ಧಾರವಾಡ: ಬಿತ್ತುವ ಕೂರಿಗೆ ತಜ್ಞ ಅಬ್ದುಲ್‌ ಖಾದರ್ ನಡಕಟ್ಟಿನ ಗೆ ಪದ್ಮಶ್ರೀ ಪ್ರಶಸ್ತಿಯ ಗರಿ ಹೌದು ಕೇಂದ್ರ ಗ್ರುಹ ಇಲಾಖೆಯಿಂದ ಪಟ್ಟಿ ಪ್ರಕಟಗೊಂಡಿದೆ.ನಡಕಟ್ಟಿನ ಕೂರಿಗೆ ಯಾರಿಗೆ ಗೊತ್ತಿಲ್ಲ ಹೇಳಿ ಎಲ್ಲ ರೈತರ ಮನ ಗೆದ್ದ ಬಿತ್ತುವ ಕೂರಿಗೆ ಒಬ್ಬ ಸಾಮಾನ್ಯ ವ್ಯಕ್ತಿ ಬಿತ್ತುವ ಕೂರಿಗೆ ಸಂಶೋಧಿಸುವ ಮೂಲಕ ಎಲ್ಲರಲ್ಲೂ ಚಿರಪರಿಚಿತ ವಾಗಿದ್ದಾರೆ.

ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಡಾ.ತೋಂಟದ ಶಿದ್ಧಲಿಂಗಶ್ರಿಗಳು ಇವರಲ್ಲಿದ್ದ ಪ್ರತಿಭೆಯನ್ನು ಹೊರ ತಂದು ಜಗತ್ತಿಗೆ ತೋರಿಸಿದ ಫಲವೇ ನಡಕಟ್ಟಿನ ಕೋರಿಗೆಗೆ ಇವತ್ತು ಪದ್ಮಶ್ರೀ ಪ್ರಶಸ್ತಿ ಬರಲು ಕಾರಣವೆಂದರೆ ತಪ್ಪಾಗಲಾರದು. ಶ್ರೀ ಗಳು ಯಾವಾಗಲೂ ಪ್ರತಿಭೆ ಗಳನ್ನು ಪೋಷಿಸಿ ಬೆಳೆಸಿದ್ದಾರೆ ಅವರನ್ನು ನಾವು ಸ್ಮರಣೆ ಮಾಡಲೇಬೇಕಾಗಿದೆ.

ವಿಶ್ವಶಾಂತಿ ಕೃಷಿ ಸಂಶೋಧನೆ ಮತ್ತು ಕೈಗಾರಿಕಾ ಅಭಿವೃದ್ಧಿ ಕೇಂದ್ರವನ್ನು 1975 ರಲ್ಲಿ ಸ್ಥಾಪಿಸಲಾಯಿತು.ಕಳೆದ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ನಾಡಕಟ್ಟಿನ ಸ್ವಯಂಚಾಲಿತ ಸೀಡ್ ಡ್ರಿಲ್, ಹ್ಯಾರೋ ಬ್ಲೇಡ್, ಹುಣಸೆ ಬೀಜಗಳನ್ನು ಪ್ರತ್ಯೇಕಿಸುವ ಸಾಧನ, ನಡಕಟ್ಟಿನ ಚಕ್ರ ಟಿಲ್ಲರ್, ನಡಕಟ್ಟಿನ ದಿಂಡಿನ ಕುಂಟೆ, ನಡಕಟ್ಟಿನ ಸ್ವಯಂಚಾಲಿತ ಕಬ್ಬು ಬಿತ್ತನೆ ಕೊರೆಯುವ ಯಂತ್ರಗಳ ತಯಾರಿಕೆಯಲ್ಲಿ ಪ್ರವರ್ತಕರಾಗಿದ್ದಾರೆ.

ಚಕ್ರ, ಉಪ್ಪಿನಕಾಯಿಗಾಗಿ ಹುಣಸೆಹಣ್ಣು ಸ್ಲೈಸಿಂಗ್, ನಡಕಟ್ಟಿನ ರೋಟೋವೇಟರ್, 5 ರಲ್ಲಿ 1 ನಡಕಟ್ಟಿನ ಬೀಜ ಡ್ರಿಲ್ ಮತ್ತು ಇನ್ನೂ ಅನೇಕ. ವಿಶ್ವಶಾಂತಿ ಕೃಷಿ ಸಂಶೋಧನೆ ಮತ್ತು ಕೈಗಾರಿಕಾ ಅಭಿವೃದ್ಧಿ ಕೇಂದ್ರವು ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾದಾದ್ಯಂತ ಸ್ವಯಂಚಾಲಿತ ಬೀಜ ಡ್ರಿಲ್‌ನ ಪ್ರಮುಖ ತಯಾರಕರಲ್ಲಿ ಒಂದಾಗಿದೆ.

Leave a Reply

Your email address will not be published. Required fields are marked *

You May Also Like

ಉಮೇಶ ಎಂಬ ಟೇಲರ ಹತ್ಯೆ ಖಂಡಿಸಿ ಗಲ್ಲು ಶಿಕ್ಷೆ ವಿಧಿಸಲು ರಾಜ್ಯ ಪಾಲರಿಗೆ ಮನವಿ

ಉತ್ತರಪ್ರಭ ಸದ್ದಿಮುಂಡರಗಿ: ತಾಲೂಕಿನ ದಂಡಾಧಿಕಾರಿಗಳು ವಿವಿಧ ಸಂಘಟನೆಗಳ ಮುಕಾಂತರ ಕನ್ಯಾಯ ಲಾಲ್ ಉಮೇಶ ಎಂಬ ಟೇಲರ್…

ರಾಜಕೀಯ ಹಗ್ಗ ಜಗ್ಗಾಟ: ಪಾಳುಬಿದ್ದ ಆಶ್ರಯ ಮನೆಗಳ ಪ್ರವೇಶಿಸಿದ ಜನರು

ನರೇಗಲ್ಲ: ರಾಜಕೀಯ ನಾಯಕರ ಹಗ್ಗ ಜಗ್ಗಾಟದಲ್ಲಿ 10 ವರ್ಷಗಳಿಂದ ಪಾಳುಬಿದಿದ್ದ ಆಶ್ರಯ ಮನೆಳಿಗೆ ಜನಸಾಮಾನ್ಯರು ಪ್ರವೇಶ ಪಡೆದಿದ್ದಾರೆ. ಇರುವ ಆಶ್ರಯ ಮನೆಗಳು ತಮ್ಮ ಹೆಸರಿಗೆ ಬಾರದಿದ್ದರೂ ಆಡಳಿತ ಯಂತ್ರದ ನಿರ್ಲಕ್ಷ್ಯ ಹಾಗೂ ತಮ್ಮ ಸಂಕಷ್ಟ ಸಹಿಸಲಾರದೆ ಮನೆಗಳನ್ನು ಸ್ವಚ್ಛಗೊಳಿಸಿಕೊಂಡು ಪ್ರವೇಶಿಸಿದ್ದಾರೆ.

ಗದಗ ಜಿಲ್ಲೆಯಲ್ಲಿಂದು 59 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 59 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 473 ಕ್ಕೆ…

ಕರಿನಾ-ಸೈಫ್ ಅಲಿ ಖಾನ್ ದಂಪತಿಗೆ ಮತ್ತೊಂದು ಮಗು

ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿಗೆ ಮತ್ತೊಂದು ಮಗು ಜನಿಸಿದ್ದು ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.