ರೋಣ: ವಿಸ್ಟೇನ್ ಟೆಕ್ನಿಕಲ್ ಆಂಡ್ ಸರ್ವಿಸಸ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ಇಂಡಿಯಾ ವತಿಯಿಂದ ಶನಿವಾರ ತಾಲೂಕು ಮಾಡಲಗೇರಿ ಗ್ರಾಮದಲ್ಲಿ ಜಿಲ್ಲೆಯ 25 ಜನರಿಗ ಕೃತಕ ಕಾಲು, ಕೃತಕ ಕೈ, ವೀಲ್ ಚೇರ್, ವಾಕಿಂಗ್ ಸ್ಟಾಂಡ್, ವಾಕಿಂಗ್ ಸ್ಟಿಕ್, ಕಾಲಿಪರ್, ಶೂಸ್, ನೀ ಕ್ಯಾಪ್ ಇತ್ಯಾದಿ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.

ಈ ವೇಳೆ ವಿಸ್ಟೇನ್ ಕಂಪನಿಯ ಪ್ರತಿನಿಧಿ ಸಿದ್ದಾರ್ಥ ಬಂಗಾರ, ರಾಜ್ಯ ಹಾಗೂ ದೇಶದ ಮೂಲೆ ಮೂಲೆಗಳಲ್ಲಿ ವಿಸ್ಟೇನ್ ಕಂಪನಿ ಮಾಡುತ್ತಿರುವ ಸಮಾಜಿಕ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.

ಮಾಡಲಗೇರಿ ಗ್ರಾಮದ ಸಮಾಜಿ ಕಾರ್ಯಕರ್ತ ಜಗದೀಶ ಶಂಕರಗೌಡ ಅಮಾತಿಗೌಡ್ರ, ತಮ್ಮ ಸತತ ಪ್ರಯತ್ನ ಮತ್ತು ಶ್ರಮದಿಂದ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾದರು.

ವೃತ್ತಿಯಿಂದ ಇಂಜನೀಯರ್ ಆಗಿರುವ ಜಗದೀಶ ಜೊತೆಗೆ ತಾಲೂಕಿನ ಹಲವಾರು ಗ್ರಾಮಗಳ ಯುವಕರ, ಶೈಕ್ಷಣಿಕ ಅಭಿರುದ್ಧಿಗಾಗಿ ಹಗಲಿರುಳು ಶ್ರಮ ಪಡುತ್ತಿರುವುದು ಶ್ಲಾಘನೀಯ.

ಈ ವೇಳೆ ಮಾಡಲಗೇರಿ, ಹಿರೇಹಾಳ, ಕೊತಬಾಳ, ಹುನಗುಂಡಿ ಶಾಲೆಯಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಶಾಲೆ ದತ್ತು ತಗೆದು ಕೊಳ್ಳಲು ಶಿಕ್ಷಕ ಹೂಗಾರ ಕಂಪನಿ ಪ್ರತಿನಿಧಿ ಸಿದ್ದಾರ್ಥ್ ಅವರಿಗೆ ಮನವಿ ಸಲ್ಲಿಸಿದರು.

ವಿಸ್ಟಿಯನ್ ಕಂಪನಿ ಮಾಡುತ್ತಿರುವ ಸಾಮಾಜಿಕ ಕೆಲಸಗಳನ್ನು ಮೆಚ್ಚಿ ಮತ್ತು ಕರೋನ ಸಂದರ್ಭದಲ್ಲಿ 250 ಆಹಾರ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದ ಕಂಪನಿಯ ಅಧ್ಯಕ್ಷ ಆಶೀಶ್ ಭಾಟಿಯಾ ಮತ್ತು ಕಂಪನಿಯ ಉದ್ಯೋಗಿಗಳಿಗೆ ಸನ್ಮಾನಿಸಲಾಯಿತು.

ಸಂದರ್ಭದಲ್ಲಿ ಶಂಕರಗೌಡ ಅಮಾತಿಗೌಡ್ರ, ರುದ್ರಗೌಡ ಅಮಾತಿಗೌಡ್ರ, ಮುರಗೇಶ ಹುನಗುಂಡಿ, ನಾಗನಗೌಡ ಅಮಾತಿಗೌಡ್ರ, ವೆಂಕನಗೌಡ ಗೋವಿಂದಗೌಡ್ರ, ತಿಮಪ್ಪನಗೌಡ ತಿಪ್ಪನಗೌಡ್ರ, ಸಂಕನಗೌಡರ ರಾಯನಗೌಡ್ರ, ವೀರನಗೌಡ ಅಮಾತಿಗೌಡ್ರ, ಹಿರೇಹಾಳ ಪಿಡಿಒ ಅವರಾದ ದಳವಾಯಿ,
ಬಸವರಾಜ ಹೆಬ್ಬಳ್ಳಿ, ಹನುಮಗೌಡ ರಾಯನಗೌಡ್ರ, ಮಲ್ಲಪ್ಪ ನೈನಾಪುರ, ಶರಣಪ್ಪಗೌಡ ಗೋವಿಂದಗೌಡ್ರ, ಹೂವಪ್ಪ ಬಾವಿ, ಭೀಮನಗೌಡ ತಾ ಭೀಮನಗೌಡ್ರ, ಶರಣಪ್ಪ ಶಿರಗುಂಪಿ, ರಮೇಶ ವಕ್ಕರ, ಪ್ರಬು ವಿರಕ್ತಮಠ, ಜೋಗಿ ಭೀಮಸಿ, ಪ್ರಹ್ಲಾದಪ್ಪ ಪೂಜಾರ್, ಮೈಲಾರಪ್ಪ ಮಾದರ, ಮಾಡಲಗೇರಿ ಗ್ರಾಮದ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಸಿಬ್ಬಂದಿಗಳು, ರೋಣ ತಾಲೂಕ ಸರಕಾರಿ ಶಾಲೆ ಸಿಬ್ಬಂದಿಗಳು ಗ್ರಾಮದ ಗುರು ಹಿರಿಯರು ಮತ್ತು ಯುವಕರು ಇದ್ದರು.

Leave a Reply

Your email address will not be published. Required fields are marked *

You May Also Like

ಗುರುಪೂರ್ಣಿಮೆ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

  ಗುರುಗಳ ವೈಶಿಷ್ಟ್ಯಗಳು  ಶಿಷ್ಯನಿಗೆ ಭಗವಂತನ ಅಸ್ತಿತ್ವದ ಮನವರಿಕೆ ಮಾಡಿಕೊಟ್ಟು ಈಶ್ವರಪ್ರಾಪ್ತಿ ಮಾಡಿಸಿಕೊಡುವುದು: ಹೇಗೆ ಅಮಾವಾಸ್ಯೆಯಂದು…

ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ : 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Two Day Heavy Rains in the State: Yellow Alert in 6 Districts

ಹಳೆ ವಿದ್ಯಾರ್ಥಿಯಿಂದ ಸರಕಾರಿ ಶಾಲೆಗೆ ಆರ್ಥಿಕ ಸಹಾಯ

ಯಾವ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ಶಾಲೆಗಳಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇದನ್ನು ಉಪಯೋಗ ಪಡಿಸಿಕೊಂಡು ಶಿಕ್ಷಣ ಪಡೆದು ಶಿಕ್ಷಣವಂತರಾಗಬೇಕು ಎಂದು ಮಹಾಂತೇಶ ಜಕ್ಕಲಿ ಹೇಳಿದರು.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಸ್ಟಡಿಗೆ ನೀಡಿದ ಕೋರ್ಟ್!

ಧಾರವಾಡ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.