ನರೇಗಲ್ಲ: ಟೆಂಗಿನ ಮರಕ್ಕೆ ಸಿಡಿಲು ಬಡಿದು ದಗದಗ ಹೊತ್ತಿ ಉರಿದ ಘಟನೆ ಸಮೀಪದ ಜಕ್ಕಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರವಲಯದಲ್ಲಿ ಇರುವ ಅಶೋಕಗೌಡ ಪಾಟೀಲ ಅವರ ತೋಟದಲ್ಲಿ ಭಾನುವಾರ ಗುಡುಗು, ಮಿಂಚಿನ ಆರ್ಭಟದ ಪರಿಣಾಮ ಟೆಂಗಿನ ಮರದ ಸುಳಿಗೆ ಸಿಡಿಲು ಬಡಿದು ಮರದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಆದರೆ ಅದೃಷ್ಟ ವಶಾತ: ಯಾವುದೇ ಹಾನಿ ಸಂಭವಿಸಿಲ್ಲ.