ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಕಬ್ಬು ಕಟಾವಿಗೆ ಬಂದಿದ್ದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡದ ಬಡ ಕುಟುಂಬದ ಹೆಣ್ಣು ಮಗು ಮೃತಪಟ್ಟಿರುವ ದೃಶ್ಯ.

ವರದಿ: ವಿಠಲ ಕೆಳೂತ್

ಉತ್ತರಪ್ರಭ

ಮಸ್ಕಿ: ತುತ್ತಿನ ಚೀಲ ತುಂಬಿಕೊಳ್ಳಲು ಕೂಲಿ ಅರಸಿ ಅನ್ಯ ಜಿಲ್ಲೆಗಳಿಗೆ ಕಬ್ಬು ಕಟಾವಿಗೆ ತೆರಳಿದ ಕಲ್ಯಾಣ ಕರ್ನಾಟಕದ ಲಂಬಾಣಿ ಸಮಾಜದ ಬಡ ಕುಟುಂಬಗಳ ಮಕ್ಕಳು ಕಬ್ಬು ಕಟಾವು ವಾಹನಕ್ಕೆ ಸಿಲುಕಿ ಸಾವನ್ನಪ್ಪುತ್ತಿರುವ ದುರ್ಘಟನೆ ಹೆಚ್ಚುತ್ತಿದೆ.
ರಾಯಚೂರು ಭಾಗದಿಂದ ಕಬ್ಬು ಕಟಾವಿಗೆ ವಲಸೆ ಹೋಗುವ ಕೂಲಿ ಕಾರ್ಮಿಕ ಮಕ್ಕಳಿಗೆ ಭದ್ರತೆ ಇಲ್ಲದಂತಾಗಿದೆ. ಇದರಿಂದ ಬಡ ಕುಟುಂಬ ಮಕ್ಕಳು ಕಬ್ಬು ಕಟಾವು ವಾಹನಗಳಿಗೆ ಸಿಲುಕಿ ಸಾವಿನ್ನಪ್ಪಿತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕಳೆದ ವಾರದ ಹಿಂದಷ್ಟೆ ಬಿಜಾಪೂರ ಜಿಲ್ಲೆ ವ್ಯಾಪ್ತಿಗೆ ಕಬ್ಬು ಕಟಾವಿಗೆ ತೆರಳಿದ್ದ ಲಿಂಗಸ್ಗೂರು ತಾಲೂಕಿನ ಗೋನವಟ್ಲಾ ತಾಂಡಾದ ಈಶಪ್ಪ ಅವರ ಮಗ ಕಬ್ಬು ತುಂಬಿದ ಟ್ಯಾಕ್ಟರ್ ವಾಹನಕ್ಕೆ ಸಿಲುಕಿ ಪ್ರಾಣ ಬಿಟ್ಟಿದ್ದು, ಅದರ ಜೊತೆ ಜೊತೆಗೆ ಇದೇ ತಾಲೂಕಿನ ಪರಾಂಪೂರ ತಾಂಡದ ಚಂದ್ರಶೇಖರ ಅವರ ಎರಡು ವರ್ಷ ಮಗುವಿಗೆ ಟ್ಯಾಕ್ಟರ್ ಹಿಂದೆ ಸೀರೆಯಿಂದ ತೊಟ್ಟಿಲು ಕಟ್ಟಿದ್ದರು. ಡೈವರ್ ಮಗುವನ್ನು ಲೆಕ್ಕಿಸದೇ ವಾಹನ ಓಡಿಸಿದ್ದಾರೆ. ಮಗು ಗಾಲಿ ಬಿದ್ದು ಪ್ರಾಣ ಕಳೆದುಕೊಂಡಿದೆ. ಈ ಘಟನೆಗಳು ಮಾಸುವ ಮುನ್ನ ಇನ್ನೊಂದು ಘಟನೆ ಜರುಗಿದೆ.


ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಕಬ್ಬು ಕಟಾವಿಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡದ ಮನು ಎಂಬುವರು ಬಡ ಕುಟುಂಬದ ಹೆಣ್ಣು ಮಗು ಟಾಕ್ಟರನ ಹಿಂಬದಿ ಟ್ರಾಲಿಯಲ್ಲಿ ಕುಳಿತುಕೊಂಡಿದ್ದರು ಚಾಲಕ ವೇಗವಾಗಿ ಟ್ಯಾಕ್ಟರ್ ಓಡಿಸಿದ ಪರಿಣಾಮ ಎರಡನೇ ಟ್ರಾಲಿಯಲ್ಲಿ ಕುಳಿತಿದ್ದ ಮಗು ಜಂಪಿಗೆ ಹಾರಿ ಟಾಕ್ಟರ ಗಾಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದೆ. ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಲಂಬಾಣಿ ಜನಾಂಗದ ಅನೇಕ ಬಡ ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳಲು ಕಬ್ಬು ಮಾಡಲು ತೆರಳಿ ತಮ್ಮ ಮಕ್ಕಳ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಶಾಲೆಗೆ ತೆರಳಿ ಆಟ ಪಾಠ ಕಲಿಯುವ ವಯಸ್ಸಿನಲ್ಲಿ ಪೋಷಕರ ಜೊತೆ ಕಬ್ಬು ಕಟಾವಿಗೆ ತೆರಳಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಕಬ್ಬು ತುಂಬುವ ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿರುವ ದುರ್ಘಟನೆ ನಡೆಯುತ್ತಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ತಪ್ಪಿಸಲು ಸರಕಾರ ಸಂಚಾರಿ ಶಾಲೆ ತೆರೆಯಬೇಕು,ಕೂಲಿ ಕಾರ್ಮಿಕರು ಕೆಲಸ‌‌‌ ನಿರ್ವಹಿಸುವ ವೇಳೆ ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರ ಸಾಮಾಜಿಕ ಭದ್ರತೆ ನೀಡಬೇಕು ಎಂದು ಗೋರ ಶಿಕವಾಡಿ ರಾಜ್ಯ ಸಂಚಾಲಕ ಬೋಜರಾಜ್ ನಾಯ್ಕ ಅವರು ಒತ್ತಾಯಿಸಿದ್ದಾರೆ.

ಇದನ್ನು ನೋಡಿ
Leave a Reply

Your email address will not be published. Required fields are marked *

You May Also Like

ಬೈಕ ಕಳ್ಳನನ್ನು ಬಂದನ ಮಾಡಿದ ಪೊಲೀಸರು

ಲಕ್ಷ್ಮೇಶ್ವರ.ಬೈಕ್ ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಠಾಣೆ ಪೊಲೀಸರು ಯಶಸ್ಸಿಯಾಗಿದ್ದಾರೆ.ನಾಲ್ಕು ಬೈಕಗಳನ್ನು ಕಳ್ಳತನ…

ಸಂಕ್ರಾಂತಿಯ ಪುಣ್ಯಸ್ನಾನ : ಇಬ್ಬರು ಯುವಕರು ನದಿ ಪಾಲು.

ರಾಯಚೂರು:ಮಕರ ಸಂಕ್ರಾಂತಿಯ ಪುಣ್ಯಸ್ನಾನ ಮಾಡುವುದಕ್ಕಾಗಿ ತೆರಳಿದ ರಾಯಚೂರಿನ ಇಬ್ಬರು ಯುವಕರು ಕೃಷ್ಣಾ ನದಿಯ ಪಾಲಾಗಿದ್ದಾರೆ.ಸಂಕ್ರಾಂತಿ ಪೀಡೆ…

ಗದಗನಲ್ಲಿ ಎಸಿಬಿ ದಾಳಿ ಬಿಜೆಪಿ ಯುವ ಮುಖಂಡ ಬಂಧನ

ಗದಗ: ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಹುದ್ದೆ ಕೊಡೆಸುತ್ತೇನೆಂದು ಮಹಿಳೆಯೊಬ್ಬರಿಂದ ಹಣ…

ಟ್ರಾಕ್ಟರ್ ಮತ್ತು ಕಾರು ಮುಖಾಮುಖಿ :ಟ್ರಾಕ್ಟರ್ ಪಿಸ್ ಪಿಸ್..!

ಉತ್ತರಪ್ರಭಗದಗ:ಟ್ರ್ಯಾಕ್ಟರ್ ಮತ್ತು ಕಾರ ನಡುವೆ ಮುಖಾಮುಖಿ ನಡೆದು ಟ್ರ್ಯಾಕ್ಟರ್ ತುಂಡಾದ ಘಟನೆ ಗದಗ ಸಮೀಪದ ಚಿಕ್ಕಟ್ಟಿ…