ಆಲಮಟ್ಟಿ : ಹೊಸ ಭರವಸೆಯ ಆಶಾ ಕಿರಣದೊಂದಿಗೆ ನೂತನವಾಗಿ ತೆಲೆಯತ್ತಿದ್ದ ರಾಜ್ಯದ 52 ನವ ತಾಲೂಕುಗಳು ಆಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳೇ ಗತಿಸಿವೆ. ಹೆಸರಿಗಷ್ಟೆ ಅವುಗಳಿಗೆ ಹೊಸ ತಾಲೂಕುಗಳು ಎಂಬ ಅಧಿಕೃತ ಹಣೆಪಟ್ಟಿಯ ಮುದ್ರೆ ಬಿದ್ದಿದೆ ಹೊರತು ಯಾವುದೇ ರೀತಿಯ ಅಭಿವೃದ್ಧಿ ಪರ್ವಗಳು ಸಾಗಿದ್ದು ಕಾಣ ಸಿಗುತ್ತಿಲ್ಲ. ಭಾಗಶಃ ಇಲ್ಲಿ “ಇಲ್ಲ”ಗಳ ಸರಮಾಲೆಯಲ್ಲಿ ದಿನಗಳು ಸಾಗುತ್ತಲ್ಲಿವೆ ! ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಮನೋಬಲದ ಪ್ರಗತಿಗೆ ಅವಶ್ಯಕವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳು ಇನ್ನೂವರೆಗು ಪ್ರಾರಂಭವಾಗದೇ ಇರುವುದು ಶೈಕ್ಷಣಿಕ ತಳಮಳಕ್ಕೆ ಕಾರಣವಾಗುತ್ತಲ್ಲಿದೆ !


ಅಂದಹಾಗೆ ಬಲು ಹುರುಪು,ಹುಮ್ಮಸ್ಸಿನಿಂದ ಅಂದು ನೂತನವಾಗಿ ರಚನೆಯಾಗಿರು ರಾಜ್ಯದ ಹೊಸ ತಾಲೂಕುಗಳು ಇಂದು ನಾಮಕಾ ವಾಸ್ತೆ ಎನ್ನುವಂತೆ ಜೋತಾಡುತ್ತಿವೆ. ರಚನೆಗೆ ತೋರಿದ ಆರಂಭ ಶೂರದ ಆಸಕ್ತಿ ಬೆಳವಣಿಗೆ ರಂಗದಲ್ಲಿ ಮಾಯವಾಗಿವೆ. ಭರವಸೆಗಳೆಲ್ಲ ಗಾಳಿ ಗೋಪುರವಾಗಿವೆ. ಪೋಳ್ಳು ಗೋಳ್ಳು ನುಡಿಮುತ್ತುಗಳೇ ಆಗಾಗ ಶ್ರವಣಗಳಿಗೆ ತಾಗಿ ಹೋಗುತ್ತಲ್ಲಿವೆ. ಗಟ್ಟಿಮುಟ್ಟಾದ ದೃಢ ಭರವಸೆಯ ವರಸೆಯಲ್ಲಿ ನವ ತಾಲೂಕುಗಳು ಈಗ ಕಣ್ತೆರೆದು ಕುಳಿತಿವೆ. ಆದರೆ ಬರೀ ಧೂಳಿನ ಅಭಿಷೇಕದಲ್ಲೇ ನುಲುಗಿ ಅಭಿವೃದ್ಧಿ ಇಲ್ಲದ ಮುಸುಕಿನಲ್ಲಿ ನರಳಿ ಶಪಿಸುತ್ತಿವೆ !


