ಲಕ್ಷ್ಮೇಶ್ವರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ನಿವಾಸ ಹಾಗೂ ಕಚೇರಿ ಮೇಲೆ ಸಿಬಿಐ ದಾಳಿ ಖಂಡಿಸಿ ಲಕ್ಷ್ಮೇಶ್ವರ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣ್ಣದ ಶಿಗ್ಲಿ ನಾಕಾದಲ್ಲಿ ಟೈರಗೆ ಬೆಂಕಿ ಹಂಚಿ ಪ್ರತಿಭಟನೆ ಮಾಡಿದರು.
ಲಕ್ಷ್ಮೇಶ್ವರ ಪಟ್ಟಣದಲ್ಲಿ ಅಖಿಲ ಕರ್ನಾಟಕ ಡಿ.ಕೆ.ಶಿ ಅಭಿಮಾನಿ ಬಳಗದಿಂದ ಶಿಗ್ಲಿ ವೃತ್ತದಲ್ಲಿ ಪ್ರತಿಭಟಿಸಿದರು.
ಈ ವೇಳೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಹಾಗೂ ಶ್ರೀಯೋಗಿ ಆದಿತ್ಯನಾಥ, ಉತ್ತರ ಪ್ರದೇಶದ ಮಹಿಳೆ ಮೇಲೆ ಅತ್ಯಾಚಾರ ಮುಚ್ಚುಹಾಕಲು ಹೊರಟಿರುವ ಬಿಜೆಪಿ ಸರಕಾಕ್ಕೆ ನಾಚಿಕೆ ಯಾಗಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಹತ್ತಿಕ್ಕಲು ಬಿಜೆಪಿ ರಣತಂತ್ರ ಮಾಡ್ತಿದೆ ಅಂತ ಆರೋಪಿಸಿದರು.
ಎಸಿಬಿ, ಸಿಬಿಐ ಸರ್ಕಾರದ ಕೈಗೊಂಬೆಯಾಗಿವೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದು ಹೀಗೆ ಮುಂದುವರೆದ್ರೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸಲಿದ್ದಾರೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಸ್.ಪಿ.ಬಳಿಗಾರ, ವಿ.ಜಿ.ಪಡಗೇರಿ, ಟಿ.ಈಶ್ವರ, ಜಯಕ್ಕ ಕಳ್ಳಿ, ವಿರುಪಾಕ್ಷಿ ನಂದೆಣ್ಣವರ, ರಾಮು ಗಡದವರ, ರಾಮು ಅಡಗಿನಮನಿ, ಭಾಗ್ರಶ್ರಿ ಬಾಬಣ್ಣ, ಲಕ್ಷ್ಮವ ಕುರಿ, ಚನ್ಬಪ್ಪ ಜಗಲಿ, ನೀಲಪ್ಪ ಶೆರಶೂರಿ, ವಿರೇಂದ್ರ ಪಾಟೀಲ್, ಶೇಖಣ್ಣ ಕಾಳಿ, ಅಬಜ್ಜ ರೀತಿ, ಸತೀಶ ಬಾರ್ಕಿ, ಬಾಬಣ್ಣ ಅಳವಂಡಿ, ಅಂಬರೀಶ ತೆಂಬದಮನಿ, ಎಂ.ಎಸ್.ದೊಡ್ಡಗೌಡ್ರು, ಶಾಹಾಭಜಾನ ಹವಾಲ್ದಾರ ಸೇರಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.