ಉತ್ತರಪ್ರಬ ಸುದ್ದಿ
ಗದಗ:
ಬಗರ್ ಹುಕುಮ ಸಾಗುವಳಿದಾರರು, ಅರಣ್ಯ ಹಕ್ಕು ಅಧಿನಿಯಮದಡಿಯಲ್ಲಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ, ರೋಣ, ಮುಂಡರಗಿ, ಹಾಗೂ ಜಿಲ್ಲೆಯ ಇತರೆ ತಾಲೂಕಿನ ಅರ್ಜಿಗಳನ್ನು ಜಿಲ್ಲಾಡಳಿತ ತಿರಸ್ಕರಿಸಿದ್ದನ್ನು ಖಂಡಿಸಿ ಶಿರಹಟ್ಟಿ ತಾಲೂಕ ದೇವಿಹಾಳ ಗ್ರಾಮದಿಂದ ಪಾದಯಾತ್ರೆ ಮೂಲಕ ಶಿರಹಟ್ಟಿ ತಹಶಿಲ್ದಾರ ಕಛೇರಿಯ ಎದುರುಗಡೆ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷರಾದ ಶ್ರೀ ರವಿಕಾಂತ ಅಂಗಡಿಯವರ ನೇತ್ರುತ್ವದಲ್ಲಿ ಧರಣಿ ನಡೆಯಿತು. ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿಗಳು ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲಾ, ಅರಣ್ಯ ಇಲಾಖೆಯಿಂದ ತಿರಸ್ಕ್ರುತ ಅರ್ಜಿಯನ್ನು ಮರು ಪರಿಶಿಲಿಸಲಾಗುತ್ತದೆ ಯಾವುದೇ ಕಾರಣಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದ ನಂತರ ಧರಣಿಯನ್ನು ಕೈಬಿಡಲಾಗಿತ್ತು. ಜಿಲ್ಲಾ ಆಡಳಿತದ ಆದೇಶವನ್ನು ಪರಿಗಣೆಗೆ ತೆಗೆದು ಕೊಳ್ಳದೆ ಬಡ, ನಿರ್ಗತಿಕ ರೈತರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಲು ನಿರಂತರವಾಗಿ ನೋಟಿಸ್ ನೀಡುತ್ತಿದ್ದಾರೆ ಇದರಿಂದ ಬಡ ರೈತರರಿಗೆ ಬರಸಿಡುಲು ಬಡಿದಂತಾಗಿದೆ ನಿರಂತರವಾಗಿ ಜನರಪರ, ಕಪ್ಪತ್ತ ಗುಡ್ಡ ಉಳಿವಿಗಾಗಿ ಹೋರಾಟ ಮಾಡುತ್ತಾ ಬಂದಿರುವ ಉತ್ತರ ಕರ್ನಾಟಕ ಮಹಾ ಸಭಾ ಅಧ್ಯಕ್ಷರಾದ ಶ್ರೀ ರವಿಕಾಂತ ಅಂಗಡಿಯವರು ಇಂದು ಹಿರಿಯ ನಾಯಕರು ಗದಗ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾನ್ಯ ಮಾಜಿ ಸಚಿವರಾದ ಶ್ರೀ ಹೆಚ್. ಕೆ. ಪಾಟೀಲರನ್ನು ಬೇಟಿಯಾಗಿ ಚರ್ಚಿಸಿದರು.

ಸದರಿ ವಿಚಾರವನ್ನು ಚರ್ಚಿಸಿದ ನಂತರ ಹೆಚ್. ಕೆ. ಪಾಟೀಲರು, ಜಿಲ್ಲಾ ಅರಣ್ಯ ಅಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾತನಾಡಿ, ಯಾವುದೆ ಕಾರಣಕ್ಕೂ ಬಡ ರೈತರಿಗೆ ತೊಂದರೆಯಾಗದoತೆ, ಅವರನ್ನ ಒಕ್ಕಲೆಬ್ಬಿಸಬಾರದೆಂದು ಮತ್ತು ಅವರ ಅರ್ಜಿಗಳನ್ನು ಪುನರ್ ಪರಿಶೀಲನೆ ಮಾಡಿ ಹಕ್ಕು ಪತ್ರಗಳನ್ನು ನಿಡಬೆಕೆಂದು ಸೂಚಿಸಿದರು ಮತ್ತು ರೈತರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಠಾಕುರ ಜಾದವ ಬೇಳದಡಿ ಸೇರಿದಂತೆ ಜಿಲ್ಲೆಯ ಅನೇಕ ಬಗರ್ ಹುಕುಮ್ ಸಾಗುವಳಿ ರೈತರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

You May Also Like

ರೈತರಿಂದ ಗ್ರಾಹಕರಿಗೆ ನೇರ ಮಾರಾಟಕ್ಕೆ ಕ್ರಮ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ

ರೈತರು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೆರೆಯಲಾದ ಮಳಿಗೆಗಳ ವಿವರ ಇಲ್ಲಿದೆ ನೋಡಿ

ಪರಿಸರ ಜಾಗೃತಿಗೆ ರಾಣೆಬೆನ್ನೂರ ಸೌರಭ ಕಲಾ ತಂಡದಿಂದ ಬೀದಿ ನಾಟಕ ಪ್ರದರ್ಶನ

ಉತ್ತರಪ್ರಭಆಲಮಟ್ಟಿ: ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಗೈಯುವ ಸೇವಾ ಮನೋಭಾವ ಸಂತೃಪ್ತಿ, ಗೌರವ ತಂದು ಕೊಡುತ್ತದೆ. ಸಾಂಸ್ಕೃತಿಕ…

ನಾನು ಪತ್ರಕರ್ತೆ ಎಂದು ಸಪ್ಲೈಯರ್ ಥಳಿಸಿದ ಮಹಿಳೆ.!

ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಸಪ್ಲೈಯರ್ಗೆ ಅಪರಿಚಿತ ಮಹಿಳೆಯೊಬ್ಬರು ಕಪಾಳಕ್ಕೆ ಹೊಡೆದ ಘಟನೆ ಹಾವೇರಿ ಜಿಲ್ಲೆಯ…

ಕಾಲೇಜ್ ಆರಂಭಕ್ಕೆ ಸರ್ಕಾರದ ಮಾರ್ಗಸೂಚಿ

ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟ ಕಾಲೇಜು ಆರಂಭಗೊಳ್ಳುತ್ತಿವೆ‌. ಹೀಗಾಗಿ ಕಾಲೇಜು ಆರಂಭಗೊಳ್ಳುತ್ತಿರುವ ಹಿನ್ನೆಲೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್ ಎಂ ಹಿರೇಮಠ ಕೋವಿಡ್-19 ಹಿನ್ನಲೆಯಲ್ಲಿ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನದ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.