ಉತ್ತರಪ್ರಭ ಸುದ್ದಿ
ಗದಗ:
110/33/11 ಕೆವ್ಹಿ ರೋಣ, ವಿದ್ಯುತ್ ವಿತರಣಾ ಉಪ-ಕೇಂದ್ರದ 10 MVA ಪರಿವರ್ತಕದ ನಿರ್ವಹಣಾ ಕೆಲಸವನ್ನು ಕೈಗೊಳ್ಳುವುದರಿಂದ ದಿನಾಂಕ: 24.12.2021 ರಂದು (ಬೆಳಿಗ್ಗೆ 11 ಘಂಟೆಯಿಂದ ಸಂಜೆ 5  ಘಂಟೆಯವರೆಗೆ) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಮೇಲ್ಕಂಡ ವಿದ್ಯುತ್ ವಿತರಣಾ ಉಪ-ಕೇಂದ್ರದ   10MVA  ಪರಿವರ್ತಕದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಮಾರ್ಗಗಳಾದ ಎಫ್-6 ರೋಣ ವಾಟರ್‌ಸಪ್ಲೈ, ಎಫ್-7 ಬೇವಿನಕಟ್ಟಿ, ಎಫ್-8 ಜಿಗಳೂರ, ಎಫ್-9 ಸೋಮನಕಟ್ಟಿ, ಎಫ್-10 ಕೃಷ್ಣಾಪೂರ ಮತ್ತು ಎಫ್-11 ಐ.ಬಿ.ಪಿ.ಎಸ್ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ ಹಾಗೂ ಸದರಿ ವಿದ್ಯುತ್ ಮಾರ್ಗಗಳಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ರೋಣ ಪಟ್ಟಣ ಹಾಗೂ ಗ್ರಾಮಗಳಾದ ಇಟಗಿ, ಸೂಡಿ, ಬೇವಿನಕಟ್ಟಿ, ಜಿಗಳೂರ, ಹೊಸಳ್ಳಿ, ಹುಲ್ಲೂರು, ಕುರಹಟ್ಟಿ, ಮುದೇನಗುಡಿ, ಸೋಮನಕಟ್ಟಿ, ಕೃಷ್ಣಾಪೂರ, ಮತ್ತು ಎಫ್-11 ಐ.ಬಿ.ಪಿ.ಎಸ್ ಮಾರ್ಗದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಮಲ್ಟಿ ವಿಲೇಜ್ ವಾಟರ್‌ಸಪ್ಲೈ ಸ್ಥಾವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ. 

Leave a Reply

Your email address will not be published. Required fields are marked *

You May Also Like

ಗ್ರಾಮ ಪಂಚಾಯತಿಯ ಯುವಕರ ಗಮನಕ್ಕೆ;

ಉತ್ತರಪ್ರಭ ಸುದ್ದಿಗದಗ: 2022-23 ನೇ ಸಾಲಿನಲ್ಲಿ ಪ್ರಪ್ರಥಮವಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದರ0ತೆ ಸ್ವಾಮಿ ವಿವೇಕಾನಂದ…

ನಗರ ಸಭೆ ಚುನಾವಣೆ: 11ನೇ ವಾರ್ಡನಲ್ಲಿ ಬಿಜೆಪಿಗೆ ಜಯ

ಗದಗ ಬೇಟಗೇರಿ:ನಗರ ಸಭೆ 11  ನೇ ವಾರ್ಡನ ಮತ  ಎಣಿಕೆ ಮುಕ್ತಾಯ , 11ನೇ ವಾರ್ಡನಲ್ಲಿ…

ಗೋವಿಂದಗೌಡ್ರ ಬೇಸರ: ಪ್ರಚಾರಕ್ಕಾಗಿ ಸಣ್ಣತನದ ರಾಜಕೀಯ ಮಾಡಬಾರದು

ಬಿಜೆಪಿ ಮುಖಂಡ ಅನೀಲ್ ಮೆಣಸಿನಕಾಯಿ ಅವರು ಸಣ್ಣತನದ ರಾಜಕಾರಣ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡಬಾರದು ಎಂದು ಎಚ್.ಕೆ.ಪಾಟೀಲ್ ಅಭಿಮಾನಿ ಬಳಗದ ವೆಂಕನಗೌಡ ಗೋವಿಂದಗೌಡ್ರ ಕಿಡಿಕಾರಿದ್ರು.

ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆ ಗದಗ ಆಗಮಿಸಿದ ಸಿ ಎಂ ಬೊಮ್ಮಾಯಿ

ಉತ್ತರಪ್ರಭ ಸುದ್ದಿ ಗದಗ: ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನುಹಮ್ಮಿಕೋಂಡಿದ್ದ ಸಿ ಎಂ ಬಸವರಾಜ ಬೊಮ್ಮಾಯಿಯವರು ಇಂದು ಗದಗ…