ಮುಂಡರಗಿ: ಸ್ಥಳೀಯ ಪುರಸಭೆಯ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ ಪಕ್ಷದಿಂದ ಕವಿತಾ ಉಳ್ಳಾಗಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಪ್ಪ ಚಿಕ್ಕಣ್ಣನವರ ಅವಿರೋಧ ಆಯ್ಕೆ ಆಗುವದರ ಮೂಲಕ ಮುಂಡರಗಿ ಪುರಸಭೆಯನ್ನು ಬಿ.ಜೆ.ಪಿ ಪಕ್ಷವು ಉಳಿಸಿಕೊಂಡಿದೆ.

ರಾಜ್ಯ ಚುನಾವಣೆ ಆಯೋಗದ ಅಡಿಯಲ್ಲಿ ದಿ.4 ರಂದು ನಡೆದ ಚುನಾವಣೆಯ ಪ್ರಕ್ರೀಯೆಯಲ್ಲಿ ಕಳೆದ 2 ವರ್ಷಗಳ ಹಿಂದೆ ನಡೆದ ಪುರಸಭೆಯ ಚುನಾವಣೆಯಲ್ಲಿ ಬಿಜೆಪಿಯಿಂದ 12 ಜನ ಕಾಂಗ್ರೆಸ್‌ನಿAದ 6 ಜನ ಜೆಡಿಎಸ್‌ನಿಂದ 1 ಹಾಗೂ ಪಕ್ಷೇತರಾಗಿ 4 ಒಟ್ಟು 23 ಜನ ಸದಸ್ಯರು ಆಯ್ಕೆಯಾಗಿದ್ದರು. ಆದರೆ ಪುರಸಭೆಯ ಅಧಿಕಾರ ನಡೆಸುವ ಸಂಪೂರ್ಣ ಬಹುಮತವನ್ನು ಬಿಜೆಪಿ ಪಕ್ಷವು ಹೊಂದಿದ್ದರು ಸಹ ಪಕ್ಷೇತರ 4 ಜನ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡಿದ್ದರಿAದ ಒಟ್ಟು 16 ಜನ ಸದಸ್ಯರ ಸಂಖ್ಯಾ ಬಲವನ್ನು ಹೊಂದಿರುವ ಬಿಜೆಪಿ ಪಕ್ಷವು ಸರ್ಕಾರದ ಮೀಸಲಾತಿ ಆಧಾರ ಮೇಲೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಬ ವರ್ಗ ಮಹಿಳಾ ಹಾಗೂ ಉಪಾಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗ ಇರುವ ಕಾರಣ ಸರ್ವಾನುಮತದಿಂದ ಅಧ್ಯಕ್ಷ ಸ್ಥಾನಕ್ಕೆ ಕವಿತಾ ಉಳ್ಳಾಗಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಪ್ಪ ಚಿಕ್ಕಣ್ಣವರ ಅವರನ್ನು ಆಯ್ಕೆ ಮಾಡಲಾಯಿತು. ಚುನಾವಣೆಯ ಅಧಿಕಾರಿಯಾಗಿ ತಹಶೀಲ್ದಾರ್ ಆಶಪ್ಪ ಪೂಜಾರ ಕಾರ್ಯನಿರ್ವಹಿಸಿದರು.

