ವಿಶ್ವಸಂಸ್ಥೆ : ಕೊರೊನಾ ಆತಂಕದ ನಂತರ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ದೇಶಗಳಿಗೆ ವಿಶ್ವ ಬ್ಯಾಂಕ್ ಸಹಾಯಕ್ಕೆ ಮುಂದಾಗಿದೆ. 

ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ 12 ಶತಕೋಟಿ ಡಾಲರ್ ನಿಧಿಗೆ ಅನುಮೋದನೆ ನೀಡಿದೆ. ಔಷಧಿ, ಲಸಿಕೆ ಖರೀದಿ ಮತ್ತು ಬಿಡುಗಡೆ ಪ್ರಯೋಗ ಮತ್ತು ಚಿಕಿತ್ಸೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ವಿಶ್ವಬ್ಯಾಂಕ್ 12 ಶತಕೋಟಿ ಡಾಲರ್ ಅನ್ನು ಬಿಡುಗಡೆ ಮಾಡಲು ಸಹಿ ಹಾಕಿದೆ. 

ಕೊರೊನಾ ವೇಗ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಸುರಕ್ಷಿತ ಚಿಕಿತ್ಸೆಗಾಗಿ ವಿಶ್ವ ಬ್ಯಾಂಕ್‍ ನ 160 ಶತಕೋಟಿ ಡಾಲರ್ ಮೊತ್ತದ ಬೃಹತ್ ಯೋಜನೆಯ ಭಾಗವಾಗಿ ಅಭಿವೃದ್ದಿಶೀಲ ದೇಶಗಳಿಗೆ ಈ ಮೊತ್ತ ಈ ಮೊತ್ತ ಬಿಡುಗಡೆಯಾಗಲಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕೊರೊನಾ ನಿಯಂತ್ರಿಸುವಲ್ಲಿ ಸಾಕಷ್ಟು ಪ್ರಯತ್ನಿಸುತ್ತಿವೆ. ವಿಶ್ವಬ್ಯಾಂಕ್‍ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿವೆ. ಹೀಗಾಗಿ ಈ ದೇಶಗಳ ನೂರು ಕೋಟಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೆರವಾಗುವ ಉದ್ಧೇಶ ಹೊಂದಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. 

Leave a Reply

Your email address will not be published. Required fields are marked *

You May Also Like

ಆಂಟಿ ಎಂದಿದ್ದಕ್ಕೆ ಈ ರೀತಿ ಕೋಪ ಬರುತ್ತದೆಯೇ?

ಲಕ್ನೋ : ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಆಂಟಿ ಎಂದು ಕರೆದಿದ್ದಕ್ಕೆ ಹುಡುಗಿಯೊಬ್ಬಳಿಗೆ ಮಹಿಳೆ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ ನಡೆದಿದೆ.

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇನ್ನಿಲ್ಲ!

ನವದೆಹಲಿ : ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಇಂದು ವಿಧಿವಶರಾಗಿದ್ದಾರೆ.

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ.

ವರದಿ: ವಿಠಲ ಕೆಳೂತ್ ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ…

ಪೆಟ್ರೋಲ್ – ಡಿಸೇಲ್ ದರ ದುಬಾರಿಯಾಗಿದ್ದರ ಮಧ್ಯೆಯೂ ಈ ರಾಜ್ಯಗಳ ಜನತೆಗೆ ʼಬಿಗ್ ರಿಲೀಫ್ʼ

ದೇಶದಲ್ಲಿ ಏರುತ್ತಿರುವ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ಕೆಲವು ರಾಜ್ಯಗಳಲ್ಲಂತೂ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 100ರ ಗಡಿ ದಾಟಿದೆ. ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನ ದೂಷಿಸುತ್ತಲೇ ಇದೆ.