ಉತ್ತರಪ್ರಭ

ಆಲಮಟ್ಟಿ: ಸ್ಥಳೀಯ ಎಂ.ಎಚ್.ಎಂ.ಪ.ಪೂ. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಟಿ.ಬಿ.ಕರದಾನಿ ಅವರ ಪುತ್ರಿ ಚೈತನ್ಯ ಕರದಾನಿ ಚಿತ್ರಕಲೆಯಲ್ಲಿ ಮಿನುಗಿದ್ದಾಳೆ.


ದಾವಣಗೆರೆಯಲ್ಲಿ ಈಚೆಗೆ ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಚಿತ್ರಸಂತೆಯಲ್ಲಿ ಚೈತನ್ಯ ಕರದಾನಿ ಬಿಡಿಸಿದ ಪರಿಸರ ಕುರಿತಾದ ನಿಸರ್ಗ ಚಿತ್ರ ಆಯ್ಕೆಗಾರರ ಮನ ಸೆಳೆದು ದ್ವೀತಿಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ದ್ವೀತಿಯ ಸ್ಥಾನದೊಂದಿಗೆ ಪ್ರಶಸ್ತಿ ಪತ್ರ ಹಾಗು ₹ 1000 ನಗದು ಬಹುಮಾನ ಈ ಪ್ರತಿಭಾನ್ವಿತ ಬಾಲಿಕೆಗೆ ನೀಡಿ ಪ್ರೋತ್ಸಾಹಿಸಲಾಗಿದೆ.

ದಾವಣಗೆರೆಯ ಚಿತ್ರಕಲಾ ಸಂತೆಯಲ್ಲಿ ದ್ವೀತಿಯ ಸ್ಥಾನ ಪಡೆದ ಚೈತನ್ಯ ಕರದಾನಿ ಅವರ ನಿಸರ್ಗ ಚಿತ್ರ


ಬಾಲ್ಯದಿಂದಲೇ ಕಲಾಸಕ್ತಿ ಮೈಗೊಡಿಸಿಕೊಂಡಿರುವ ಚೈತನ್ಯ ಸದ್ಯ ಗದಗ ಜಿಲ್ಲೆಯ ಹುಲಕೊಟಿಯ ಶ್ರೀ ರಾಜೇಶ್ವರಿ ವಿದ್ಯಾ ನಿಕೇತನ ಶಾಲೆಯಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲೆಯ ಸಾಧನೆಗೆ ಶಾಲಾ ಸಿಬ್ಬಂದಿ ಹಾಗು ಕಲಾಸಕ್ತರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ನವೋದಯ : 9 ನೇ ವರ್ಗ ಪ್ರವೇಶಕ್ಕೆ ಅರ್ಜಿ ಆಹ್ವಾನ

ಆಲಮಟ್ಟಿ: ಜವಾಹರ ನವೋದಯ ವಿದ್ಯಾಲಯದ 9 ನೇ ವರ್ಗದ ಖಾಲಿಯಿರುವ ಸ್ಥಳಗಳ ಭರ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ…

ಮಕ್ಕಳಲ್ಲಿ ಕಲಿಕಾಸಕ್ತಿ ಕ್ಷೀಣ – ರಮಣ ಚೌಧರಿ

ಚಿತ್ರ ವರದಿ: ಗುಲಾಬಚಂದ ಜಾಧವಆಲಮಟ್ಟಿ : ಜನ್ಮತಾಳುತ್ತಲೇ ಯಾರು ಪ್ರಬುದ್ಧ ಬುದ್ದಿವಂತರಾಗಿರುವದಿಲ್ಲ. ಹಂತಹಂತವಾಗಿ ಅದು ಮೊಳಕೆಯೊಡೆಯುತ್ತದೆ.…

ಧಾರವಾಡದ ಜಿಟಿಟಿಸಿಯಲ್ಲಿ ಪೋಸ್ಟ್ ಡಿಪ್ಲೋಮಾ ಇನ್ನ ಟುಲ್ ಡಿಸೈನ್ ಕೋರ್ಸ್ ಗೆ ಪ್ರವೇಶ ಪ್ರಾರಂಭ

 ಧಾರವಾಡ: ವಿದ್ಯಾಕಾಶಿ ಧಾರವಾಡ ನಗರದಲ್ಲಿ ಜಿಟಿಟಿಸಿ ವತಿಯಿಂದ ಡಿಪ್ಲೋಮಾ ಕೊರ್ಸಗಳಿಗೆ ಪ್ರವೇಶ ಪ್ರಾರಂಭವಾಗಿದ್ದು. ಅರ್ಹತೆ:  ಡಿಪ್ಲೋಮಾ…

ಶರಣ ಧರ್ಮ,ವಚನ ಸಾಹಿತ್ಯ ರಕ್ಷಕ ಮಾಚಿದೇವರು

ನಿಡಗುಂದಿ: ಕಲ್ಯಾಣ ಕ್ರಾಂತಿ ಯಲ್ಲಿ ಮಾಚಿದೇವರು ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ಜವಾಬ್ಧಾರಿ…