ಬೆಟಗೇರಿ: ಬಹಳಷ್ಟು ಪ್ರಯಾಣಿಕರು ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿಯಿಂದ ರಾಯಚೂರು, ಮಂತ್ರಾಲಯ, ಗದ್ವಾಲ್ ಜಲಮ್ಮದೇವಿಗೆ ಕರ್ನೂಲ ಮೂಲಕ ಶ್ರೀಶೈಲಂಗೆ ಹೋಗಿ ಬರಲು ಕೊಲ್ಲಾಪೂರ-ಹೈದ್ರಾಬಾದ್-ಮಣಗೂರು-ಕೊಲ್ಲಾಪೂರ ಈ ರೈಲುಗಾಡಿ ಕೋವಿಡ್ 19 ಮಹಾಮಾರಿಗಿಂತ ಮುಂಚೆ ಇದ್ದು ಅದು ಪ್ರಯಾಣಿಕರಿಗೆ ಬಹಳ ಅನುಕೂಲವಾಗಿತ್ತು ಕೊರೊನಾ ಕಾರಣಾಂತರದಿAದ ಈ ರೈಲುಗಳು ರದ್ದಾಗಿರುವುದರಿಂದ ರಾಯಚೂರಿಗೆ, ಮಂತ್ರಾಲಯ, ದರ್ಶನಕ್ಕೆ ಶ್ರೀಶೈಲಂಗೆ ಹಾಗೂ ಗದ್ವಾಲ ಜಮಲಮ್ಮ ದೇವಿಗೆ ಹೋಗಿ ಬರುವ ಪ್ರಯಾಣಿಕರಿಗೆ ತೀವ್ರವಾದ ತೊಂದರೆಯಾಗಿದೆ ಎಂದು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ರೈಲುಗಳು ಮಧ್ಯ (ಶ್ರೀಶೈಲಂ) ರೇಲ್ವೆ ವಿಭಾಗದಿಂದ ಓಡಿಸಲಾಗುತ್ತಿತ್ತು ಕೊಲ್ಲಾಪೂರ-ಹೈದ್ರಾಬಾದ ಮಣಗೂರು-ಕೊಲ್ಲಾಪೂರ ರೈಲುಗಳು ಮೊದಲಿನಂತೆ ಪ್ರತಿನಿತ್ಯ ಓಡಿಸುವಂತೆ ಮತ್ತು ಮಂತ್ರಾಲಯ, ಶ್ರೀಶೈಲಂ, ಗದ್ವಾಲ್, ರಾಯಚೂರಿಗೆ ಹೋಗಿ ಬರುವ ಸದ್ಭಕ್ತರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವೇ ನೈರುತ್ಯ ರೇಲ್ವೆಯವರಾದರೂ ಈ ಗಾಡಿಗಳು ಹುಬ್ಬಳ್ಳಿಯಿಂದ ಓಡಿಸುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಿರಿಧಾನ್ಯಗಳ ಅಭಿಯಾನ ಶನಿವಾರ ಉದ್ಘಾಟನೆ ಸಮಾರಂಭ

ರಾಯಚೂರು: ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವುದನ್ನು ಉತ್ತೇಜಿಸಲು ರೈತಸಿರಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ…

ದೋತರಾ ಹರಿದು ಮಾಸ್ಕ್ ಮಾಡಿನಿ: ಎಸ್.ಎಸ್.ಪಾಟೀಲ್

ನಾನು ನನ್ನ ಧೋತರ ಹರಿದು ಮಾಸ್ಕ್ ಮಾಡಿಕೊಂಡಿದ್ದೇನೆ. ಇವುಗಳನ್ನೆ ನಮ್ಮ ಹೊಲದಲ್ಲಿ ಕೆಲಸ ಮಡುವ ಕಾರ್ಮಿಕರಿಗೂ ನೀಡಿದ್ದೇನೆ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ್

ಗದಗನಲ್ಲಿಂದು ಇಬ್ಬರಿಗೆ ಪಾಸಿಟಿವ್

ಗದಗ: ಜಿಲ್ಲೆಯಲ್ಲಿ ಇಂದು ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ…

ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ: ಕುರಿ, ಮೇಕೆ ಕಳ್ಳರು ಅಂದರ್..!

ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೇಕೆ ಹಾಗೂ ಕುರಿ ಕಳ್ಳತನ ಪ್ರಕರಣಗಳು ಕಂಡು ಬಂದಿದ್ದವು. ಘಟನೆ ಗ್ರಾಮೀಣ ಭಾಗದ ಜನರ ನಿದ್ದೆಗೆಡಿಸಿತ್ತು. ಆದರೆ ಕೊನೆಗೂ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.