ನಿಡಗುಂದಿ: ಶಿಕ್ಷಣದ ಉದ್ದೇಶ ಒಳ್ಳೇಯ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುವುದು. ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವದರ ಜೊತೆಗೆ ಸಾಮಾಜಿಕ ಕಳಕಳಿಯ ಪಠ್ಯೇತರ ಚಟುವಟಿಕೆಗಳು ವಿದ್ಯಾಥಿಗಳನ್ನು ಅನುಭವಶಾಲಿಗರನ್ನಾಗಿ ಸಂಸ್ಕಾರಯುತ ನಾಗರಿಕರನ್ನಾಗಿ ಪರಿವರ್ತಿಸುತ್ತದೆ ಎಂದು ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ,ಆರ್.ಎಂ.ಬಂಟನೂರ ನುಡಿದರು.


ಪಟ್ಟಣದ ಜಿ.ವ್ಹಿ.ವ್ಹಿ.ಎಸ್.ಶಿಕ್ಷಣ ಮಹಾವಿದ್ಯಾಲಯ ಪ್ರಥಮ ವರ್ಷದ ಬಿ.ಇಡಿ.ಪ್ರಶಿಕ್ಷಣಾರ್ಥಿಗಳ ಸ್ವಾಗತ ಹಾಗೂ ವಿದ್ಯಾರ್ಥಿಗಳ ಒಕ್ಕೂಟ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.


ಇತಿಹಾಸ ಇರುವುದು ಕೇವಲ ಅಂಕಿ ಅಂಶಗಳನ್ನು ನೆನಪಿಡುವದಲ್ಲ ನೀವು ಇತಿಹಾಸವನ್ನು ನಿರ್ಮಿಸುವದಕ್ಕಾಗಿ. ಆತ್ಮ ವಿಶ್ವಾಸವುಳ್ಳವರು ಇತಿಹಾಸವನ್ನು ನಿರ್ಮಿಸುತ್ತಾರೆ.ಗ್ರಂಥಾಲಯವು ಗರ್ಭಗುಡಿ ಯಂತೆ ಅದರ ಸದುಪಯೋಗ ಪಡೆದು ಅಲ್ಲಿರುವ ಅನೇಕ ಪುಸ್ತಕಗಳನ್ನು ಓದಿ ಅನುಭವವನ್ನು ಹೆಚ್ಚಿಸಿ ಗಟ್ಟಗೊಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಡಾ,ಅನುಪಮ ನಾಗಠಾಣ ಮಾತನಾಡಿ, ಶಿಸ್ತು ಮತ್ತು ಸಮಯದ ಸದುಪಯೋಗ ಪಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವದರ ಮೂಲಕ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು.


ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ,ಸವಿತಾ ದೇಸಾಯಿ ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರ ಜೀವನವಲ್ಲ ಆದರೆ ಇದು ಕಬ್ಬಿಣದ ಕಡಲೆಯ ಜೀವನ ಏಕೆಂದರೆ ಇಲ್ಲಿ ಯಾರು ಪರಿಶ್ರಮವಹಿಸಿ ತಪಸ್ಸಿನ ರೂಪದಲ್ಲಿ ವಿದ್ಯಾರ್ಜನೆಗೈದು ಯಶಸ್ಸಿಯಾಗುತ್ತಾರೆ ಅವರಿಗೆ ಮುಂದಿನ ಜೀವನ ಬಂಗಾರವಾಗಿಸಿಕೊಳ್ಳಲು ಸಾದ್ಯವೆಂದರು.
ನಂತರ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಾಸ್ತಾವಿಕವಾಗಿ ಪ್ರೊ,ಡಿ.ಕೆ.ತಾಂಬೇಕರ ಮಾತನಾಡಿದರು.ಸವಿತಾ ಗೌಡರ ಪ್ರಾರ್ಥಿಸಿದರು,ಸುಸ್ಮಿತಾ ಢವಳಗಿ ಸ್ವಾಗತಿಸಿದರು.ಪ್ರೊ,ಎ.ಬಿ.ದಳವಾಯಿ.ಪುಷ್ಪಾರ್ಚಣೆ ಮಾಡಿದರು,ಎಸ್.ಆರ್.ಬಿರಾದಾರ ನಿರೂಪಿಸಿದರು.

Leave a Reply

Your email address will not be published. Required fields are marked *

You May Also Like

ಕ್ರೇಜಿಸ್ಟಾರ್ ರವಿಚಂದ್ರನ್‌ಗೆ 60ನೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಚಿತ್ರರಂಗದ ಬಣ್ಣದ ಲೋಕದಲ್ಲೇ ಕನಸು ಕಟ್ಟಿಕೊಂಡ ಕನಸುಗಾರ ವಿ.ರವಿಚಂದ್ರನ್ ಅವರಿಗೆ ಇಂದು 60 ನೆ ವರ್ಷದ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟನ ಷಷ್ಠಿ ಪೂರ್ತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು ಎಂದು ರವಿಚಂದ್ರನ್ ಅಭಿಮಾನಿಗಳು ಕನಸು ಕಟ್ಟಿಕೊಂಡಿದ್ದರಾದರೂ ಅವರ ಕನಸಿಗೆ ಕೊರೊನಾ ಮಹಾಮಾರಿ ತಣ್ಣಿರೆರಚಿರುವುದರಿಂದ ತಾವು ಇದ್ದಲ್ಲಿಯೇ ಸರಳವಾಗಿ ಆಚರಿಸಿದ್ದಾರೆ.

ಬೆಳಗಾವಿಯಲ್ಲಿ 2 ಸಾವಿರ ಕಿ.ಮೀ ಪ್ರವಾಸ ಮಾಡಿದ್ದ ಶ್ವಾನಕ್ಕೂ ಕ್ವಾರಂಟೈನ್..!

ಬೆಳಗಾವಿ: ಬರೋಬ್ಬರಿ 2 ಸಾವಿರ ಕಿ.ಮೀ ಪ್ರವಾಸ ಮಾಡಿದ್ದ ಶ್ವಾನವೊಂದು ಕ್ವಾರಂಟೈನ್ ಆಗಿರುವ ಘಟನೆ ನಡೆದಿದೆ.…

ಕಳ್ಳರ ಕಣ್ಣು ಈಗ ಆಡಿನ ಮ್ಯಾಲೆ…!!! ಸ್ಕಾಪಿ೯ಯೋದಲ್ಲಿ ಬಂದು ಆಡು ಕದ್ದ ಖದೀಮರು?

ಉತ್ತರಪ್ರಭ ಸುದ್ದಿನಿಡಗುಂದಿ: ಕಳ್ಳತನದ ಹಾವಳಿ ಹಾಡುಹಗಲೇ ಶುರುವಾಗಿವೆ. ಜಿಲ್ಲೆಯಲ್ಲಿಗ ಮಕ್ಕಳ ಕಳ್ಳತನದ ಗುಲ್ಲು ಒಂದಡೆ ಆತಂಕ…

ಸಿದ್ದರಾಮಯ್ಯ ಪರದೇಶಿ ಗಿರಾಕಿ:ಬಿ ಶ್ರೀರಾಮಲು

ಉತ್ತರಪ್ರಭ ಸುದ್ದಿ, ಗದಗ: 2018 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ…