ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನೇವರಿ ತಿಂಗಳಲ್ಲಿ ಜರುಗುವ ಗದಗ ಜಿಲ್ಲಾ 9 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಕಥೆಗಾರರ ಹಾಗೂ ಕವಿಗಳ ಪ್ರಾತಿನಿಧಿಕ ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರಲಾಗುತ್ತಿದೆ.
ಆಸಕ್ತ ಕಥೆಗಾರರು ಹಾಗೂ ಕವಿಗಳು ತಮ್ಮಇತ್ತೀಚಿನ ಎರಡು ಕಥೆ ಹಾಗೂ ಕವನಗಳನ್ನು ಕಥಾ ಸಂಕಲನದ ಸಂಪಾದಕರಾದ ಅಂದಾನೆಪ್ಪ ವಿಭೂತಿ ಸಂಪಾದಕರು ವಿಭೂತಿ ಮಾಸ ಪತ್ರಿಕೆ ಮಂಜುನಾಥ ನಗರ, ಬಿಎಸ್ಎನ್ಎಲ್ ಕಾರ್ಯಾಲಯ ಹಿಂದೆ ಬೆಟಗೇರಿ ದೂರವಾಣಿ ಸಂಖ್ಯೆ– 9480027451, ಕವಿಗಳು ಕವನ ಸಂಕಲನದ ಸಂಪಾದಕರಾದ ಡಾ.ರಾಜೇಂದ್ರ ಗಡಾದ, ಭಾವಸಂಗಮ, ಇರಾನಿ ಕಾಲೋನಿ ಹತ್ತಿರ, ವಿವೇಕಾನಂದ ನಗರ, ಗದಗ ದೂರವಾಣಿ ಸಂಖ್ಯೆ -9945701680, 25-12-2020ರೊಳಗೆ ಕಳುಹಿಸಿಕೊಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಶರಣು ಗೋಗೇರಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.