ಚುನಾವಣೆಯ ಪ್ರಕ್ರಿಯೇಯಲ್ಲಿ 22 ಪುರಸಭೆಯ ಸದಸ್ಯರು ಪಾಲ್ಗೊಂಡಿದ್ದರು. ಆದರೆ 23 ನೇ ವಾರ್ಡಿನ ಸದಸ್ಯರು ಮಾತ್ರ ಚುನಾವಣೆ ಪ್ರಕ್ರೀಯ ಮುಗಿದ ಮೇಲೆ ಸಭೆಗೆ ಭಾಗವಹಿಸಿದರು. ಚುನಾವಣೆಯ ಆಯ್ಕೆಯ ಸಭೆಯಲ್ಲಿ ಲೋಕಸಾಭಾ ಸದಸ್ಯ ಶಿವಕುಮಾರ ಉದಾಸಿ, ಶಾಸಕರಾದ ರಾಮಣ್ಣ ಲಮಾಣಿ, ಪುರಸಭೆಯ ಸದಸ್ಯರಾದ ಪ್ರಕಾಶ ಹಲವಾಗಲಿ, ಸುಮಾ ಬಳ್ಳಾರಿ, ಗಂಗಿಮಾಳವ್ವ ಮೋರನಾಳ, ಶಿವಪ್ಪ ಚಿಕ್ಕಣ್ಣನವರ, ತಿಮ್ಮಪ್ಪ ದಂಡಿನ, ಕವಿತಾ ಉಳ್ಳಾಗಡ್ಡಿ, ಶಾಂತವ್ವ ಕರಡಿಕೊಳ್ಳ, ಪವನಕುಮಾರ ಮೇಟಿ, ರುಕ್ಮಣಿ ಸುಣಗಾರ, ನಿರ್ಮಾಲಾ ಕೊರ್ಲಹಳ್ಳಿ, ಪ್ರಲ್ಲಾದ ಹೊಸಮನಿ, ನಾಗೇಂದ್ರಪ್ಪ ಹುಬ್ಬಳ್ಳಿ, ಶಿವಾನಂದ ಬಾರಕೇರ, ಜ್ಯೋತಿ ಹಾನಗಲ್, ವೀಣಾ ದೇವಿ ಸೋನಿ, ಲಿಂಗರಾಜಗೌಡ ಪಾಟೀಲ, ರೀಯಾನಬೇಗಂ ಕೆಲೂರ, ರಾಜಾಭಕ್ಷಿ ಬೇಟಗೇರಿ, ನಾಗರಾಜ ಹೊಂಬಗಟ್ಟಿ, ಮಹ್ಮದರಪೀಕ್ ಮುಲ್ಲಾ, ಸಂತೋಷ ಹಿರೇಮನಿ, ರೈಮನಸಾಬ ಮಲ್ಲನಕೇರಿ ಹಾಗೂ ಪುರಸಭೆಯ ಮುಖ್ಯಾಧಿಖಾರಿ ಡೊಂಬರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಬಿಜೆಪಿ ಸರ್ಕಾರದಲ್ಲಿ ಯೋಧರಿಗಿಲ್ಲ ಪ್ರಾಮುಖ್ಯತೆ : ಕಾಂಗ್ರೆಸ್ ಟೀಕೆ

ಬಿಜೆಪಿಯ ಹಮ್ ದೋ ಹಮಾರೆ ದೋ ಸರ್ಕಾರದಲ್ಲಿ ಅಂಬಾನಿಗಿರುವ ಪ್ರಾಮುಖ್ಯತೆ ಯೋಧರಿಗಿಲ್ಲ ಎಂದು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಟೀಕಿಸಿದೆ.

ರೈತರ ಜೀವನದ ಮೇಲೆ ಬರೆ ಎಳೆದಂತಾಗುತ್ತದೆ: ಟಿ.ಈಶ್ವರ ಆರೋಪ

ಪ್ರಸ್ತುತ ರಾಷ್ಟçದಲ್ಲಿ ನಡೆದಿರುವ ರೈತ ಚಳುವಳಿ ಹಾಗು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡೆಯ ಕುರಿತು ಕಾಂಗ್ರೆಸ್ ಮುಖಂಡ ಅರಣ್ಯ ಕೈಗಾರಿಕೆ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ ಅವರೊಂದಿಗೆ ಉತ್ತರಪ್ರಭ ಪ್ರತಿನಿಧಿ ಕೆ.ಸದಾನಂದ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ..

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ನಾಲ್ವರು

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಈರಣ್ಣ ಕಡಾಡಿ,…

ಡಿಕೆಸಿ ಅವರಿಗೇಕೆ ಈ ಸಂಶಯ

ಕುಂಬಳಕಾಯಿ ಕಳ್ಳ ಎಂದಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಡಿಕೆಸಿ ಅವರಿಗೆ ಏಕೆ ಈ ಸಂಶಯ ಎಂದು ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಪ್ರಶ್ನಿಸಿದೆ.