ಮುಳಗುಂದ: ಸಮೀಪದ ಕಲ್ಲೂರ ಗ್ರಾಮದ 2ನೇ ವಾರ್ಡಿನ ಯಳವತ್ತಿ ರಸ್ತೆಯ ಚರಂಡಿಯಲ್ಲಿ ಸುಮಾರು ವರ್ಷಗಳಿಂದ ತುಂಬಿಕೊಂಡಿದ್ದ ಹೂಳು ಎತ್ತಿಸಿ ಸ್ವಚ್ಛತೆ ಕೈಗೊಂಡ ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ರಾಮರಡ್ಡಿ ಅವರ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.
ಸುಮಾರು 8 ವರ್ಷಗಳ ಹಿಂದೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿತ್ತು. ಅಕ್ಕಪಕ್ಕದವರ ವ್ಯಾಜ್ಯ ಕಾರಣ ಪಂಚಾಯ್ತಿ ಅವರು ಸ್ವಚ್ಛತೆಗೆ ಮುಂದಾಗಿರಲಿಲ್ಲ ಇದರಿಂದ ರಸ್ತೆಯಲ್ಲಿ ಕೆಸರು ತುಂಬಿ ಸಂಚಾರವೇ ಬಂದಾಗಿತ್ತು. ಕೊಳಚೆಯಿಂದ ದುರ್ನಾತವೂ ಹೆಚ್ಚಾಗಿತ್ತು. ಇಲ್ಲಿನವರು ಪಂಚಾಯ್ತಿಗೆ ಸಾಕಷ್ಟು ಮನವಿ ಕೊಟ್ಟರೂ ಸಹ ಯಾವುದೇ ಪ್ರಯೋಜವಾಗಿರಲಿಲ್ಲ. ಸದಸ್ಯ ಬಸವರಾಜ ಅವರು ಕೈಗೊಂಡ ಕೆಲಸದಿಂದ ಈಗ ಚರಂಡಿ ದುರಸ್ತಿ ಹಾಗೂ ಸಂಚಾರಕ್ಕೆ ರಸ್ತೆ ಮುಕ್ತವಾಗಿದೆ ಎಂದು ಗ್ರಾಮಸ್ಥರಾದ ದಿನೇಶ ಹಿರೇತಿಮ್ಮಣ್ಣವರ, ಬಸವಂತಪ್ಪ ಕರಕಣ್ಣವರ, ಚನ್ನಪ್ಪ ಹಿರೇತಿಮ್ಮಣ್ಣವರ, ದಿನೇಶ ಅಂಗಡಿ, ನಾಗಪ್ಪ ಸಂಶಿ ತಿಳಿಸಿದರು.
ಜನರ ಮನವೋಲಿಸಿ ವ್ಯಾಜ್ಯವನ್ನ ಬಗೆಹರಿಸಲಾಗಿದೆ. ಚರಂಡಿ ಹೂಳು ಎತ್ತಿಸಿ ರಸ್ತೆ ಸಂಚಾರ ಸುಗಮ ಮಾಡಿದ್ದೇವೆ. ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು, ಕೊಳಚೆ ನೀರು ಹರಿಯಲು ಇನ್ನುಳಿದ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವದು. ಎಂದು ಗ್ರಾ.ಪಂ ಸದಸ್ಯ ಬಸವರಾಜ ರಾಮರಡ್ಡಿ ಹೇಳಿದರು.
1 comment
Good selection
Man of Best