ಲಕ್ನೋ: ಬಾಬ್ರೀ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪು ಇಂದು ಹೊರ ಬಿದ್ದಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಆಪಾದಿತ ಎಲ್ಲಾ 32 ಮಂದಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಈ ಮೂಲಕ ಕೋರ್ಟ್ ನೀಡಿದ ಈ ತೀರ್ಪು ನಿಂದಾಗಿ 28 ವರ್ಷಗಳ ಸುದೀರ್ಘ ಪ್ರಕರಣಕ್ಕೆ ತೆರೆ ಎಳೆದಂತಾಗಿದೆ. ಹಾಗೇ ಪ್ರಕರಣದ ಪ್ರಮುಖ ದೋಷಿಗಳಾದ ಅಡ್ವಾಣಿ, ಉಮಾಭಾರತಿ, ಮುರುಳಿ ಮನೋಹರ್ ಜೋಷಿ ಸೇರಿದಂತೆ ಇತರರು ನಿರಾಳರಾಗಿದ್ದಾರೆ.

ಆರೋಪಿಗಳ ವಿರುದ್ದ ಸೂಕ್ತ ಸಾಕ್ಷ್ಯಗಳಿಲ್ಲದ ಕಾರಣ 32 ಜನರನ್ನು ಆರೋಪ ಮುಕ್ತ ಗೊಳಿಸುತ್ತಿರುವುದಾಗಿ ಲಕ್ನೋ ಸಿಬಿಐ ವಿಶೇಷ ಕೋರ್ಟ್ ತಿಳಿಸಿದೆ.

ತೀರ್ಪಿನ ಪ್ರಕಾರ ಮಸೀದಿ ದ್ವಂಸ ಕಾರ್ಯ ಆಕಸ್ಮಿಕ, ಉದ್ರಿಕ್ತ ಕರಸೇವಕರು ಮಸೀದಿ ದ್ವಂಸ ಮಾಡಿದ್ದಾರೆ, ನಾಯಕರು ಗಲಭೆ ತಡೆಯಲು ಮುಂದಾಗಿದ್ದರೇ ಹೊರತು ಅದಕ್ಕೆ ಪ್ರಚೋದನೆ ನೀಡಿಲ್ಲ. ಬಿಜೆಪಿ ಹಾಗೂ ಆರ್.ಎಸ್. ಎಸ್ ನಾಯಕರ ಪಾತ್ರ ಇದರಲ್ಲಿ ಇಲ್ಲ ಎಂಬ ವಿಚಾರಗಳನ್ನು ಉಲ್ಲೇಖಿಸಿ ತಮ್ಮ ತೀರ್ಪು ನೀಡಿದರು.

ಇಂದು ಮುಂಜಾನೆಯೇ ತೀರ್ಪು ಪ್ರಕಟಿಸಲು ಸಿದ್ದತೆ ನಡೆಸಿದ್ದ ಲಕ್ನೋ ಕೋರ್ಟ್ ಸಕಲ ಸಿದ್ದತೆ ಮಾಡಿಕೊಂಡಿತ್ತು. ಈ ಕಾರಣಕ್ಕೆ ಕೋರ್ಟ್ ಆವರಣದಲ್ಲೂ ಬಿಗಿ ಭದ್ರತೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

You May Also Like

ಮಟಕಾ ದೊರೆ ರತನ್ ಲಾಲ್ ಖತ್ರಿಯ ಓಪನ್ ಟು ಕ್ಲೋಸ್ ಕಥೆ ಇದು…!

ರತನ್ ಲಾಲ್ ಖತ್ರಿ.. ಈ ಹೆಸರು ದೇಶದ ಮಟಕಾ ಪ್ರೇಮಿಗಳಿಗೆ ಖಂಡಿತಾ ಚಿರಪರಿಚಿತವಾಗಿರತ್ತೆ. ಬೇಕಿದ್ದರೆ ನೀವು ದೇಶದ ಗ್ರಾಮದ ಯಾವುದೇ ಅನಕ್ಷರಸ್ಥನಿಗೆ ಕೇಳಿ ನೋಡಿ, ರತನ್ ಲಾಲ್ ಖತ್ರಿ ಎಂದರೆ ಓ!

ನಟಿಗೆ ಚಾಕುವಿನಿಂದ ಇರಿದ ಫೇಸ್ ಬುಕ್ ಗೆಳೆಯ!

ಮುಂಬಯಿ : ನಟಿ ಮಾಳವಿ ಮಲ್ಹೋತ್ರಾ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿರುವ ಘಟನೆ ನಡೆದಿದೆ.

ಯಮನೂರಪ್ಪನ ಉರಸು ಸಂಭ್ರಮ

ಮಸ್ಕಿ: ಇಲ್ಲಿನ ವಾಲ್ಮೀಕಿ ನಗರದಲ್ಲಿನ‌ ಯಮನೂರಪ್ಪನ ಉರಸು ಮೆರವಣಿಗೆ ನಡೆಸಿ ಸಂಭ್ರಮಿಸಲಾಯಿತು. 32ನೇ ವರ್ಷದ ಯಮನೂರಪ್ಪನ…

ವಿಶಾಖಪಟ್ಟಣ ದುರ್ಘಟನೆ: ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಇಲ್ಲಿನ ಗೋಪಾಲಪಟ್ಟಣದ, ನಾಯ್ಡು ತೋಟಾ ಸಮೀಪದ ಆರ್ ಆರ್ ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.