ಶಿರಹಟ್ಟಿ: ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರೆಯು ಕಳೆದ 3 ದಿನಗಳಿಂದ ಅತ್ಯಂತ ವೈಭವದಿಂದ ಜರುಗಿದ್ದು, ಗುರುವಾರ ಸಲಕ ವಾದ್ಯ ಮೇಳಗಳೊಂದಿಗೆ ದ್ಯಾಮವ್ವ ದೇವಿಯನ್ನು ಗುಡಿ ದುಂಬಿಸುವದರ ಮೂಲಕ ಜಾತ್ರೆಗೆ ಸಂಭ್ರಮದ ತೆರೆ ಎಳೆಯಲಾಯಿತು.

ಭಾವೈಕ್ಯೆತೆಗೆ ಹೆಸರಾದ ನಾಡಿದ ಐತಿಹಾಸ ಪ್ರಸಿದ್ಧ ಶ್ರೀ ಜ.ಫಕ್ಕೀರೇಶ್ವರ ಮಠದ ಖ್ಯಾತಿಯಂತೆ ತಾಯಿ ದ್ಯಾಮವ್ವನ ಮೂರ್ತಿ ಮೆರವಣಿಗೆಯಲ್ಲಿ ಜಾತಿ, ಮತ, ಪಂಥಗಳೆನ್ನದೇ ಪ್ರತಿಯೊಬ್ಬರು ಉಡಿ ತುಂಬಿ ಕೃಥಾರ್ತರಾಗುವ ದೃಶ್ಯಗಳು ಕಳೆದ 3 ದಿನಗಳಿಂದ ಸಾಮಾನ್ಯವಾಗಿತ್ತು.

ವಿವಿಧ ಬಗೆಯ ಪುಷ್ಪಗಳೊಂದಿಗೆ ಅಲಂಕರಿಸಿದ ಪಾಲಕಿಯಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡಿ ಪಟ್ಟಣದ ಪ್ರತಿಯೊಂದು ಬೀದಿಗಳಲ್ಲಿ ಭವ್ಯ ಮೆರವಣಿಗೆ ಸಾಗಿತ್ತು. ಊರಿನ ಪ್ರತಿಯೊಂದು ಮನೆಯವರು ವಿವಿಧ ತರನಾದ ಸಿಹಿ ಪದಾರ್ಥಗಳನ್ನು ಮಾಡಿ ಭಕ್ತಿಯಿಂದ ದೇವಿಗೆ ನೈವೇದ್ಯ ಅರ್ಪಿಸಿ ಭಕ್ತಿ ಮೆರೆಯುವ ಮೂಲಕ ಪಟ್ಟಣದ ಜನತೆ ಸೌಹಾರ್ದದ ನೆಲೆ ತೋರಿಸಿಕೊಟ್ಟರು. ಗ್ರಾಮ ದೇವಿ ದ್ಯಾಮವ್ವನ ದರ್ಶನಕ್ಕೆ ಉರಿ ಬಿಸಿಲು ಲೆಕ್ಕಿಸದೇ ಉತ್ಸಾಹದಿಂದ ತಂಡೋಪತಂಡವಾಗಿ ಜನ ಆಗಮಿಸುತ್ತಿರುವುದು ದೃಶ್ಯಗಳು ಕಂಡು ಬಂದಿತು.

