ವರದಿ: ವಿಠಲ ಕೆಳೂತ್
ಮಸ್ಕಿ: ರಾಷ್ಟ್ರಪತಿ ಪ್ರಶಸ್ತಿ ಪಡೆದ ಸಿಂಧನೂರಿನ ಡಿವೈಎಸ್ ಪಿ ವೆಂಕಟಪ್ಪ ನಾಯಕಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಸನ್ಮಾನಿಸಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ದಕ್ಷತೆಯಿಂದ ಸೇವೆ ಸಲ್ಲಿಸಿದ ನಡೆಸಿದ ಪೊಲೀಸ್ ಅಧಿಕಾರಿ ವೆಂಕಟಪ್ಪ ನಾಯಕ ಅವರಿಗೆ ಸಂದ ಗೌರವವಾಗಿದೆ. ಅಭಿನಂದನಾ ಸ್ವೀಕರಿಸಿ ಮಾತನಾಡಿದ ಡಿವೈಎಸ್ ಪಿ ವೆಂಕಟಪ್ಪ ನಾಯಕ ರಾಷ್ಟ್ರಪ್ರಶಸ್ತಿ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಪ್ರಶಸ್ತಿ ಬಂದಿದ್ದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ಮಹಾದೇವಪ್ಪಗೌಡ ಪೊಲೀಸ ಪಾಟೀಲ, ಡಾ. ಶಿವಶರಣಪ್ಪ ಇತ್ಲಿ ಡಾ. ಬಿ ಎಚ್ ದಿವಟರ,ಅಂದಾನೆಪ್ಪ ಗುಂಡಳ್ಳಿ ಶ್ರೀನಿವಾಸ ಇಲ್ಲೂರ, ದೊಡ್ಡಪ್ಪ ಕಡಬೂರು, ಶಿವಶಂಕ್ರಪ್ಪ ಹಳ್ಳಿ, ಉಮಕಾಂತಪ್ಪ, ಪಂಚಾಕ್ಷರಯ್ಯ ಸ್ವಾಮಿ, ಶಿವಕುಮಾರ, ದೊಡ್ಡಪ್ಪ ಬುಳ್ಳಾ, ಮಲ್ಲಯ್ಯ ಸಾಲಿಮಠ, ಬಸ್ಸಪ್ಪ ಬ್ಯಾಳಿ, ಯಮನಪ್ಪ ಬೋವಿ, ರವಿಗೌಡ ಪಾಟೀಲ, ಪ್ರಸನ್ನ ಪಾಟೀಲ, ಚೇತನ ಪಾಟೀಲ, ಶರಣಬಸವ ಸೊಪ್ಪಿಮಠ, ಶ್ರೀಧರಗೌಡ ಕಡಬೂರ, ಶರಣಗೌಡ, ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.