ಲಕ್ಷ್ಮೇಶ್ವರ: ತಾಲೂಕಿನ ಗೊಜನೂರು ಎರೆ ಬೂದಿಹಾಳ ರಸ್ತೆ ಕಾಮಗಾರಿಗೆ ರವಿವಾರ ಶಾಸಕ ರಾಮಣ್ಣ ಲಮಾಣಿ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ರಾಮಣ್ಣ, ಗೊಜನೂರು ಭಾಗದ ರೈತರ ಸಾವಿರಾರು ಜಮೀನುಗಳು ಈ ರಸ್ತೆಯಲ್ಲಿಯೇ ಇದ್ದು ಮಳೆಗಾಲದಲ್ಲಿ ರೈತರು ತ್ರೀವ ತೊಂದರೆ ಅನುಭವಿಸುತ್ತಿದ್ದರು. ಅನೇಕ ವರ್ಷಗಳಿಂದ ಈ ರಸ್ತೆಯ ನಿರ್ಮಾಣದ ಬೇಡಿಕೆ ಕನಸಾಗಿ ಉಳಿದಿತ್ತು. ಈ ರಸ್ತೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆಯ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 5.65 ಕಿಮಿ ರಸ್ತೆಯನ್ನು ಸುಧಾರಣಾ ಮಾಡಿ 5.32 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಕಾರ್ಯ ಕೈಗೊಳಲಾಗುತ್ತಿದೆ. ಗ್ರಾಮಸ್ಥರ ಬಹು ದಿನದ ಬೇಡಿಕೆಗೆ ಸ್ಪಂದಿಸಿದ ಆತ್ಮಸಂತೃಪ್ತಿ ನನಗಿದೆ ಎಂದರು.
ಇನ್ನು ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದ ರೈತ ಸಂಪರ್ಕ ರಸ್ತೆಗಳನ್ನು ಸುಧಾರಣೆಗಾಗಿ ಶ್ರೀಘವೇ ಸಾಕಷ್ಟು ಅನುದಾನ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಎಸ್.ಪಿ.ಪಾಟೀಲ್, ಶಿವನಗೌಡ್ರು ಪಾಟೀಲ್, ನಾಗಪ್ಪಶೆಟ್ಟರ ವಡಕಣ್ಣವರ, ವಿರುಪಾಕ್ಷ ಪಾಟೀಲ್, ಶಂಭು ಸೊರಟೂರ, ಶೇಖಣ್ಣ ಸೊರಟೂರ, ಗುತ್ತಿಗೆದಾರ ರವೀಂದ್ರ ರೆಡ್ಡಿ ಬಾಪುಗೌಡ ಪಾಟೀಲ್, ರಮೇಶ ದನದಮನಿ, ದುಂಡೇಶ ಕೊಟಗಿ, ಫಕ್ಕೀರೇಶ ರಟ್ಟೆಹಳ್ಳಿ, ಗಂಗಾಧರ ಮೆಣಸಿನಕಾಯಿ, ಸಿ.ಪಿ.ಮಾಡಳ್ಳಿ, ಮಲ್ಲೇಶಪ್ಪ ಲಮಾಣಿ, ವಿರುಪಾಕ್ಷಪ್ಪ ಅಣ್ಣಿಗೇರಿ, ಹನಮಂತಗೌಡ ಪಾಟೀಲ್, ಕುಮಾರ ಗಾವಿ, ಗೀತಾ ಪುರದ, ದ್ಯಾಮವ್ವ ಮೆಣಸಿನಕಾಯಿ, ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರ ಎಸ್.ಎಚ್.ಶ್ರೀನಿವಾಸ, ಸಹಾಯಕ ಕಾರ್ಯನಿರ್ವಾಹಕ ಎಂ.ಎಸ್.ದಿವಟರ್, ಸಹಾಯಕ ಇಂಜನೀಯರ್ ಅಬ್ದುಲ್ ಚಂದ್ರಗೌಡ ಪಾಟೀಲ್ ಇದ್ದರು.