ನಿಂಗಪ್ಪ ಬಿ. ಮಡಿವಾಳರ

ನರೇಗಲ್: ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರುತ್ತಿದ್ದು, ಗೆಲುವಿಗಾಗಿ ಹಲವಾರು, ರೀತಿಯ ಹರಸಾಹಸ ಮಾಡುತ್ತಿದ್ದಾರೆ. ನರೇಗಲ್ ಹೋಬಳಿಯ ಹಳ್ಳಿಗಳಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯವಾಗಿತ್ತು. ಹೀಗಾಗಿ ಈಗಾಗಲೇ ಅಖಾಡ ಸಿದ್ಧವಾದಂತೆ ಕಾಣುತ್ತಿದೆ.

ಗ್ರಾಮ ಪಂಚಾಯ್ತಿ ಚುನಾವಣೆ ದಿನ ಘೋಷಣೆಯಾದ ದಿನದಿಂದ ನರೇಗಲ್ ಹೋಬಳಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಚುನಾವಣೆಯ ಕಣ ರಂಗೇರಿದ್ದು, ಒಟ್ಟು 302 ನಾಮಪತ್ರಗಳು ಸಲ್ಲಿಕೆಯಾಗಿವೆ. ಎಲ್ಲೆಡೆ ಮತದಾರರ ಓಲೈಕೆಯ ಪ್ರಯತ್ನಗಳು ಗರಿಗೆದರಿವೆ.

ಗ್ರಾಪಂ ಚುನಾವಣೆಗೆ ನಾಮ ಪತ್ರ ಸಲ್ಲಿಸಿದ ಅಭ್ಯರ್ಥಿಗಳು ಸೇರಿದಂತೆ ಅವರ ಕುಟುಂಬ ಸದಸ್ಯರು ಮೊದಲ ದಿನದಿಂದಲೇ ಗ್ರಾಮದ ಎಲ್ಲರ ಮನೆಗೆ ತೆರಳಿ ಒಂದು ಸುತ್ತಿನ ಮತ ಬೇಟೆಯ ಕಸರತ್ತು ಮುಗಿಸಿದ್ದಾರೆ. ಜತೆಗೆ ಗ್ರಾಮಗಳಲ್ಲಿ ಹೆಚ್ಚು ಮತ ಇರುವ ಕುಟುಂಬ, ಪ್ರಬಲ ಸಮುದಾಯಗಳ ಮುಖಂಡರಿಗೆ ಹಳ್ಳಿಗಳಲ್ಲಿ ಡಿಮ್ಯಾಂಡಪೋ.. ಡಿಮ್ಯಾಂಡು ಎನ್ನುವಂತಾಗಿದೆ.

ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣವಂತರು ಪದವಿದರರು ಸ್ಪರ್ಧೆಯಲ್ಲಿ ಕಂಡು ಬಂದಿರುವುದು ವಿಶೇಷವಾಗಿದೆ. ಯಾರೇ ಆಯ್ಕೆಯಾಗಲಿ ಗ್ರಾಮದ ಅಭಿವೃದ್ಧಿಯಾದರೆ ಸಾಕು. ಸಂಗಮೇಶ ಮೆಣಸಿಗಿ, ಸ್ಥಳೀಯರು

ಹೋಬಳಿಯ ಅಬ್ಬಿಗೇರಿ ಗ್ರಾಮ ಪಂಚಾಯ್ತಿಯಲ್ಲಿ 105 ನಾಮ ಪತ್ರ ಸಲ್ಲಿಕೆಯಾಗುವ ಮೂಲಕ ಶತಕದ ಗಡಿ ದಾಟಿದೆ. ಹಾಲಕೆರೆ ಗ್ರಾಮ ಪಂಚಾಯ್ತಿಗೆ 24 ನಾಮ ಪತ್ರ ಸಲ್ಲಿಕೆಯಾಗಿದ್ದರೆ ಅದೇ ಗ್ರಾಮದ 3ನೇ ವಾರ್ಡಿನಿಂದ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಉಳಿದಂತೆ ನಿಡಗುಂದಿ ಗ್ರಾಮ ಪಂಚಾಯ್ತಿಗೆ 35, ಮಾರನಬಸರಿ ಗ್ರಾಮ ಪಂಚಾಯ್ತಿಗೆ 50, ಜಕ್ಕಲಿ ಗ್ರಾಮ ಪಂಚಾಯ್ತಿಗೆ 46 ನಾಮಪತ್ರ ಸಲ್ಲಿಕೆಯಗಿವೆ. ಜಕ್ಕಲಿಯಲ್ಲಿ ಬಿ.ಕಾಂ ಹಾಗೂ ಬಿ.ಎ ಪದವಿದರ ನಾಮಪತ್ರ ಸಲ್ಲಿಸಿದ್ದು, ವಿಶೇಷವಾಗಿದೆ. ಹೊಸಳ್ಳಿ ಗ್ರಾಮ ಪಂಚಾಯ್ತಿಗೆ 42 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಆಯಾ ಭಾಗದ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾಮಗಳಲ್ಲಿರುವ ಪ್ರಮುಖ ಸಂಘಗಗಳು ಹಾಗೂ ಸಂಸ್ಥೆಗಳಿಗೆ ಇಂತಿಷ್ಟು ಕಾಣಿಕೆ ಸೇರಿದಂತೆ ಮತ್ತಿತರ ಸೌಲಭ್ಯ ಕಲ್ಪಿಸುವ ಭರವಸೆಯನ್ನು ಅಭ್ಯರ್ಥಿಗಳು ನೀಡಿದ್ದಾರೆ. ಹಾಗೆಯೇ ಮಹಿಳಾ ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ಸ್ತಿçÃಶಕ್ತಿ ಸಂಘಗಳ ಬಾಗಿಲು ತಟ್ಟುತ್ತಿದ್ದಾರೆ. ಹತ್ತಾರು ಭರವಸೆಯ ಮೂಲಕ ಮತಬೇಟೆಯ ತಂತ್ರಗಾರಿ ಹಳ್ಳಿ ಅಖಾಡದಲ್ಲಿ ನಡೆದಿದೆ.

ದುಡಿಯಲು ಹೋಗಿದ್ದ ಅದೇಷ್ಟೋ ಜನರು ಮತ್ತೇ ಊರಿಗೆ ಮರಳಿದ್ದಾರೆ. ಜನರಿಂದ ಗ್ರಾಮ ತುಂಬಿ ತುಳುಕುತ್ತಿದೆ.

Leave a Reply

Your email address will not be published. Required fields are marked *

You May Also Like

ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು: ಚಲಚಿತ್ರರಂಗದ ಹಿರಿಯ ನಟ ಆರೋಗ್ಯ ಸ್ಥಿತಿ ಗಂಭೀರ. ನಟ ಶಿವರಾಂ ಅವರ  ಆರೋಗ್ಯದಲ್ಲಿ ಏರುಪೇರಾದ…

ಗದಗನಲ್ಲಿ ಗೂಳಿ ಕಾಳಗ: ವಾಹನ ಸವಾರರ ಪರದಾಟ!

ನಗರದಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಾಗಿದೆ. ರಸ್ತೆಯ ಮಧ್ಯೆಯೇ ಪ್ರತಿ ದಿನ ಬಿಡಾಡಿ ದಿನಗಳ ಕಾದಾಟ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.

ನಗರ ಸಭೆ ಚುನಾವಣೆ: 27 ಮತ್ತು 18  ನೇ ವಾರ್ಡಿನಲ್ಲಿ ಕಾಂಗ್ರೇಸ್ಗೆ ಜಯ  7 ಮತ್ತು 12 ವಾರ್ಡನಲ್ಲ ಬಿಜೆಪಿ

ನಗರ ಸಭೆ ಚುನಾವಣೆ: 27 ಮತ್ತು 18  ನೇ ವಾರ್ಡಿನಲ್ಲಿ ಕಾಂಗ್ರೇಸ್ಗೆ ಜಯ  7 ಮತ್ತು…

ಫೆ.27,28 ರಂದು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 27 ಮತ್ತು 28 ರಂದು ಜಿಲ್ಲಾ ಸಾಹಿತ್ಯ ಭವನದಲ್ಲಿ ಜರುಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಶರಣು ಗೋಗೇರಿ ಹೇಳಿದರು.