ಆಲಮಟ್ಟಿ: ಈಗ ದೇಶಭಕ್ತಿಯ ಪ್ರೇಮಾಂಕುರದಲ್ಲಿ ಪುಟಾಣಿ ಚಿಣ್ಣರು ಸಹ ಮಿಂದೆದ್ದು ಉಲ್ಲಾಸದಿಂದ ಸಂಭ್ರಮಿಸುತ್ತಿದ್ದಾರೆ. 75 ನೇ ಸ್ವಾತಂತ್ರ್ಯ ಅಮೃತೋತ್ಸವ ಉತ್ಸಾಹ ಭರಿತವಾಗಿ ಮೈದೇಳಿ ಮನೆ ಮನಗಳಲ್ಲೂ ರಾರಾಜಿಸುತ್ತಿದೆ. ಎಲ್ಲೆಲ್ಲೂ ದೇಶ ಪ್ರೇಮ ಚಟುವಟಿಕೆಗಳ ಭಾವ ಅನಾವರಣಗೊಂಡು ಸಂಪನ್ನಗೊಳಿಸುತ್ತಿವೆ.

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಪುಟ್ಟ ಮಕ್ಕಳು 75 ರ ಸಂಖ್ಯಾ ಆಕೃತಿಯಲ್ಲಿ ಕುಳಿತು ದೇಶಾಭಿಮಾನದ ಪ್ರೀತಿ ಮೆರೆದರು. ಆಕರ್ಷಣೀಯ ಈ ತಿರಂಗ ಉತ್ಸವದ ನೋಟ ಗಮನ ಸೆಳೆಯಿತು. ಮುಖ್ಯ ಗುರುಮಾತೆ ತನುಜಾ ಪೂಜಾರಿ, ಸಹ ಶಿಕ್ಷಕಿಯರಾದ ಸಿದ್ದಮ್ಮ ಅಂಗಡಿ,ಕವಿತಾ ಮರಡಿ,ಸರೋಜಾ ಕಬ್ಬೂರ,ಕಾಂಚನಾ ಕುಂದರಗಿ,ಶೈನಾಬಾನು ಬಾಗಲಕೋಟ, ಮಂಜುಳಾ ಸಂಗಾಪುರ,ಶಂಕ್ರಮ್ಮ ಗುಳೇದಗುಡ್ಡ, ಸುನೀತಾ ಮಹೇಂದ್ರಕರ ಮೊದಲಾದವರಿದ್ದರು.

ಅಮೃತ ಭೂವಿಕಾ…! 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಎಲ್ಲೆಲ್ಲೂ ಸಡಗರದಿಂದ ಮೊಳಗುತ್ತಿದೆ.ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಶಿಕ್ಷಕ ರಾಜಕುಮಾರ ರಾಠೋಡ ಅವರ ಪುತ್ರಿ ಭೂವಿಕಾ ರಾಠೋಡ ಈ ಸವಿಘಳಿಗೆಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ವೇಷದಲ್ಲಿ ನಗು ಮೊಗದೊಂದಿಗೆ ಶನಿವಾರ ಕಾಣಿಸಿಕೊಂಡಿದ್ದು ಹೀಗೆ.


ಹಳಕಟ್ಟಿ ಶಾಲೆಯಲ್ಲಿ ಸಡಗರ : ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳು,ಶಿಕ್ಷಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You May Also Like

ರಾಜ್ಯ ಕ.ಸಾ.ಪ ಕಾರ್ಯಕಾರಿ ಸಮಿತಿಗೆ ನೇಮಕ.

ಬೆಂಗಳೂರ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಭಾಷೆ,…

ಸಾಯಿಬಾಬಾ ಮಂದಿರ; ಕಾರ್ತಿಕ ಸಂಪನ್ನ

ನಿಡಗುಂದಿ : ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದ ಕಾರ್ತಿಕೋತ್ಸವ ಗುರುವಾರ ಸಂಪನ್ನಗೊಂಡಿತು. ಇಡೀ…

ಶಾಲೆಗಳಿಗೆ ತಹಶಿಲ್ದಾರ ಸತೀಶ್ ಕೂಡಲಗಿ ಭೇಟಿ- ಕಾನೂನು ಸುವ್ಯವಸ್ಥೆ ಪರಿಶೀಲನೆ ಖುಷಿಯಿಂದ ಶಾಲೆಗೆ ಮರಳಿದ ಮಕ್ಕಳು

ಚಿತ್ರ ವರದಿ : ಗುಲಾಬಚಂದ ಜಾಧವಆಲಮಟ್ಟಿ : ಹಿಜಾಬ್- ಕೇಸರಿ ಜಟಾಪಟಿ ವಿವಾದದಿಂದ ಆತಂಕ ಸೃಷ್ಟಿಯಾಗಿ…

ದ್ರೌಪದಿ’ ಸುಭದ್ರಮ್ಮ ಮನ್ಸೂರ್ ಅಸ್ತಂಗತ

ದ್ರೌಪದಿ ಮತ್ತು ಹೇಮರಡ್ಡಿ ಮಲ್ಲಮ್ಮ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ ಹಿರಿಯ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್ ಬುಧವಾರ ರಾತ್ರಿ 11.30ಕ್ಕೆ ಬಳ್ಳಾರಿಯಲ್ಲಿ ಕೊನೆಯುಸಿರು ಎಳೆದಿದ್ದಾರೆ.