ಬಿಇಓ ಕಚೇರಿ ಕೂಗು : ರಾಜ್ಯದಲ್ಲಿನ 52 ನೂತನ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯಾ೯ಲಯ ತೆರೆಯುವುದು ಇಂದಿನ ಅತ್ಯಗತ್ಯ ಎಂಬ ಕೂಗು ಕೇಳಿಬರುತ್ತಲ್ಲಿದೆ ! ಬಿಇಒ ಕಚೇರಿಗಳನ್ನು ಕೂಡಲೇ ಪ್ರಾರಂಭಿಸಿ ಅಗತ್ಯ ಸಿಬ್ಬಂದಿ ಪೂರೈಸಲು ಸರಕಾರ ಮುಂದಾಗಬೇಕು ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಒತ್ತಾಯಿಸಿದ್ದಾರೆ.
ಈ ಕುರಿತು ಆಲಮಟ್ಟಿಯಲ್ಲಿ ಜಂಟಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು,
ರಾಜ್ಯಾದ್ಯಂತ ನೂತನ ತಾಲೂಕುಗಳು ಘೋಷಣೆಯಾಗಿ ಹಲವಾರು ವರ್ಷಗಳು ಗತಿಸಿವೆ. ತಾಲೂಕು ಆಡಳಿತಕ್ಕೆ ಒಳಪಟ್ಟ ನಾನಾ ಕಚೇರಿಗಳು ವಿವಿಧೆಡೆ ಕಾಯಾ೯ರಂಭ ಮಾಡಿವೆ. ಆದರೆ ಅತೀ ಅವಶ್ಯಕತೆವಾಗಿರುವ “ಕ್ಷೇತ್ರ ಶಿಕ್ಷಣಾಧಿಕಾರಿ”ಗಳ ಕಚೇರಿಗಳು ಇನ್ನೂವರೆಗು ಆರಂಭಗೊಳ್ಳದಿರುವುದು ತೀವ್ರ ನೋವಿನ ಸಂಗತಿಯಾಗಿದೆ ಎಂದು ವಿಷಾಧಿಸಿದ್ದಾರೆ.
ವಿದ್ಯಾರ್ಥಿಗಳು, ಪಾಲಕರು, ಪೋಷಕರು, ಜನ ಸಾಮಾನ್ಯರು ಶೈಕ್ಷಣಿಕ ದಾಖಲಾತಿಯ ಕೆಲಸ ಕಾರ್ಯಗಳಿಗಾಗಿ ದೂರದ ಹಳೆಯ ತಾಲೂಕು ಕೇಂದ್ರಗಳಿಗೆ ಓಡಾಡುತ್ತಲ್ಲಿದ್ದಾರೆ. ಕಾರಣ ಶೈಕ್ಷಣಿಕ, ಸಾಮಾಜಿಕ ಹಾಗು ಆಡಳಿತಾತ್ಮಕ ಹಿತದೃಷ್ಟಿಯಿಂದ ಮತ್ತು ಅಧಿಕಾರ ವಿಕೇಂದ್ರೀಕರಣ ಹಿನ್ನೆಲೆಯಲ್ಲಿ ರಚನೆಯಾಗಿರುವ ನೂತನ 52 ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳನ್ನು ಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸುವಂತೆ ಹಾಗು ಅಗತ್ಯ ಪ್ರಮಾಣದ ಸಿಬ್ಬಂದಿಗಳನ್ನು ಮಂಜೂರಾತಿ ಮಾಡಲು ಸೂಕ್ತ ಅನುದಾನವನ್ನು ಬರುವ ಬಜೆಟ್ ಅಧಿವೇಶನದಲ್ಲಿ ಘೋಷಿಸುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಬರೆದಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಿ ಅವರುಗಳು ಸರಕಾರಕ್ಕೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊರೊನಾದಿಂದಾಗಿ ಸಪ್ತಪದಿ ಸಮಯ ಬದಲಿಸಿದ ಸರ್ಕಾರ!

ಬೆಂಗಳೂರು : ಕೊರೊನಾದ ಹಾವಳಿಯ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯ ಎ ದರ್ಜೆಯ ದೇವಸ್ಥಾನಗಳ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಸರ್ಕಾರದ ಸಪ್ತಪದಿ ಯೋಜನೆಗೆ ಮುಂದೂಡಿದೆ.

ಪಿಯುಸಿ2: ಗದಗ ಜಿಲ್ಲಾ ಮಟ್ಟದ ರ‌್ಯಾಂಕ್ ವಿವರ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 9532 ವಿದ್ಯಾರ್ಥಿಗಳು ಹಾಜರಾಗಿದ್ದು ಆ ಪೈಕಿ 6005 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕಳೆದ ವರ್ಷ ಜಿಲ್ಲೆಯ ಪರೀಕ್ಷಾ ಫಲಿತಾಂಶ ಶೇ. 57.76 ರಷ್ಟಾಗಿ ಜಿಲ್ಲೆಯು 26 ನೇ ಸ್ಥಾನ ಪಡೆದುಕೊಂಡಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯು ಶೇ. 63 ರಷ್ಟು ಫಲಿತಾಂಶ ಪಡೆಯುವ ಮೂಲಕ 22 ನೇ ಸ್ಥಾನ ಪಡೆದುಕೊಂಡಿದೆ.

ಬೀದರ್ ನಲ್ಲಿ ಮತ್ತೆ ಆತಂಕ!

ದೆಹಲಿಯಲ್ಲಿ ನಡೆದ ಜಮಾತ್‍ ಸಭೆಗೆ ಹೋಗಿ ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿಯಿಂದ ಹಳೇ ಸಿಟಿಯಲ್ಲಿ ಇಂದು ಮತ್ತೆ ಇಬ್ಬರು ಸೋಂಕು ತಗುಲಿದೆ.