ಆಲಮಟ್ಟಿ: ಜಲಾಶಯಕ್ಕೆ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಹೊರ ಹರಿವು ಆರಂಭಗೊಂಡಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ,ರಾಜ್ಯದ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಕಳೆದ ಹಲದಿನಗಳಿಂದ ಎಡೆಬಿಡದೆ ಧಾರಾಕಾರ ವರ್ಷಧಾರೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ನದಿಗೆ ದಿನೇದಿನೇ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದು ಆಲಮಟ್ಟಿ ಜಲಾಶಯದ ಒಡಲು ಸೇರುತ್ತಿದೆ.

ಸೋಮವಾರ ಸಂಜೆ ವೇಳೆಗೆ ಲಕ್ಷಕ್ಕೂ ಹೆಚ್ಚು 1.09.858 ಕ್ಯುಸೆಕ್ ನೀರು ಆಣೆಕಟ್ಟಿಗೆ ಒಳಹರಿವು ಮೂಲಕ ಬಂದು ಸೇರಿದೆ. ಜಲಾಶಯ 26 ಗೇಟ್ ಗಳನ್ನು ಹೊಂದಿದ್ದು ಅದರಲ್ಲಿ 18 ಗೇಟ್ ತೆರವುಗೊಳಿಸಿ 75 ಸಾವಿರ ಕ್ಯುಸೆಕ್ ನೀರು ಕೃಷ್ಣಾ ನದಿ ಕೆಳಪಾತ್ರಕ್ಕೆ ಹರಿ ಬಿಡಲಾಗುತ್ತಿದೆ. ಒಳಹರಿವು ಹೆಚ್ಚಳದಿಂದ ನೇರೆ ಪ್ರವಾಹ ತಲೆ ದೊರದಂತೆ ಎಚ್ಚರಿಕೆ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಿಯಂತ್ರಣಕ್ಕಾಗಿ ಡ್ಯಾಂ ಭತಿ೯ಗೂ ಮುನ್ನವೇ ನೀರು ಹೊರ ಹರಿಸಲಾಗುತ್ತಿದೆ. 519.60 ಮೀಟರ್ ಗರಿಷ್ಠ ಮಟ್ಟ ಎತ್ತರದ ಈ ಜಲಾಶಯದಲ್ಲಿ 517.17 ಮೀ. ನೀರು ದಾಖಲಾಗಿದೆ. 86.59 ಟಿ.ಎಂ.ಸಿ.ಅಡಿ ನೀರು ಸಂಗ್ರಹವಾಗಿದೆ. ಆಲಮಟ್ಟಿ ಜಲಾಶಯದಲ್ಲಿಗ ಜಲರಾಶಿಯ ವೈಭವ ಕಂಗೊಳಿಸುತ್ತಿದೆ. ನೀರಿನ ಅಲೆಗಳ ನರ್ತನ ಜೋರಾಗುತ್ತಲ್ಲಿದೆ. ನೇರೆಯ ಮಹಾದಲ್ಲಿ ಮೇಘ ವೃಷ್ಟಿ ಹೀಗೆಯೇ ನಾಲ್ಕೈದು ದಿನ ಮುಂದುವರೆದರೆ ಇತ್ತ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಪ್ರತಾಪ ಎದುರಗೊಳ್ಳುವ ಸಾದ್ಯತೆಗಳಿವೆ. ಇದು ತಳ್ಳಿಹಾಕುವಂತಿಲ್ಲ. ಆಲಮಟ್ಟಿ ಜಲಾಶಯ ಭತಿ೯ಯಡೆಗೆ ಸಾಗುತ್ತಿದ್ದು ಒಳ ಹರಿವು ಅಧಿಕವಾದಂತೆ ಹೊರ ಹರಿವು ಪ್ರಮಾಣ ಹೆಚ್ಚಾಗಲ್ಲಿದೆ. ನದಿ ತೀರದ ಜನ ಯಾವುದಕ್ಕೂ ನಿರ್ಲಕ್ಷ್ಯ ತೋರಿದೆ ಜಾಗೃತೆಯಿಂದ ಸುರಕ್ಷಿತವಾಗಿರಲು ಆಲಟ್೯ವಾಗಿರುವುದು ಅತ್ಯಗತ್ಯ.

Leave a Reply

Your email address will not be published. Required fields are marked *

You May Also Like

ಪೊಲೀಸ್ ಸಬ್ ಇನ್ಸ್ಪೆಕ್ಟರ್ 545 ಹುದ್ದೆಗಳಿಗೆ ಅರ್ಜಿ ಅಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಡಿಯಲ್ಲಿ ಖಾಲಿ ಇರುವ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿವಿಲ್ ಹುದ್ದೆಗೆ ಕರ್ನಾಟಕ ರಾಜ್ಯ ಪೊಲೀಸ್ (ಕೆಪಿಎಸ್) ಅರ್ಜಿ ಆಹ್ವಾನಿಸಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ಯಾಕೇಜ್: ಸಿಎಂಗೆ ಜೊಲ್ಲೆ ಅಭಿನಂದನೆ

ರಾಜ್ಯದಲ್ಲಿ ಕೊರೊನಾ ಮುಂಚೂಣಿ ವಾರಿಯರ್ಸ್ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಪರಿಗಣಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 2000 ರೂ. ನೆರವು ಘೋಷಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಹೋಂ ಕ್ವಾರಂಟೈನ್ ಉಲ್ಲಂಘಿಸಿದವರು ಸಾಂಸ್ಥಿಕ ಕ್ವಾರಂಟೈನ್ ಗೆ..!

ಗದಗ: ಹೋಂ ಕ್ವಾರಂಟೈನ್ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಟ ನಡೆಸಿದ್ದವರ ವಿರುದ್ಧ ಇಂದು ತಹಶೀಲ್ದಾರ್ ಗರಂ ಆದರು.…

ಗ್ರಾಮ ಪಂಚಾಯತಿಗಳಿಗೆ ನೇಮಕವಾದ ಆಡಳಿತಾಧಿಕಾರಿಗಳ ಕರ್ತವ್ಯಗಳೇನು..?

ನೇಮಕಗೊಂಡ ಆಡಳಿತಾಧಿಕಾರಿಗಳ ಕರ್ತವ್ಯಗಳ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಆದೇಶ ಹೊರಡಿಸಿದ್ದಾರೆ.