ಉತ್ತರಪ್ರಭ ಸುದ್ದಿ
ಗದಗ:
545 ಪಿ.ಎಸ್.ಐ ಹುದ್ದೆಗಳಿಗೆ ನೇಮಕಾತಿ ಕರೆದಿದ್ದ ಸರ್ಕಾರ ಸದ್ಯ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆಯಾಗಿದ್ದರೂ ಹೈದ್ರಾಬಾದ್ ಕರ್ನಾಟಕ ನಾಯಕರುಗಳ ಒತ್ತಡಕ್ಕೆ ಮಣಿದು ನೇಮಕಾತಿಗೆ ತಡೆಯಾಜ್ಞೆ ನೀಡಿರುವುದರಿಂದ ನಮ್ಮ ಭಾಗದ ಯುವಕರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಮೋಹನ ದೊಡಕುಂಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೈ.ಕ ಭಾಗದವರಿಗೆ ಈಗಾಗಲೇ ಮೀಸಲಾತಿ ಇದ್ದರೂ ಹೆಚ್ಚುವರಿಯಾಗಿ ಮೀಸಲಾತಿ ಕೇಳುತ್ತಿದ್ದು, ಇದರಿಂದ ಗದಗ ಸೇರಿದಂತೆ ಉಳಿದ ಪ್ರದೇಶಗಳಿಂದ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಗುವ ಸಂಭವವಿದೆ. ಮೋದಿ ನೇತೃತ್ವದ ಸರ್ಕಾರ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದರೆ ಇಲ್ಲಿ ರಾಜ್ಯ ಸರ್ಕಾರ ಆಯ್ಕೆಯಾಗಿರುವ ನೇಮಕಾತಿ ಸಹ ರದ್ದುಗೊಳಿಸುವ ಮೂಲಕ ಜನರಿಗೆ ಅನ್ಯಾಯ ಮಾಡುತ್ತಿದೆ. ಈ ಕೂಡಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು, ಇದಕ್ಕಾಗಿ ಈ ಭಾಗದ ನಾಯಕರುಗಳು-ಸಂಘಟನೆಗಳು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಅಡರಕಟ್ಟಿ-ಬಡ್ನಿ ರಸ್ತೆಗೆ ದುರಸ್ಥಿ ಭಾಗ್ಯವೆಂದು? ಕಾಮಗಾರಿ ಮುಗಿಸಿ ಕೈತೊಳೆದುಕೊಂಡರೇ ಗುತ್ತಿಗೆದಾರ!

ಸಂಚಾರ ಸುಗಮವಾಗಿದ್ದರೆ, ಎಲ್ಲವೂ ಸೌಖ್ಯ, ಆದರೆ ಅದೇ ಸಂಚಾರ ಸಂಕಟದಿಂದ ಕೂಡಿದರೆ ಸಂಚಕಾರ ಗ್ಯಾರಂಟಿ. ಅದೆಷ್ಟೋ ಜನರು ಗುತ್ತಿಗೆ ಪಡೆದು ರಸ್ತೆ ನಿರ್ಮಾಣದಲ್ಲಿ ಗುಣಮಟ್ಟಕ್ಕಿಂತ ಕಮಾಯಿ ಮಾಡಿಕೊಂಡಿದ್ದೇ ಜಾಸ್ತಿ. ಇನ್ನು ರಸ್ತೆ ನಿರ್ಮಾಣದ ನಂತರ ನಿರ್ವಹಣೆ ಮಾಡಬೇಕಾದವರು ಆ ಕಡೆ ಮುಖಾನೂ ಮಾಡಿಲ್ಲ. ಇಂತಹ ಅದೆಷ್ಟೋ ರಸ್ತೆಗಳಿಂದ ಜನಸಾಮಾನ್ಯರಿಗೆ ಸಂಚಕಾರಕ್ಕೆ ಸಂಚಕಾರ ಬಂದಿದೆ. ಹೀಗಾಗಿ ನಿಮ್ಮ ಉತ್ತರಪ್ರಭ ಗದಗ ಜಿಲ್ಲೆಯಲ್ಲಿನ ಇಂಥ ರಸ್ತೆಗಳ ಕುರಿತು ಸಂಚಿಕೆ ರೂಪದಲ್ಲಿ ಸುದ್ದಿ ಪ್ರಸಾರ ಮಾಡಲು ಮುಂದಾಗಿದೆ.

ಕೊರೊನಾಕ್ಕೆ ಹೆದರಿ ಆತ್ಮಹತ್ಯೆ – ವರದಿ ನೆಗೆಟಿವ್!

ಬೀದರ್ : ತನಗೆ ಕೊರೊನಾ ವೈರಸ್ ಬಂದಿದೆ ಎಂದು ಆತಂಕಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆದರೆ, ಆತನ ಕೊರೊನಾ ವರದಿ ಮಾತ್ರ ನೆಗೆಟಿವ್ ಬಂದಿದೆ.

ಲಕ್ಷ್ಮೇಶ್ವರದಲ್ಲಿ ಆಹಾರ ಕಿಟ್ ವಿತರಿಸಿದ ಶಾಸಕ ಲಮಾಣಿ

ಲಕ್ಷ್ಮೇಶ್ವರ: ಶಾಸಕ ರಾಮಣ್ಣ ಲಮಾಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರು ಬೇಗ ಗುಣಮುಖರಾಗಲೆಂದು ಪೌಷ್ಟಿಕ ಆಹಾರ ಕಿಟ್ ಹಾಗೂ ಮಾಸ್ಕ್ ವಿತರಣೆ ಮಾಡಿದರು.

ಹೊಳೆ ಇಟಗಿಯಲ್ಲಿ ರಸ್ತೆ ಹುಡುಕಿ ಕೊಡ್ತಿರಾ ಪ್ಲೀಸ್!

ನೀರಿನಿಂದ ತುಂಬಿಕೊಂಡ ಗುಂಡಿಗಳನ್ನು ನೋಡಿದರೆ ಅವು ಪಕ್ಕಾ ಮೀನಿನ ಗುಂಡಿಗಳಂತೆ ಕಾಣುತ್ತವೆ. ಆದ್ರೆ ಅವು ಗುಂಡಿಗಳಲ್ಲ. ಅರೇ ಇದೇನಿದು ಗುಂಡಿಗಳು ಅಂತಿರಾ, ಮತ್ತೆ ಗುಂಡಿಗಳಲ್ಲ ಅಂತಿರಾ ಅಂತ ಕನ್ಫ್ಯೂಸ್ ಆಗಬೇಡಿ ಇದು ಗ್ರಾಮವೊಂದ ರಸ್ತೆಯ ಕಥೆ.