಯ ರೂಪಿಸಿ ಕೂಡಲೇ ಕೇಂದ್ರಕ್ಕೆ ಕಳಿಸಿಕೊಡಿ ಎಂದು ತಿಳಿಸಿದೆ.