ಜಾತ್ರೆಯ ಕೊನೆ ದಿನವಾದ ಗುರುವಾರ ಪಟ್ಟಣದ ಸಮಸ್ತ ಜನತೆ ದೇವಿಯನ್ನು ಬಡಿಗೇರ ಓಣಿಯಿಂದ ಮಧ್ಯಾಹ್ನ 12 ಘಂಟೆಗೆ ಕೋಟೆ ಓಣಿಯಯಲ್ಲಿರುವ ದೇವಿಯ ದೇವಸ್ಥಾನಕ್ಕೆ ಕರೆತಂದು ಸಾಯಂಕಾಲದವರಗೂ ಸಾರ್ವಜನಿಕ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು, ದೇವಿಯ ದರ್ಶನಕ್ಕೆ ಬಂದ ಜನರು ಪ್ರಸಾದವನ್ನು ಸ್ವೀಕರಿಸಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *

You May Also Like

ಬಿಎಂಟಿಸಿ ಪಾಸ್ ದರ ಇಳಿಕೆ: ಇನ್ಮುಂದೆ ಟಿಕೇಟ್ ಬದಲಾಗಿ ಪಾಸ್, ಯಾವುದಕ್ಕೆ ಎಷ್ಟು?

ಕೊನೆಗೂ ಪ್ರಯಾಣಿಕರ ಮನವಿಗೆ ಸ್ಪಂದಿಸಿದ ಬಿಎಂಟಿಸಿ ಪಾಸ್ ದರವನ್ನು ಇಳಿಕೆಗೆ ಮುಂದಾಗಿದೆ. ನಾಳೆಯಿಂದಲೇ ಹೊಸ ದರ ಅನ್ವಯವಾಗಲಿದೆ. ಹೀಗಾಗಿ ನಿತ್ಯ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ಗಳನ್ನೆ ನೆಚ್ಚಿಕೊಂಡಿದ್ದ ಲಕ್ಷಾಂತರ ಜನರಿಗೆ ಇಂದು ಬಿಎಂಟಿಸಿ ಸಿಹಿ ಸುದ್ದಿ ನಿಡಿದೆ.

ಮಳೆಗೆ ರಸ್ತೆ ಕುಸಿತ : ದುರಸ್ತೆಗೆ ಆಗ್ರಹ

ಮುಳಗುಂದ: ಸಮೀಪದ ನೀಲಗುಂದ ಹಾಗೂ ಅಂತೂರ ಬೆಂತೂರ ಗ್ರಾಮಗಳ ಮಧ್ಯೆ ಮಳೆಯಿಂದಾಗಿ ರಸ್ತೆ ಕುಸಿತವಾಗಿದ್ದು ಸುಗಮ ಸಂಚಾರಕ್ಕೆ ಅಡಿಯಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

ನಗರದ ಹೊರವಯದಲ್ಲಿರುವ ಪಶು ವೈದ್ಯಕೀಯ ಕಾಲೇಜು ಎದುರು ಚಾಲಯಕನ ನಿಯಂತ್ರನ ತಪ್ಪಿ ಟಿಪ್ಪರ ಪಲ್ಟಿಯಾಗಿದೆ.

ಡಾ.ಸಂಕನಗೌಡರ ಸಾಹಿತ್ಯದಿಂದ ಸಮಾಜ ಸುಧಾರಣೆ

ಸಾಮಾನ್ಯವಾಗಿ ವೈದ್ಯ, ವಕೀಲ, ಪೋಲೀಸ ಮೊದಲಾದ ಒತ್ತಡಭರಿತ ವೃತ್ತಿಯಲ್ಲಿ ಇರುವವರು ಕಥೆ, ಕಾದಂಬರಿ, ಕವಿತೆ, ನಾಟಕ, ಸಂಗೀತ, ಸಾಹಿತ್ಯ ಮೊದಲಾದವುಗಳಿಂದ ದೂರವಿರುತ್ತಾರೆ. ದೈನಂದಿನ ವೃತ್ತಿಯ ಒತ್ತಡ ಹಾಗೂ ಮತ್ತಿತರ ಕಾರಣಗಳಿಂದ ಸಾಹಿತ್ಯಾಭ್ಯಾಸದಿಂದ ದೂರವಿರುತ್ತಾರೆ ಅಥವಾ ಸಾಹಿತ್ಯವನ್ನು ಕಡೆಗಣಿಸಿರುತ್ತಾರೆ.