ಗದಗ: ರಾಜ್ಯ ಸರ್ಕಾರ ತಾಲೂಕು ಪಂಚಾಯತಿಯನ್ನು ರದ್ದು ಪಡಸಲು ಮುಂದಾಗಿದ್ದು, ಸAವಿಧಾನದಲ್ಲಿ ತಿದ್ದುಪಡಿಯಾಗಿದ್ದನ್ನು ರಾಜ್ಯ ಸರಕಾರ ರದ್ದು ಪಡಿಸೋಕೆ ಬರುವದಿಲ್ಲ. ಆದರೆ ಯಾವ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ್ ಪ್ರಶ್ನಿಸಿದರು.

ಸರಕಾರ ತಾಲೂಕು ಪಂಚಾಯತ ವ್ಯವಸ್ಥೆ ರದ್ದು ಪಡಿಸೋ ವಿಚಾರ ಹಿನ್ನೆಲೆ ಗದಗನಲ್ಲಿ ಮಾತನಾಡಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರು.

ಸಂವಿಧಾನ ತಿದ್ದುಪಡಿ 73 ರಲ್ಲಿ ಈ ಬಗ್ಗೆ ಬದಲಾವಣೆಯಾಗಿದೆ. ರಚನಾತ್ಮಕ ಹಾಗೂ ರಾಷ್ಟ್ರ ಕಟ್ಟುವ ಕೆಲಸದಲ್ಲಿ ತಾಲೂಕು ಪಂಚಾಯತ ಪರಿಣಾಮಕಾರಿ ಆಗಿವೆ.

ಇದರಲ್ಲಿ ಅಧಿಕಾರಿಶಾಹಿ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆ ಇಲ್ಲಿ ಎದ್ದು ಕಾಣುತ್ತದೆ ಎಂದು ಪ್ರಶ್ನಿಸಿದರು.

ಸರಕಾರ ತಾಲೂಕು ಪಂಚಾಯತ ವ್ಯವಸ್ಥೆ ಗಟ್ಟಿಗೊಳಿಸಬೇಕಾಗಿತ್ತು. ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ತಾಲೂಕು ಪಂಚಾಯತಿ ಪಾತ್ರ ಮಹತ್ವವಾಗಿದೆ. ಅಧಿಕಾರಿಗಳ ಸಭೆಯಲ್ಲಿ ಕೂತು ರದ್ದು ಮಾಡಬೇಕು ಎಂದು ಹೇಳಿದರೆ ಅದು ಸಮರ್ಪಕ ನಿಲುವಲ್ಲ. ಮೇ ತಿಂಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ ಚುನಾವಣೆ ನಡೆಯಲಿವೆ. ಚುನಾವಣೆ ಮುಂದೂಡಲಿಕ್ಕೆ ಸರಕಾರ ಈ ಹುನ್ನಾರ ನಡೆಸುತ್ತಿದೆ ಎಂದು ದೂರಿದರು.

ಬದಲಾವಣೆ ಹೆಸರಿನಲ್ಲಿ ಚುನಾವಣೆ ಮುಂದೂಡುವ ಪ್ರಯತ್ನ ಸಲ್ಲದು. ಇದರಿಂದ  ಪಂಚಾಯತ್ ಹಾಗೂ ಗ್ರಾಮಸ್ವರಾಜ್ ವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಸರಕಾರ ಮಾಡುವ ಪ್ರಯತ್ನದಿಂದ ಕೋರ್ಟನಲ್ಲಿ ಮತ್ತೊಮ್ಮೆ ಮಂಗಳಾರುತಿ ಆಗುತ್ತದೆ.

ಈಗಾಗಲೇ ಗ್ರಾಮ ಪಂಚಾಯತ ಚುನಾವಣಾ ವೇಳೆ ಸರಕಾರಕ್ಕೆ ಕೋರ್ಟನಿಂದ ಮಂಗಳಾರತಿಯಾಗಿದೆ. ಅದೇ ರೀತಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ ಚುನಾವಣೆ ವಿಚಾರದಲ್ಲಿ ಆಗುತ್ತದೆ. ಸರಕಾರ ಇಂಥ ಕೆಟ್ಟ ಸಾಹಸಕ್ಕೆ ಮುಂದಾಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You May Also Like

ಕಿಚ್ಚನಿಗೆ ಜಪಾನ್ ನಿಂದ ಅಭಿಮಾನಿಯ ಮನವಿ

ಅನಾರೋಗ್ಯದಿಂದಾಗಿ ಕಳೆದ ಎರಡು ವಾರಗಳಿಂದ ಬಿಗ್ ಬಾಸ್ನಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿಲ್ಲ. ಇದು ಅಭಿಮಾನಿಗಳಿಗೆ ಬೇಸರವುಂಟು ಮಾಡಿದ್ದು ಒಂದುಕಡೆಯಾದರೇ, ಕಿಚ್ಚನ ಆರೋಗ್ಯದ ಬಗ್ಗೆಯೂ ಅಭಿಮಾನಿಗಳಿಗೆ ಚಿಂತೆಯಾಗಿದೆ.

ಆಲಮಟ್ಟಿಯಲ್ಲಿ ಪುಟ್ಟ ಮಕ್ಕಳ ಸಸ್ಯ ಸಂಭ್ರಮ

ಗುಲಾಬಚಂದ ಜಾಧವಆಲಮಟ್ಟಿ: ಮೊಗ್ಗಿನ ಎಳೆ ಮನಗಳಲ್ಲಿ ಸಸ್ಯ ಸಂಭ್ರಮ ಮೊಳಗಿತ್ತು. ಅಮಿತೋತ್ಸಾಹದ ಅಲೆಯಲ್ಲಿ ಹಸಿರೀಕರಣದ ಕಾಯಕಕ್ಕೆ…

ಧೈರ್ಯವಿದ್ದರೆ ಸಿದ್ದರಾಮಯ್ಯ ಪಂಚ ಪ್ರಶ್ನೆಗಳಿಗೆ ಉತ್ತರಿಸಲಿ

ಮಂಗಳವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಭಾಷಣವನ್ನು ಟೀಕಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಪಕ್ಷ ನಮ್ಮ ಪಂಚ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿದೆಯಾ ಎಂದು ಬಿಜೆಪಿ ಅಧೀಕೃತ ಟ್ವೀಟ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರಿಗೆ ಸವಾಲೆಸಿದಿದೆ.

ವಿದ್ಯುತ್ ಬಿಲ್ ಏರಿಸಿ ಗ್ರಾಹಕರಿಗೆ ಶಾಕ್ ನೀಡಿದ ಸರ್ಕಾರ!

ಬೆಂಗಳೂರು : ರಾಜ್ಯ ಸರ್ಕಾರವು ವಿದ್ಯುತ್ ದರ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ.