ತುಮಕೂರು: ಇಲ್ಲಿನ ವಿಶ್ವ ವಿದ್ಯಾಲಯ ವ್ಯಾಪ್ತಿಯ ಬಿಇಡಿ., ವಿದ್ಯಾರ್ಥಿಗಳ ಎರಡನೇ ಸೆಮಿಸ್ಟರ್ ಪರಿಕ್ಷೇಗಳನ್ನು ರದ್ದುಗೊಳಿಸಿ ಮುಂದಿನ ಸೆಮಿಸ್ಟರ್ ಗೆ ತೇರ್ಗಡೆ ಮಾಡಬೇಕು ಎಂದು ಒತ್ತಾಯಿಸಿ SFI ನಿಂದ ತುಮಕೂರು ವಿಶ್ವವಿದ್ಯಾಲಯದ ಮುಂದೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ಮಣಿದ ತುಮಕೂರು ವಿವಿಯ ಕುಲಸಚಿವ (ಪರೀಕ್ಷಾಂಗ) ಕೊಟ್ರೇಶ್ ಪ್ರತಿಭಟನೆಯ ಸ್ಥಳದಲ್ಲೇ ನಿರ್ಧಾರ ತೆಗೆದುಕೊಂಡು, ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು.

ಈ ಮೊದಲು ಈ ತಿಂಗಳ ಕೊನೆಯ ದಿನಾಂಕದೊಳಗೆ ಪರೀಕ್ಷಾ ಶುಲ್ಕ ಪಾವತಿಸಲು ಆದೇಶ ಮತ್ತು ಅಕ್ಟೋಬರ್ -19 ರಿಂದ ಬಿಇಡ್ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲು ತುಮಕೂರು ವಿವಿ ನಿರ್ಣಯಿಸಿತ್ತು. ಎಸ್ಎಫ್ಐ ಹೋರಾಟದಿಂದ ಈ ಆದೇಶಗಳನ್ನು ವಿಶ್ವವಿದ್ಯಾಲಯ ವಾಪಸ್ ಪಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ SFI ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ಇದು #SFI_ಹೋರಾಟಕ್ಕೆ ಸಂದ ಜಯ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಸ್ ಎಫ್ ಐ ಜಿಲ್ಲಾದ್ಯಕ್ಷ ಈ ಶಿವಣ್ಣ, ಡಿವೈಎಫ್ಐ ಮುಖಂಡ ಜಿ.ದರ್ಶನ್, ಬಿಇಡಿ ವಿದ್ಯಾರ್ಥಿಗಳಾದ ಲೋಕೇಶ್ ಸಿ, ಸೌಂದರ್ಯ, ಆಶಾ, ಕಿರಣ, ತಿಲಕ, ಮಹೇಶ್, ಪುಟ್ಟರಾಜು, ಹನುಮಂತರಾಜು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಮಕ್ಕಳಿಗೆ ಪ್ರೀತಿ ವಾತ್ಸಲ್ಯ ತೋರಿ-ಎಂ.ಎನ್.ಪದ್ಮಜಾ

ಚಿತ್ರವರದಿ: ಗುಲಾಬಚಂದ ಆರ್ ಜಾಧವಆಲಮಟ್ಟಿ : ಇದೀಗ ಪರೀಕ್ಷೆಗಳು ಸಮೀಪಿಸುತ್ತಿದ್ದು ಮಕ್ಕಳ ಆ ನಿಟ್ಟಿನಲ್ಲಿ ಕಠಿಣ…

ಖಾಸಗಿ‌ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರಿ ಶಿಕ್ಷಕರಿಗೆ ಮನವಿ

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಯ ಶಿಕ್ಷಕರು ತಮ್ಮ ಒಂದು ಅಥವಾ ಎರಡು ದಿನದ ಸಂಬಳವನ್ನು…

ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳೇನು..?

ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳೇನು..? ಪರೀಕ್ಷೆ ನಡೆಯುವ 1 ಗಂಟೆ 30 ನಿಮಿಷ ಮೊದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು.

ಶೈಕ್ಷಣಿಕ ರಂಗಕ್ಕೆ ಲಿಂ,ತೋಂಟದ ಸಿದ್ದಲಿಂಗ ಶ್ರೀಗಳ ಕೊಡುಗೆ ಅಮೋಘ – ಎಸ್.ಎಸ್.ಪಟ್ಟಣಶೆಟ್ಚರ

ವರದಿ : ಗುಲಾಬಚಂದ ಜಾಧವಆಲಮಟ್ಟಿ : ಧಾಮಿ೯ಕತೆಯ ವೈಚಾರಿಕ ನೆಲೆಯಿಂದ ಎಲ್ಲರನ್ನೂ ಪ್ರೀತಿಯಿಂದ ಕಂಡಿರುವ ಲಿಂಗೈಕ್ಯ…