ಬೆಟಗೇರಿ: ಬಹಳಷ್ಟು ಪ್ರಯಾಣಿಕರು ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿಯಿಂದ ರಾಯಚೂರು, ಮಂತ್ರಾಲಯ, ಗದ್ವಾಲ್ ಜಲಮ್ಮದೇವಿಗೆ ಕರ್ನೂಲ ಮೂಲಕ ಶ್ರೀಶೈಲಂಗೆ ಹೋಗಿ ಬರಲು ಕೊಲ್ಲಾಪೂರ-ಹೈದ್ರಾಬಾದ್-ಮಣಗೂರು-ಕೊಲ್ಲಾಪೂರ ಈ ರೈಲುಗಾಡಿ ಕೋವಿಡ್ 19 ಮಹಾಮಾರಿಗಿಂತ ಮುಂಚೆ ಇದ್ದು ಅದು ಪ್ರಯಾಣಿಕರಿಗೆ ಬಹಳ ಅನುಕೂಲವಾಗಿತ್ತು ಕೊರೊನಾ ಕಾರಣಾಂತರದಿAದ ಈ ರೈಲುಗಳು ರದ್ದಾಗಿರುವುದರಿಂದ ರಾಯಚೂರಿಗೆ, ಮಂತ್ರಾಲಯ, ದರ್ಶನಕ್ಕೆ ಶ್ರೀಶೈಲಂಗೆ ಹಾಗೂ ಗದ್ವಾಲ ಜಮಲಮ್ಮ ದೇವಿಗೆ ಹೋಗಿ ಬರುವ ಪ್ರಯಾಣಿಕರಿಗೆ ತೀವ್ರವಾದ ತೊಂದರೆಯಾಗಿದೆ ಎಂದು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ರೈಲುಗಳು ಮಧ್ಯ (ಶ್ರೀಶೈಲಂ) ರೇಲ್ವೆ ವಿಭಾಗದಿಂದ ಓಡಿಸಲಾಗುತ್ತಿತ್ತು ಕೊಲ್ಲಾಪೂರ-ಹೈದ್ರಾಬಾದ ಮಣಗೂರು-ಕೊಲ್ಲಾಪೂರ ರೈಲುಗಳು ಮೊದಲಿನಂತೆ ಪ್ರತಿನಿತ್ಯ ಓಡಿಸುವಂತೆ ಮತ್ತು ಮಂತ್ರಾಲಯ, ಶ್ರೀಶೈಲಂ, ಗದ್ವಾಲ್, ರಾಯಚೂರಿಗೆ ಹೋಗಿ ಬರುವ ಸದ್ಭಕ್ತರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವೇ ನೈರುತ್ಯ ರೇಲ್ವೆಯವರಾದರೂ ಈ ಗಾಡಿಗಳು ಹುಬ್ಬಳ್ಳಿಯಿಂದ ಓಡಿಸುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ನಡೆಯಲಿದೆ ಗ್ರಾಪಂ ಚುನಾವಣೆ

ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಹಾಗೂ ತೆರವಾಗಿರುವ ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಜರುಗಿಸಲು ಚುನಾವಣೆ ವೇಳಾ ಪಟ್ಟಿಯನ್ನು ಹೊರಡಿಸಲಾಗಿದೆ.

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಒಪ್ಪಿಗೆಯ ಮೇರೆಗೆ ವಿಧಾನ ಪರಿತ್ತಿಗೆ ಕಾಂಗ್ರೆಸ್ ಪಕ್ಷ…

ಮೋದಿಗೆ ಮಾಸ್ಕ್ ಕೊಟ್ಟ ರಾಜ್ಯದಲ್ಲಿನ ಕುಟುಂಬ! ಮೋದಿ ಏನು ಹೇಳಿದರು?

ದಾವಣಗೆರೆ : ಕೊರೊನಾದಿಂದಾಗಿ ಇಡೀ ವಿಶ್ವವೇ ನಲುಗುತ್ತಿದೆ. ಹೀಗಾಗಿ ಮಾಸ್ಕ್ ಪ್ರತಿಯೊಬ್ಬರ ಸಂಗಾತಿಯಂತಾಗಿದೆ. ಮಾಸ್ಕ್ ಧರಿಸುವಂತೆ ಪ್ರಧಾನಿ ಮೋದಿ ಕೂಡ ದೇಶದ ಜನರಿಗೆ ಕರೆ ನೀಡಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲೆಯ ಕುಟುಂವೊಂದು ಖಾದಿಯ ಮಾಸ್ಕ್ ಕಳುಹಿಸಿದೆ. ಅದಕ್ಕಾಗಿ ಮೋದಿ ಅವರಿಂದ ಪ್ರಶಂಸನೀಯ ಪತ್ರ ಕೂಡ ಬಂದಿದೆ.

ರಾಜ್ಯದಲ್ಲಿ ಸುರಿಯುತ್ತಿರುವ ಭೀಕರ ಮಳೆ!!

ಬೆಂಗಳೂರು : ರಾಜ್ಯಾದ್ಯಂತ ವಿಪರೀತ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದೆ.